ಇದೇನಿದು ಆಮ್ಲಮಳೆ !?

ಮಾನವ ಪ್ರಗತಿ ಹೊಂದಿದಂತೆ, ಹೊಸ ಆವಿಷ್ಕಾರಗಳು ಬಂದವು. ಈ ಅವಿಷ್ಕಾರಗಳಿಂದ ಜಗತ್ತಿನೆಲ್ಲೆಡೆ ಜನತೆಗೆ ಉಪಕಾರವಾಗುವುದೊಂದು ಕಡೆಯಾದರೆ ಆಪಾಯಗಳಾಗುವ ಭೀತಿಯೇ ಹೆಚ್ಚಾಗಿದೆ. ಈಗ ಪ್ರತಿದಿನ ಅಗಾಧ ಪ್ರಮಾಣದಲ್ಲಿ ಇಂಧನಗಳನ್ನು ಉರಿಸಲಾಗುತ್ತದೆ. ಭಾರಿ ವಿದ್ಯುತ್ ಸ್ಥಾವರಗಳಲ್ಪಿ ಸಣ್ಣ ಮತ್ತು ದೊಡ್ಡ ಕೈಗಾರಿಕೆ- ಗಳಲ್ಲಿ ಅಸಂಖ್ಯಾತ ವಾಹನಗಳಿಂದಾಗಿ, ನೆಲದೊಳಗಿನ ತೈಲ, ಅನಿಲ, ಕಲ್ಲಿದ್ದಲು ಇಂಧನಗಳನ್ನು ಮಿತಿಮೀರಿ ಬಳಸಲಾಗುತ್ತದೆ. ಈ ಹೊರಬರುವ ಹೊಗೆಯ ಜೊತೆಗೆ ಗಂಧಕದ ಡೈಯಾಕ್ಸೈಡ್ (S02) ಸಾರಜನಕ, ಇಂಗಾಲಗಳ ವಿವಿಧ ಬಗೆಯ ಆಕ್ಸೈಡ್‌ಗಳ ಉತ್ಪತ್ತಿಯಾಗಿ ಪರಿಸರದಲ್ಲಿ ಸೇರುತ್ತವೆ. ಇದರ ಜತೆಗೆ ವಿಷಾನಿಲಗಳು ಸೂಕ್ಷ್ಮಕಣಗಳಾಗಿ ಅಲ್ಲಲ್ಲೇ ತೇಲುತ್ತ ಕೊನೆಗೆ ಕೆಳಬಂದು ಭೂಮಿಗಿಳಿಯುತ್ತವೆ. ಗಿಡ, ಮರ ಕಟ್ಟಡಗಳ ಮೇಲೆ ಕಪ್ಪಾಗಿ (ಮಸಿ) ಮುಸುಕುತ್ತದೆ. ಮಳೆಬಂದಾಗ ಅಥವಾ ಇಬ್ಬನಿ ಸುರಿದಾಗ ತೇವಾಂಶದಲ್ಲಿ ಕರಗಿ ಆಮ್ಲವಾಗಿ ಬಿಡುತ್ತದೆ. ತನ್ನ ಸ್ಪರ್ಶಕ್ಕೆ ಸಿಲುಕುವ ಎಲ್ಲ ವಸ್ತುಗಳೊಂದಿಗೆ ಸಂಯೋಗ ನಡೆಯಿಸಿ ಕೊರೆಯಲಾರಂಭಿಸುತ್ತದೆ. ನಿಧಾನವಾಗಿ ವಸ್ತುಗಳು ಕರಗುವಂತೆ ಮಾಡುತ್ತದೆ. ಇದು ಮೋಡಗಳೊಡನೆಯೂ ಸೇರಿಕೊಳ್ಳುತ್ತದೆ. ವಿಷಾನಿಲವೂ ಸಹ ತೇಲುತ್ತ ಹೋಗಿ ಮೋಡಗಳೊಳಗೆ ಒಂದಾಗುತ್ತದೆ. ಈ ಮೋಡಗಳು ಭೂಮಿಗೆ ಮಳೆಯಾಗಿ ಸುರಿಯುವಾಗ ನೀರಿನ ಜತೆ ಮಿಶ್ರಣಗೊಂಡು ‘ಆಮ್ಲಮಳೆ’ಯಾಗಿ ಬಿಡುತ್ತದೆ.

ಗಂಧಕ, ಸಾರಜನಕ, ಹಾಗೂ ಇಂಗಾಲದ ವಿವಿಧ ಆಕ್ಸೈಡ್‌ಗಳ ಬಹುಭಾಗ ಮುಗಿಲಲ್ಲಿ ಏರುತ್ತ ಉನ್ನತ ಸ್ಥರದಲ್ಲಿ ವಾಯು ಪ್ರವಾಹದಲ್ಲಿ ಬೆರೆತು, ವಿವಿಧ, ವಿಭಿನ್ನ ಸಂಯುಕ್ತ ವಸ್ತುಗಳಾಗಿ ಮಾರ್ಪಟ್ಟು ಕೊನೆಗೆ ಮೋಡಗಳಲ್ಲಿ ಬೆರೆತುಕೊಳ್ಳುತ್ತದೆ. ಮಂಜಿನ ಕಣಗಳಲ್ಲಿ ಲೀನಗೊಂಡು ನೈಟ್ರಿಕ್ ಆಮ್ಲ ಕಾರ್ಬನಿಕ್ ಆಮ್ಲ್ತ್ರ ಗಂಧಕಾಮ್ಲ ರೂಪದಲ್ಲಿ ನೆಲವನ್ನು ತಲುಪಿ ಅನೇಕ ದುಷ್ಪರಿಣಾಮವನ್ನು ಮಾಡುತ್ತದೆ. ಇದರ ದುಷ್ಟರಿಣಾಮವಾಗಿಯೇ ಜಗತ್ತಿನ ಸುಂದರ ಶಿಲ್ಪಿಗಳು, ಕಟ್ಟಡಗಳು ಸೇತುವೆಗಳು ವಿರೂಪಗೊಳ್ಳುವುದಲ್ಲದೇ ಶಿಥಿಲಗೊಳ್ಳುತ್ತವೆ.

