Home / ಕವನ / ಕವಿತೆ / ಪ್ರೇಮ ಮತ್ತು ದುಃಖ

ಪ್ರೇಮ ಮತ್ತು ದುಃಖ

ಬಣ್ಣದ ಸಂಜೆಯನ್ನು
ನೋಡುತ್ತಾ ನಿಂತಿದ್ದೆ-
ನೋಡುತ್ತಿರುವಂತೆಯೆ
ಸಿಡಿಲ ಚೂರೊಂದು
ಉರಿದು ಕಪ್ಪಾಯಿತು.

ಮೊರೆಯುವ ಕಡಲನ್ನು
ನೋಡುತ್ತಾ ನಿಂತಿದ್ದೆ-
ನೋಡುತ್ತಿರುವಂತೆಯೆ
ತತ್ತರಿಸುವ ಅಲೆಯೊಂದು
ಎತ್ತರಕೆ ನೆಗೆದು ಕೆಳಗೆ ಬಿತ್ತು.

ಹೆಮ್ಮರವೊಂದನ್ನು
ನೋಡುತ್ತಾ ನಿಂತಿದ್ದೆ-
ನೋಡುತ್ತಿರುವಂತೆಯೆ
ಒಂದರ ಹಿಂದೊಂದು
ಎಲೆ ಉದುರಿ ಬೋಳಾಯಿತು.

ಹಸಿ ಮಣ್ಣಿನ ಮೇಲೆ
ನಡೆದು ಹೋಗುತ್ತಿದ್ದೆ-
ಹೋಗುತ್ತಿರುವಂತೆಯೆ
ಮುಳ್ಳೊಂದು
ಚುಚ್ಚಿ
ತಡೆದು ನಿಲ್ಲಿಸಿತು.

ಇಡಿಯಾಗಿ ಸೂರ್ಯನಿಗೆ
ಮೈಯೊಡ್ಡಿ ನಿಂತಿದ್ದೆ-
ನೋಡುತ್ತಿರುವಂತೆಯೆ
ಮೂಗಿನ ಮೇಲೊಂದು
ಹನಿ ಉರುಳಿ ಒದ್ದೆಯಾಯಿತು.

ಬಣ್ಣದ ಸಂಜೆ
ಉಕ್ಕುವ ಕಡಲು
ಉರಿಯುವ ಸೂರ್ಯ
ಮಣ್ಣು, ಮರ ಎಲ್ಲಾ
ಕಣ್ಣೊಳಗೆ ಹೂತು
ಯೌವನ ಮಾತಾಡಿತು
ಪ್ರೇಮವೆಂದು ಕರೆಯಿತು.

ಆಕಾಶವ ಸೀಳಿದ ಸಿಡಿಲು
ನೆಲಕಚ್ಚಿದ ಅಲೆ, ಎಲೆ
ಚುಚ್ಚಿ ನಿಲ್ಲಿಸಿದ ಮುಳ್ಳು
ಸಿಳ್ಳು ಹೊಡೆದು ಹಣೆಯ ಮೇಲೆ
ಬೆವರ ಪೋಣಿಸಿತು.

ಸೂರ್ಯ, ಕಡಲು, ಸಂಜೆ,
ಮರ, ಮಣ್ಣು ಎಲ್ಲಾ
ಕಣ್ಣೊಳಗೇ ಹಣ್ಣಾಯಿತು
ಮುಪ್ಪು ಅದನ್ನು
ದುಃಖವೆಂದು ಬರೆಯಿತು.


Tagged:

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...