ಬಾ ಬಾ ಬಾರೆ ಕೋಗಿಲೆ

ಬಾ ಬಾ ಬಾರೆ ಕೋಗಿಲೆ
ಎಲೆ ಮರೆಯಲಿ ಕುಳಿತಿರುವೆ ಏಕೆ||

ಬೆಳದಿಂಗಳ ಕೆಳೆಯಲಿ
ಮಿಥಿಲೆಯು ನಿನ್ನ ಸ್ವಾಗತಿಸಲು
ಸನ್ನದ್ಧವಾಗಿದೆ||

ಒಲವಿನಾಸರೆಯ ಬಾಳಿಗೆ
ಇಂದೇ ಬರುವುದು ಚೈತ್ರ
ನಾಳೆಗಾಗಿ ಕಾಯುವೆ ಏಕೆ||

ಶ್ರೀರಾಮ ಬರುವನೇ ರಘುರಾಮ
ಬಂದಿಹನೆ ಮುನಿಸೇಕೆ ಜಾಣೆ||

ಕಾದಿಹವು ವನಸುಮಗಳು
ನಿನ್ನ ಬರುವಿಕೆಗಾಗಿ
ಅಂತಃಕರಣ ಭಾವವನು ಕೇಳಲು||

ಮೂಡಿಹನೇ ರವಿತೇಜ
ವೈಭವದಿ ಪ್ರಕೃತಿಯು
ನೀನೇಕೆ ಮುನಿಸಿಕೊಂಡಿಹೆ ಹೇಳೆ||

ಸೀತಾ ಸಮೇತ ಲಕ್ಷಣ ಸಹಿತ
ಹನುಮಧ್ವಜರು ಬಂದಿಹರು
ಸ್ವರ್‍ಗವಾಗಿಹ ಮಿಥಿಲಾ
ಕಳೆಗುಂದಿದೆ ನಿನ್ನ ಕಾಣದೆ
ನಿನ್ನ ಹಾಡು ಕೇಳದೆ||

ಜನುಮದಾ ಪುಣ್ಯಫಲ
ಜನ್ಮ ಮುಕ್ತ ಸ್ತ್ರೀ ಧರೆಯು
ಎನ್ನ ಮಾತ ಕೇಳೆ ಹಕ್ಕಿಯು
ಪಂಜರ ಎಂಬ ಮನುಜ
ಮಾತು ಕೇಳಲೇಕೆ||

ದಿಟ್ಟತನ ತೋರಿ ಸ್ವಾರ್‍ಥವನಳಿಸಿ
ನಿಸ್ವಾರ್‍ಥದ ನಿನ್ನ ಸಿರಿತನದ
ದನಿಯ ಇಂಪಿಗೆ ತಣಿಸು ಶ್ರೀರಾಮನ||

ಕೊಟ್ಟಾರೆ ಕೊಡುವನು ನಿನ್ನ
ದನಿಯ ಕೇಳಿ ವರವನು
ಶ್ರೀರಾಮನವ ಕರುಣಾಧೀನ ಪುರುಷೋತ್ತಮನು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಶ್ನೆ-ಪ್ರತಿಕ್ರಿಯೆ
Next post ಲಂಚಾವತಾರ

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…