ಕವಿ

ಶಬ್ದಗಳ ಮರೆತರೆ ಹೇಗೆ ಕವಿತೆ
ಎಷ್ಟು ದೊಡ್ಡ ನದಿಗೂ ಬೇಕು ಒರತೆ

ಕವಿತೆಯೆಂಬುದಿಲ್ಲ ಹೊಳೆಯುವ ವರೆಗೆ
ಶಬ್ದಗಳ ಸಂಚು ಕವಿಯ ಬಗೆಗೆ

ಆದರು ತಿಳಿದವರು ಅದರ ಸೂತ್ರ
ಕೆಲವೇ ಮಂದಿ ಹಿರಿಯರು ಮಾತ್ರ

ಕತ್ತಲೆಯ ದಾರಿಯಲಿ ಎಡವಿದ ಕಲ್ಲು
ಅಥವ ಬಿದ್ದಾಗ ಮೈ ತಡವಿದ ಸೊಲ್ಲು

ಒಬ್ಬೊಬ್ಬರಿಗೆ ಒಂದೊಂದು ರೀತಿ
ಒದಗುವ ಅನಿರೀಕ್ಷಿತ ಪ್ರೀತಿ

ಅಥವ ಮಾತು ಬಿಡು ಆಗು ಮೌನಿ
ಹಿಡಿದು ನಿನ್ನೊಳಗೆ ಜಗತ್ತಿನ ಗ್ಲಾನಿ

ನದಿಗಳ ದಾಟು ದೇಶಗಳ ಸುತ್ತು
ಯಾರೂ ನೋಡದ ಬೆಟ್ಟಗಳ ಹತ್ತು

ಕುಳಿತು ಋಷಿಯಂತೆ ಎಷ್ಟೋ ಕಾಲ
ಚಿಂತಿಸು ಎಲ್ಲ ದುಃಖಗಳ ಮೂಲ

ಒಂದು ದಿನ ಬೆಳಕು ಹರಿಯುತಿದ್ದಂತೆ
ಕರಗುವುದು ಮಾಯೆ ಮಂಜಿನಂತೆ

ಮತ್ತೆ ಬಂದೇ ಬರುವೆ ನಮ್ಮ ಬಳಿಗೆ
ಮಾತು ಫಕ್ಕನೆ ಕಲಿತ ಮಗುವಿನ ಹಾಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧ್ಯಾನ
Next post ಕೈಯಲ್ಲಿ ಕಡೆದಂತೆ ಜೀವನ

ಸಣ್ಣ ಕತೆ

  • ಮೇಷ್ಟ್ರು ವೆಂಕಟಸುಬ್ಬಯ್ಯ

    ಪ್ರಕರಣ ೧೨ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…