ಕವಿ

ಶಬ್ದಗಳ ಮರೆತರೆ ಹೇಗೆ ಕವಿತೆ
ಎಷ್ಟು ದೊಡ್ಡ ನದಿಗೂ ಬೇಕು ಒರತೆ

ಕವಿತೆಯೆಂಬುದಿಲ್ಲ ಹೊಳೆಯುವ ವರೆಗೆ
ಶಬ್ದಗಳ ಸಂಚು ಕವಿಯ ಬಗೆಗೆ

ಆದರು ತಿಳಿದವರು ಅದರ ಸೂತ್ರ
ಕೆಲವೇ ಮಂದಿ ಹಿರಿಯರು ಮಾತ್ರ

ಕತ್ತಲೆಯ ದಾರಿಯಲಿ ಎಡವಿದ ಕಲ್ಲು
ಅಥವ ಬಿದ್ದಾಗ ಮೈ ತಡವಿದ ಸೊಲ್ಲು

ಒಬ್ಬೊಬ್ಬರಿಗೆ ಒಂದೊಂದು ರೀತಿ
ಒದಗುವ ಅನಿರೀಕ್ಷಿತ ಪ್ರೀತಿ

ಅಥವ ಮಾತು ಬಿಡು ಆಗು ಮೌನಿ
ಹಿಡಿದು ನಿನ್ನೊಳಗೆ ಜಗತ್ತಿನ ಗ್ಲಾನಿ

ನದಿಗಳ ದಾಟು ದೇಶಗಳ ಸುತ್ತು
ಯಾರೂ ನೋಡದ ಬೆಟ್ಟಗಳ ಹತ್ತು

ಕುಳಿತು ಋಷಿಯಂತೆ ಎಷ್ಟೋ ಕಾಲ
ಚಿಂತಿಸು ಎಲ್ಲ ದುಃಖಗಳ ಮೂಲ

ಒಂದು ದಿನ ಬೆಳಕು ಹರಿಯುತಿದ್ದಂತೆ
ಕರಗುವುದು ಮಾಯೆ ಮಂಜಿನಂತೆ

ಮತ್ತೆ ಬಂದೇ ಬರುವೆ ನಮ್ಮ ಬಳಿಗೆ
ಮಾತು ಫಕ್ಕನೆ ಕಲಿತ ಮಗುವಿನ ಹಾಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧ್ಯಾನ
Next post ಕೈಯಲ್ಲಿ ಕಡೆದಂತೆ ಜೀವನ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…