ಡಿಸೆಂಬರಿನ ಚಳಿ

ಡಿಸೆಂಬರಿನ ಚಳಿ ಶತಮಾನ
ಕಳೆದರೂ ಇತಿಹಾಸ ಸ್ಪುರಿಸುತ್ತದೆ
ತೆಳು ಬಟ್ಟೆಯ ಮಕ್ಕಳ ಬೀದಿ
ಕಸಕ್ಕೆ ಬೆಂಕಿ ಹಚ್ಚುತ್ತ ಮೈಮನ
ಕಾಯಿಸಿಕೊಳ್ಳುತ್ತಿದ್ದಾರೆ. ಹೆತ್ತವರು
ಎಲ್ಲೆಲ್ಲೋ ಇದ್ದಾರೆ ಸೂರ್ಯ
ಹೊತ್ತು ಸಾಗಿದ್ದಾನೆ ಎಲ್ಲಾ ನಿಟ್ಟುಸಿರುಗಳ.

ಎತ್ತ ಪಯಣ ಎಂಬುದು ತಿಳಿಯದೇ
ಕೊರೆಯುವ ಚಳಿಯಲಿ ಗೂಡ ಅರಸಿ
ಹೊರಟಿವೆ ಬೆಳ್ಳಕ್ಕಿ ಸಾಲು, ಗೌಂವ್
ಎನ್ನುವ ಮಂಕು ಸಂಜೆಯಲಿ ಬದುಕು
ಬೀದಿ ದೀಪಗಳ ಕಣ್ಣು ತುಂಬಿಕೊಂಡು
ಕಳೆದು ರಾತ್ರಿಯ ಪಯಣ ಮುಂದುವರಿದು
ಚಿಕ್ಕಿಗಳು ಪರಿತಪಿಸುತ್ತಿವೆ ಪರಧಿಯಲಿ ಸಿಲುಕಿ.

ಅರಳಿ ಹೂವು ಬಿಳಿಯಾಗಿ ಬಿರಿಯಲು
ತಡೆದು ನಿಂತಿವೆ ಕರಿ ಹೊಲದ ತುಂಬ
ಮೊಗ್ಗೊಡೆದ ಹತ್ತಿ ಎದೆ ನಡುಗುವ ಚಳಿ
ಅಮ್ಮನ ಮೃದು ಸ್ಪರ್ಶದ ಕೈಗಳು ಬಿಡಿಸಲಿ
ಕ್ರೈಸ್ತನ ಶಿಲುಬೆಯ ಯಾತನೆಯ ಕ್ಷಣಗಳ
ದೂರದಿಂದ ಮುಸುಕು ಹಾಕಿದ ಎಲ್ಲ ನೀರವ
ಮಬ್ಬುಗಳ ಸವರಿ ಎದೆಗೆ ಅಮರುತ್ತವೆ
ಎಲ್ಲೋ ಬಸಿವ ನೆನಪುಗಳ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪರೀಕ್ಷಾ ಭಯಕ್ಕೆ ಪರಿಹಾರ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೫೧

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…