Home / ಕವನ / ಕವಿತೆ / ಸಾಹಿತ್ಯದಿಂದ ಯಾರೇನು ಬಯಸುತ್ತಾರೆ?

ಸಾಹಿತ್ಯದಿಂದ ಯಾರೇನು ಬಯಸುತ್ತಾರೆ?

ಸರಕಾರ ಬಯಸುತ್ತದೆ ಭಾವೈಕ್ಯ ಹಾಗೂ ರಾಷ್ಟ್ರಭಕ್ತಿ
ಆಸ್ತಿಕ ಮಹಾಶಯರು ಬಯಸುತ್ತಾರೆ ಭವಬಂಧದಿಂದ ಮುಕ್ತಿ
ಅಮೇರಿಕ ಮತ್ತು ರಷ್ಯ ಪರಸ್ಪರ ಧ್ವಂಸಗೊಳಿಸುವ ಅಸ್ತ್ರ
ಬಡ ದೇಶಗಳು ಬಯಸುತ್ತವೆ ಅನ್ನ ಮತ್ತು ವಸ್ತ್ರ
ವಿಮರ್ಶಕರು ಬಯಸುತ್ತಾರೆ ಸಾಮಾಜಿಕ ಹೊಣೆ
ಓದುಗರು ಬಯಸುತ್ತಾರೆ ಕಲ್ಪನೆಯ ಕವಣೆ
ಆಹ! ಬಯಸುತ್ತಾರೆ ಕೆಲವು ಲೇಖಕರು ಬರಿ ಕೀರ್ತಿ
ಇನ್ನು ಕೆಲವರು ಮುಗ್ಧ ಹೆಣ್ಣುಗಳಿಂದ ಸ್ಫೂರ್ತಿ
ಅಡಿಗರು ಬಯಸುತ್ತಾರೆ ಇಂದಿರಾ ಗಾಂಧಿಯ ವಿನಾಶ
ಹಾಗೂ ಶ್ರೀರಾಮಚಂದ್ರನಾಳಿದ ಸನಾತನ ದೇಶ
ಓದಲು ಬಾರದ ಹಳ್ಳಿಗರು ಬಯಸುತ್ತಾರೆ ಕಾಲಕಾಲಕ್ಕೆ ಮಳೆ
ಬಿತ್ತಿದ ಗದ್ದೆಗಳಲ್ಲಿ ತಿಂದು ಮುಗಿಯದಷ್ಟು ಬೆಳೆ

ಬಯಸುತ್ತಾರೆ! ಬಯಸುತ್ತಾರೆ! ಬಯಸದೆ ಇರುತ್ತಾರೆಯೆ?
ವೈಣಿಕರು ಬಯಸುತ್ತಾರೆ ಅಪರೂಪದ ರಾಗಗಳನ್ನು ವೈದ್ಯರು
ಬಯಸುತ್ತಾರೆ ಸಾಂಕ್ರಾಮಿಕ ರೋಗಗಳನ್ನು ದಾಮರು ಹಾಕುವವರು
ಬಯಸುತ್ತಾರೆ ದಟ್ಟ ನೆರಳಿನ ಮರಗಳನ್ನು ತಪಸ್ಸಿಗೆ ಕೂತ
ಭಕ್ತರು ಬಯಸುತ್ತಾರೆ ಕೋರಿದ ವರಗಳನ್ನು ಕೃಷಿಕರು
ಬಯಸುತ್ತಾರೆ ಫಲವತ್ತಾದ ಮಣ್ಣುಗಳನ್ನು ಅರೇಬಿಯದ ಶೇಖರು
ಬಯಸುತ್ತಾರೆ ಪ್ರತಿದಿನವೂ ಹೊಸ ಹೆಣ್ಣುಗಳನ್ನು ಕಾಸರಗೋಡಿನ
ಕನ್ನಡಿಗರು ಬಯಸುತ್ತಾರೆ ಕರ್ನಾಟಕದೊಂದಿಗೆ ಸೇರಿಕೆಯನ್ನು
ವ್ಯಾಪಾರಿಗಳು ಬಯಸುತ್ತಾರೆ ಸಕಲವಸ್ತುಗಳಿಗೂ ಬೆಲೆಯೇರಿಕೆಯನ್ನು
ಆಜನ್ಮ ಬ್ರಹ್ಮಚಾರಿಗಳು ಬಯಸುತ್ತಾರೆ ವೀರ್ಯನಿಗ್ರಹವನ್ನು
ಚೋರರು ಬಯಸುತ್ತಾರೆ ಕಂಚಿಕಾಮಾಕ್ಷಿಯ ವಿಗ್ರಹವನ್ನು
ಬಯಸುತ್ತಾರೆ! ಬಯಸುತ್ತಾರೆ! ಬಯಸದೆ ಇರುತ್ತಾರೆಯೆ ?

ಸರಕಾರ ಬಯಸುತ್ತದೆ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...