Home / ಕವನ / ಕವಿತೆ / ಪ್ರೇಮ ಮತ್ತು ದುಃಖ

ಪ್ರೇಮ ಮತ್ತು ದುಃಖ

ಬಣ್ಣದ ಸಂಜೆಯನ್ನು
ನೋಡುತ್ತಾ ನಿಂತಿದ್ದೆ-
ನೋಡುತ್ತಿರುವಂತೆಯೆ
ಸಿಡಿಲ ಚೂರೊಂದು
ಉರಿದು ಕಪ್ಪಾಯಿತು.

ಮೊರೆಯುವ ಕಡಲನ್ನು
ನೋಡುತ್ತಾ ನಿಂತಿದ್ದೆ-
ನೋಡುತ್ತಿರುವಂತೆಯೆ
ತತ್ತರಿಸುವ ಅಲೆಯೊಂದು
ಎತ್ತರಕೆ ನೆಗೆದು ಕೆಳಗೆ ಬಿತ್ತು.

ಹೆಮ್ಮರವೊಂದನ್ನು
ನೋಡುತ್ತಾ ನಿಂತಿದ್ದೆ-
ನೋಡುತ್ತಿರುವಂತೆಯೆ
ಒಂದರ ಹಿಂದೊಂದು
ಎಲೆ ಉದುರಿ ಬೋಳಾಯಿತು.

ಹಸಿ ಮಣ್ಣಿನ ಮೇಲೆ
ನಡೆದು ಹೋಗುತ್ತಿದ್ದೆ-
ಹೋಗುತ್ತಿರುವಂತೆಯೆ
ಮುಳ್ಳೊಂದು
ಚುಚ್ಚಿ
ತಡೆದು ನಿಲ್ಲಿಸಿತು.

ಇಡಿಯಾಗಿ ಸೂರ್ಯನಿಗೆ
ಮೈಯೊಡ್ಡಿ ನಿಂತಿದ್ದೆ-
ನೋಡುತ್ತಿರುವಂತೆಯೆ
ಮೂಗಿನ ಮೇಲೊಂದು
ಹನಿ ಉರುಳಿ ಒದ್ದೆಯಾಯಿತು.

ಬಣ್ಣದ ಸಂಜೆ
ಉಕ್ಕುವ ಕಡಲು
ಉರಿಯುವ ಸೂರ್ಯ
ಮಣ್ಣು, ಮರ ಎಲ್ಲಾ
ಕಣ್ಣೊಳಗೆ ಹೂತು
ಯೌವನ ಮಾತಾಡಿತು
ಪ್ರೇಮವೆಂದು ಕರೆಯಿತು.

ಆಕಾಶವ ಸೀಳಿದ ಸಿಡಿಲು
ನೆಲಕಚ್ಚಿದ ಅಲೆ, ಎಲೆ
ಚುಚ್ಚಿ ನಿಲ್ಲಿಸಿದ ಮುಳ್ಳು
ಸಿಳ್ಳು ಹೊಡೆದು ಹಣೆಯ ಮೇಲೆ
ಬೆವರ ಪೋಣಿಸಿತು.

ಸೂರ್ಯ, ಕಡಲು, ಸಂಜೆ,
ಮರ, ಮಣ್ಣು ಎಲ್ಲಾ
ಕಣ್ಣೊಳಗೇ ಹಣ್ಣಾಯಿತು
ಮುಪ್ಪು ಅದನ್ನು
ದುಃಖವೆಂದು ಬರೆಯಿತು.


Tagged:

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್‍ ಚಂದ್ರ