ಒಂದೊಂದು ಹೂವಿನ ದಳ

ಒಂದೊಂದು ಹೂವಿನ
ದಳದಲ್ಲೂ ನೂರೊಂದು
ಭಾವನೆ ಏಕೋ ಏನೋ
ಹೇಳುತಿದೆ ಅದರದೇ ಬವಣೆ||

ಯಾರು ಯಾರಿಗೆ ಸಿಗುವ
ಹೂವು ಅರಳಿ ಬಾಡಿ
ದಳಗಳು ಬೆಸೆದು ನೆಲದಲಿ
ಹಸಿರ ಸೇರಿ ಮುಕ್ತವಾದಂತೆ||

ಮುಕ್ತವಾದ ದಳಗಳು
ಹೊಸದೊಂದು ಜೀವನ
ಕಟ್ಟಿ ಬೆಳೆದ ಪೈರಿಗೆ
ಮನಸಾರೆ ಹಾಡ ಕಟ್ಟಿ ನಲಿದಂತೆ||

ಸ್ವಚ್ಛಂದ ಚಂದದ ಹಸಿರು
ಬಸಿರಾಗಿ ಉಸಿರಿನ ಅಲೆಗಳು
ಬವಣೆ ಹೊತ್ತ ಮನಸಿಗೆ
ಸುಖದ ಸೋಪಾನ ಹಾಸಿದಂತೆ||

ಹೂ ಮನಸುಗಳು
ಹೂವಿನ ಸೊಬಗಿಗೆ ಮಾರು
ಹೋಗಿ ಹೂ ಕಟ್ಟಿ ಮಾಲೆಯಾಗಿಸಿ
ವಧುವರರ ಸಿಂಗರಿಸಿದಂತೆ||

ಹೃದಯ ಕಮಲದಾ ಸ್ಪರ್‍ಶವು
ಹೂವಿನ ದಳಗಳು ನಗುವಿನ
ಮೊಗ ತಳೆದು ಬದುಕು
ಬವಣೆಗೆ ಸೆರೆಯಾಗಿ ನಗುವಂತೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಂಡದ ಕರುಳು ಕಪಿಲ್‍ದೇವ್
Next post ಹೆಣ್ಣು

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…