ಕೈಯಲ್ಲಿ ಕಡೆದಂತೆ ಜೀವನ

ಆಗಸದ ಮುಡಿಯಲ್ಲಿ ಒಡೆದ ಚಿಗುರು
ಸೌರಭವ ಮೈತುಂಬಾ ಹೊದೆದು
ನಳಿನವಿರು ತನುತಳೆದು
ಬಾಗುತಿದೆ ನೆಲದೆಡೆಗೆ ತುಳುಕಿ ಹಸಿರು

ನಂಬಿಕೆಯ ಹುತ್ತಕ್ಕೆ ಎರೆದ ಹಾಲು
ಹುತ್ತದ ನಡುವೆ ಮಲ್ಲಿಗೆ ಗಿಡ ಚಿಗುರಿಸುತ್ತ
ಈದೀಗ ಹೂ ಅರಳಿ ನಗುವ ಬೃಂದಾವನ

ಅಚ್ಚು ಹಾಕಿದ ಚಿತ್ರದಂತೆ ಹೊಲದ
ಅಂಚಿಗೆ ಕಣ್ಣರೆಪ್ಪೆ ಬಡಿಯುತ್ತ
ಮೃದುವಾದ ಗರಿಕೆ ಹುಲ್ಲನಷ್ಟೇ
ನಿರುಕಿಸುತ್ತಿದೆ ಎಳೆಗರು
ಎಳೆಯ ಗೊರಸಿಗೆ ಮೆಲ್ಲಗೆ ಪುಲಕಗೊಳ್ಳುತ್ತ
ಹೊಲದ ತುಂಬಾ ಹಬ್ಬಿದ ಕುರುಚಲ ನಡುವೆ
ಮೆತ್ತಗಿನ ನುಣುಪು ಹುಲ್ಲು
ತಾನೇತಾನೇ ಮೂಡುತ್ತಿದೆ.

ಮಜ್ಜಿಗೆಯ ಕಡೆದಂತೆಲ್ಲಾ ಉಕ್ಕುವ
ಬಿಳಿಯ ಬುರುಗಿನ ನೊರೆ
ಎದ್ದ ಬೊಬ್ಬೆಗಳು
ಪಟಪಟನೇ ಒಡೆದು ಮತ್ತೆ
ಉಕ್ಕಿ ಅರಳಿ ಬೆಸೆದು ಗಟ್ಟಿಗೊಳ್ಳುವ
ಮಥಿಸಿದಷ್ಟು ಕಡೆಗೋಲಿನ ವೇಗ ಹೆಚ್ಚುತ್ತ
ಶುಭ್ರವಾಗುವ ಬೆಣ್ಣೆ
ಕೈಯಲ್ಲಿ ಕಡೆದಂತೆ ಜೀವನ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿ
Next post ಕನ್ನಡಕ್ಕಾಗಿ ಕಂಠ ಕಟ್ಟಿದರು

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…