ಬಾ ಬಾ ಬಾರೆ ಕೋಗಿಲೆ

ಬಾ ಬಾ ಬಾರೆ ಕೋಗಿಲೆ
ಎಲೆ ಮರೆಯಲಿ ಕುಳಿತಿರುವೆ ಏಕೆ||

ಬೆಳದಿಂಗಳ ಕೆಳೆಯಲಿ
ಮಿಥಿಲೆಯು ನಿನ್ನ ಸ್ವಾಗತಿಸಲು
ಸನ್ನದ್ಧವಾಗಿದೆ||

ಒಲವಿನಾಸರೆಯ ಬಾಳಿಗೆ
ಇಂದೇ ಬರುವುದು ಚೈತ್ರ
ನಾಳೆಗಾಗಿ ಕಾಯುವೆ ಏಕೆ||

ಶ್ರೀರಾಮ ಬರುವನೇ ರಘುರಾಮ
ಬಂದಿಹನೆ ಮುನಿಸೇಕೆ ಜಾಣೆ||

ಕಾದಿಹವು ವನಸುಮಗಳು
ನಿನ್ನ ಬರುವಿಕೆಗಾಗಿ
ಅಂತಃಕರಣ ಭಾವವನು ಕೇಳಲು||

ಮೂಡಿಹನೇ ರವಿತೇಜ
ವೈಭವದಿ ಪ್ರಕೃತಿಯು
ನೀನೇಕೆ ಮುನಿಸಿಕೊಂಡಿಹೆ ಹೇಳೆ||

ಸೀತಾ ಸಮೇತ ಲಕ್ಷಣ ಸಹಿತ
ಹನುಮಧ್ವಜರು ಬಂದಿಹರು
ಸ್ವರ್‍ಗವಾಗಿಹ ಮಿಥಿಲಾ
ಕಳೆಗುಂದಿದೆ ನಿನ್ನ ಕಾಣದೆ
ನಿನ್ನ ಹಾಡು ಕೇಳದೆ||

ಜನುಮದಾ ಪುಣ್ಯಫಲ
ಜನ್ಮ ಮುಕ್ತ ಸ್ತ್ರೀ ಧರೆಯು
ಎನ್ನ ಮಾತ ಕೇಳೆ ಹಕ್ಕಿಯು
ಪಂಜರ ಎಂಬ ಮನುಜ
ಮಾತು ಕೇಳಲೇಕೆ||

ದಿಟ್ಟತನ ತೋರಿ ಸ್ವಾರ್‍ಥವನಳಿಸಿ
ನಿಸ್ವಾರ್‍ಥದ ನಿನ್ನ ಸಿರಿತನದ
ದನಿಯ ಇಂಪಿಗೆ ತಣಿಸು ಶ್ರೀರಾಮನ||

ಕೊಟ್ಟಾರೆ ಕೊಡುವನು ನಿನ್ನ
ದನಿಯ ಕೇಳಿ ವರವನು
ಶ್ರೀರಾಮನವ ಕರುಣಾಧೀನ ಪುರುಷೋತ್ತಮನು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಶ್ನೆ-ಪ್ರತಿಕ್ರಿಯೆ
Next post ಲಂಚಾವತಾರ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…