ಡಿಸೆಂಬರಿನ ಚಳಿ

ಡಿಸೆಂಬರಿನ ಚಳಿ ಶತಮಾನ
ಕಳೆದರೂ ಇತಿಹಾಸ ಸ್ಪುರಿಸುತ್ತದೆ
ತೆಳು ಬಟ್ಟೆಯ ಮಕ್ಕಳ ಬೀದಿ
ಕಸಕ್ಕೆ ಬೆಂಕಿ ಹಚ್ಚುತ್ತ ಮೈಮನ
ಕಾಯಿಸಿಕೊಳ್ಳುತ್ತಿದ್ದಾರೆ. ಹೆತ್ತವರು
ಎಲ್ಲೆಲ್ಲೋ ಇದ್ದಾರೆ ಸೂರ್ಯ
ಹೊತ್ತು ಸಾಗಿದ್ದಾನೆ ಎಲ್ಲಾ ನಿಟ್ಟುಸಿರುಗಳ.

ಎತ್ತ ಪಯಣ ಎಂಬುದು ತಿಳಿಯದೇ
ಕೊರೆಯುವ ಚಳಿಯಲಿ ಗೂಡ ಅರಸಿ
ಹೊರಟಿವೆ ಬೆಳ್ಳಕ್ಕಿ ಸಾಲು, ಗೌಂವ್
ಎನ್ನುವ ಮಂಕು ಸಂಜೆಯಲಿ ಬದುಕು
ಬೀದಿ ದೀಪಗಳ ಕಣ್ಣು ತುಂಬಿಕೊಂಡು
ಕಳೆದು ರಾತ್ರಿಯ ಪಯಣ ಮುಂದುವರಿದು
ಚಿಕ್ಕಿಗಳು ಪರಿತಪಿಸುತ್ತಿವೆ ಪರಧಿಯಲಿ ಸಿಲುಕಿ.

ಅರಳಿ ಹೂವು ಬಿಳಿಯಾಗಿ ಬಿರಿಯಲು
ತಡೆದು ನಿಂತಿವೆ ಕರಿ ಹೊಲದ ತುಂಬ
ಮೊಗ್ಗೊಡೆದ ಹತ್ತಿ ಎದೆ ನಡುಗುವ ಚಳಿ
ಅಮ್ಮನ ಮೃದು ಸ್ಪರ್ಶದ ಕೈಗಳು ಬಿಡಿಸಲಿ
ಕ್ರೈಸ್ತನ ಶಿಲುಬೆಯ ಯಾತನೆಯ ಕ್ಷಣಗಳ
ದೂರದಿಂದ ಮುಸುಕು ಹಾಕಿದ ಎಲ್ಲ ನೀರವ
ಮಬ್ಬುಗಳ ಸವರಿ ಎದೆಗೆ ಅಮರುತ್ತವೆ
ಎಲ್ಲೋ ಬಸಿವ ನೆನಪುಗಳ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪರೀಕ್ಷಾ ಭಯಕ್ಕೆ ಪರಿಹಾರ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೫೧

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…