ಸುಂದರ ವಾಸ್ತುವೈಭವಗಳಾದ ತಾಜಮಹಲ್ (ಭಾರತ) ಅಥೇನ್ಸಿನ ಪಾರ್ಥೆನಾನ್, ರೋಮನ ಕೊಲೋಸಂ- ಗಳಂಥಹ ಅನುಪಮ ವಾಸ್ತುಶಿಲ್ಪಕಲಾ ವೈಭವಗಳು ಈ ಆಮ್ಲಮಳೆಯಿಂದಾಗಿ ನಿಧಾನವಾಗಿ ವಿರೂಪಗೂಳ್ಳುತ್ತವೆ. ಈ ಆಮ್ಲಮಳೆಯಿಂದಾಗಿ ಅಮೇರಿಕಾ, ಬ್ರಿಟನ, ಪ್ರಾನ್ಸ್, ಕೆನಡಾ ಇನ್ನು ಇತರ ದೇಶಗಳಲ್ಲಿಯ ಭೂಮಿ ನಿಸ್ಸಾರ- ಗೊಳ್ಳುತ್ತಲಿದೆ. ಈ ಆಮ್ಲದಿಂದಾಗಿ ಮನುಷ್ಯರ ಉಸಿರಾಟಕ್ಕೂ ಸಂಚಕಾರ ಬರುತ್ತದೆ. ಅಮ್ಲಮಳೆಗೆ ಮೂಲಕಾರಣ- ವಾದ ಸಾರಜನಕ, ಗಂಧಕ, ಕಾರ್ಬನ್‌ಡೈ ಆಕ್ಸೈಡ್ ವಾತಾವರಣಕ್ಕೆ ಬೆರೆಯದಂತೆ ಮಾಡುವುದೊಂದೇ ಈಗಿರುವ ಮಾರ್ಗ. ಕಲ್ಲಿದ್ಡಲುಗಳನ್ನು ಗಂಧಕ ರಹಿತವಾಗಿಸುವುದು, ಎಲ್ಲ ವಾಹನಗಳಲ್ಲಿ Catalytic Converter ಗಳನ್ನು ಅಳವಡಿಸಿ, ಅವುಗಳ ಹೊಗೆಯಲ್ಲಿ ಸಾರಜನಕ ಇಂಗಾಲಗಳನ್ನು ಕಡಿಮೆ ಮಾಡುವುದು, ಕೈಗಾರಿಕೆಗಳ ಹೊಗೆ- ಗಳನ್ನು ಶುದ್ಧೀಕರಿಸಿ ಬಿಡುವುಡು. ಈ ಕ್ರಮಗಳನ್ನು ಜಾರಿಗೆ ತಂದರೆ ಆಮ್ಲಮಳೆಯು ತನ್ನ ಕದಂಬ ಬಾಹುಗಳನ್ನು ಕತ್ತರಿಸಿಕೊಳ್ಳುತ್ತದೆ. ನೇರವಾಗಿ, ತಕ್ಷಣಕ್ಕೆ ಅಪಾಯ ಕಂಡು ಬರದಿದ್ಡರೂ ಇನ್ನೂ ಕೆಲವು ವರ್ಷಗಳಲ್ಲಿ ಜಗತ್ತಿನ ಅನೇಕ ಪಟ್ಟಣಗಳ ಮೇಲೆ ಆಮ್ಲಮಳೆ ಸುರಿದು ಸರ್ವನಾಶಗೊಳಿಸಬಹುದು.

೧೮೫೨ ರಲ್ಲಿಯೇ ಇಂಗ್ಲಿಂಡಿನ ಪ್ರಸಿದ್ಡ ರಸಾಯನ ಶಾಸ್ತ್ರಜ್ಞ ರಾಬರ್ಟ್ ಏಂಗಸ್‌ಸಿತ್, ಮ್ಯಾಂಚೆಸ್ಟರ್‌ನಲ್ಲಿ ಸುರಿದ ಮಳೆನೀರಿನಲ್ಲಿ ಅಸಾಧಾರಣವಾದ ಆಮ್ಲೀಯ ಮಟ್ಟ ಇದ್ದುದನ್ನು ಗುರುತಿಸಿದ್ದರು ೧೯೬೦ರಲ್ಲಿ ಸ್ವೀಡನ್ ತಜ್ಞ ಸ್ಟೇಂಟಿಓಡನ್ ಅವರು ‘ಆಮ್ಲಮಳೆ’ “ನಿಸರ್ಗದ ಮೇಲೆ ಮಾನವ ಹೂಡಿರುವ ಒಂದು ರಾಸಾಯನಿಕ ಸಮರ” ಎಂದು ಹೇಳಿದರು. ಈ ಮಾತು ಅಂದು ಸತ್ಯ ಮತ್ತು ಇಂದು, ಮುಂದೆದೂ ಸತ್ಯವಾಗಲಿದೆ.
******

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಳೆ ಬರಲಿ ಪ್ರೀತಿಯ ಬನಕೆ
Next post ಪರಮೇಚ್ಛೆ

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

cheap jordans|wholesale air max|wholesale jordans|wholesale jewelry|wholesale jerseys