ಕವಿ

ಶಬ್ದಗಳ ಮರೆತರೆ ಹೇಗೆ ಕವಿತೆ
ಎಷ್ಟು ದೊಡ್ಡ ನದಿಗೂ ಬೇಕು ಒರತೆ

ಕವಿತೆಯೆಂಬುದಿಲ್ಲ ಹೊಳೆಯುವ ವರೆಗೆ
ಶಬ್ದಗಳ ಸಂಚು ಕವಿಯ ಬಗೆಗೆ

ಆದರು ತಿಳಿದವರು ಅದರ ಸೂತ್ರ
ಕೆಲವೇ ಮಂದಿ ಹಿರಿಯರು ಮಾತ್ರ

ಕತ್ತಲೆಯ ದಾರಿಯಲಿ ಎಡವಿದ ಕಲ್ಲು
ಅಥವ ಬಿದ್ದಾಗ ಮೈ ತಡವಿದ ಸೊಲ್ಲು

ಒಬ್ಬೊಬ್ಬರಿಗೆ ಒಂದೊಂದು ರೀತಿ
ಒದಗುವ ಅನಿರೀಕ್ಷಿತ ಪ್ರೀತಿ

ಅಥವ ಮಾತು ಬಿಡು ಆಗು ಮೌನಿ
ಹಿಡಿದು ನಿನ್ನೊಳಗೆ ಜಗತ್ತಿನ ಗ್ಲಾನಿ

ನದಿಗಳ ದಾಟು ದೇಶಗಳ ಸುತ್ತು
ಯಾರೂ ನೋಡದ ಬೆಟ್ಟಗಳ ಹತ್ತು

ಕುಳಿತು ಋಷಿಯಂತೆ ಎಷ್ಟೋ ಕಾಲ
ಚಿಂತಿಸು ಎಲ್ಲ ದುಃಖಗಳ ಮೂಲ

ಒಂದು ದಿನ ಬೆಳಕು ಹರಿಯುತಿದ್ದಂತೆ
ಕರಗುವುದು ಮಾಯೆ ಮಂಜಿನಂತೆ

ಮತ್ತೆ ಬಂದೇ ಬರುವೆ ನಮ್ಮ ಬಳಿಗೆ
ಮಾತು ಫಕ್ಕನೆ ಕಲಿತ ಮಗುವಿನ ಹಾಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧ್ಯಾನ
Next post ಕೈಯಲ್ಲಿ ಕಡೆದಂತೆ ಜೀವನ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…