ಕೈಯಲ್ಲಿ ಕಡೆದಂತೆ ಜೀವನ

ಆಗಸದ ಮುಡಿಯಲ್ಲಿ ಒಡೆದ ಚಿಗುರು
ಸೌರಭವ ಮೈತುಂಬಾ ಹೊದೆದು
ನಳಿನವಿರು ತನುತಳೆದು
ಬಾಗುತಿದೆ ನೆಲದೆಡೆಗೆ ತುಳುಕಿ ಹಸಿರು

ನಂಬಿಕೆಯ ಹುತ್ತಕ್ಕೆ ಎರೆದ ಹಾಲು
ಹುತ್ತದ ನಡುವೆ ಮಲ್ಲಿಗೆ ಗಿಡ ಚಿಗುರಿಸುತ್ತ
ಈದೀಗ ಹೂ ಅರಳಿ ನಗುವ ಬೃಂದಾವನ

ಅಚ್ಚು ಹಾಕಿದ ಚಿತ್ರದಂತೆ ಹೊಲದ
ಅಂಚಿಗೆ ಕಣ್ಣರೆಪ್ಪೆ ಬಡಿಯುತ್ತ
ಮೃದುವಾದ ಗರಿಕೆ ಹುಲ್ಲನಷ್ಟೇ
ನಿರುಕಿಸುತ್ತಿದೆ ಎಳೆಗರು
ಎಳೆಯ ಗೊರಸಿಗೆ ಮೆಲ್ಲಗೆ ಪುಲಕಗೊಳ್ಳುತ್ತ
ಹೊಲದ ತುಂಬಾ ಹಬ್ಬಿದ ಕುರುಚಲ ನಡುವೆ
ಮೆತ್ತಗಿನ ನುಣುಪು ಹುಲ್ಲು
ತಾನೇತಾನೇ ಮೂಡುತ್ತಿದೆ.

ಮಜ್ಜಿಗೆಯ ಕಡೆದಂತೆಲ್ಲಾ ಉಕ್ಕುವ
ಬಿಳಿಯ ಬುರುಗಿನ ನೊರೆ
ಎದ್ದ ಬೊಬ್ಬೆಗಳು
ಪಟಪಟನೇ ಒಡೆದು ಮತ್ತೆ
ಉಕ್ಕಿ ಅರಳಿ ಬೆಸೆದು ಗಟ್ಟಿಗೊಳ್ಳುವ
ಮಥಿಸಿದಷ್ಟು ಕಡೆಗೋಲಿನ ವೇಗ ಹೆಚ್ಚುತ್ತ
ಶುಭ್ರವಾಗುವ ಬೆಣ್ಣೆ
ಕೈಯಲ್ಲಿ ಕಡೆದಂತೆ ಜೀವನ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿ
Next post ಕನ್ನಡಕ್ಕಾಗಿ ಕಂಠ ಕಟ್ಟಿದರು

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…