ಬಾ ಬಾ ಬಾರೆ ಕೋಗಿಲೆ

ಬಾ ಬಾ ಬಾರೆ ಕೋಗಿಲೆ
ಎಲೆ ಮರೆಯಲಿ ಕುಳಿತಿರುವೆ ಏಕೆ||

ಬೆಳದಿಂಗಳ ಕೆಳೆಯಲಿ
ಮಿಥಿಲೆಯು ನಿನ್ನ ಸ್ವಾಗತಿಸಲು
ಸನ್ನದ್ಧವಾಗಿದೆ||

ಒಲವಿನಾಸರೆಯ ಬಾಳಿಗೆ
ಇಂದೇ ಬರುವುದು ಚೈತ್ರ
ನಾಳೆಗಾಗಿ ಕಾಯುವೆ ಏಕೆ||

ಶ್ರೀರಾಮ ಬರುವನೇ ರಘುರಾಮ
ಬಂದಿಹನೆ ಮುನಿಸೇಕೆ ಜಾಣೆ||

ಕಾದಿಹವು ವನಸುಮಗಳು
ನಿನ್ನ ಬರುವಿಕೆಗಾಗಿ
ಅಂತಃಕರಣ ಭಾವವನು ಕೇಳಲು||

ಮೂಡಿಹನೇ ರವಿತೇಜ
ವೈಭವದಿ ಪ್ರಕೃತಿಯು
ನೀನೇಕೆ ಮುನಿಸಿಕೊಂಡಿಹೆ ಹೇಳೆ||

ಸೀತಾ ಸಮೇತ ಲಕ್ಷಣ ಸಹಿತ
ಹನುಮಧ್ವಜರು ಬಂದಿಹರು
ಸ್ವರ್‍ಗವಾಗಿಹ ಮಿಥಿಲಾ
ಕಳೆಗುಂದಿದೆ ನಿನ್ನ ಕಾಣದೆ
ನಿನ್ನ ಹಾಡು ಕೇಳದೆ||

ಜನುಮದಾ ಪುಣ್ಯಫಲ
ಜನ್ಮ ಮುಕ್ತ ಸ್ತ್ರೀ ಧರೆಯು
ಎನ್ನ ಮಾತ ಕೇಳೆ ಹಕ್ಕಿಯು
ಪಂಜರ ಎಂಬ ಮನುಜ
ಮಾತು ಕೇಳಲೇಕೆ||

ದಿಟ್ಟತನ ತೋರಿ ಸ್ವಾರ್‍ಥವನಳಿಸಿ
ನಿಸ್ವಾರ್‍ಥದ ನಿನ್ನ ಸಿರಿತನದ
ದನಿಯ ಇಂಪಿಗೆ ತಣಿಸು ಶ್ರೀರಾಮನ||

ಕೊಟ್ಟಾರೆ ಕೊಡುವನು ನಿನ್ನ
ದನಿಯ ಕೇಳಿ ವರವನು
ಶ್ರೀರಾಮನವ ಕರುಣಾಧೀನ ಪುರುಷೋತ್ತಮನು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಶ್ನೆ-ಪ್ರತಿಕ್ರಿಯೆ
Next post ಲಂಚಾವತಾರ

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…