ಸಾಂಗತ್ಯ

ಕಪ್ಪು ಮಣ್ಣ ನೆಲದಲಿ ಘಮ್ಮೆಂದು
ಸೂಸಿ ತೇಲುವ ಎಳೆ ಹಾಲು ತುಂಬಿ
ಜೋಳದತೆನೆಗಳ ಅರಿವಿಗೆ ಪರಿವಿಗೆ
ಮೊಗ್ಗೊಡೆದು ಜೀವದ ಹರವಿಗೆ ಗಾಳಿ
ಜೇಕು ಹಾಕುತ್ತಿದೆ ತಣ್ಣನೆಯ ಸ್ಪರ್ಶ
ಜೀವದಾಳಕೆ ಇಳಿಯಲು ಕಾಯಬೇಕು.

ಯಾರು ಹುಕುಂ ಮಂಜೂರ ಮಾಡಿದರು
ಮೊಳಕೆಯೊಡದೆ ಮರ್ಮರಗಳ ಕಂಪನ

ಒಳಗಿನಿಂದ ಅರಳಿ ಹಸಿರಾಗಿ ಉಸಿರಾಗಿ
ನೋಟವಾಗಿ ತೋಟಿಗೆ ಬೀಸಿ ಎಲೆ ಅಲೆ
ಗಳಲಿ ಬೆಳಕು ಪ್ರತಿಫಲಿಸಿ ಜೀವಸ್ಪರ್ಶ
ಆಕಾರಗಳ ಸಾಕಾರಗಳ ಸಾಲು ಸಾಲು ತೆನೆ
ಕುರುಹು ಹಿಡಿಯಲು ಹಕ್ಕಿಗಳು ಹಾರಬೇಕು

ಧಗೆಯ ಬಗೆಯ ನೆಲದ ಬೇರು ಕಲ್ಲು
ಕೊನರು ದಾಟ ಕುರುಹುಗಳ ನಭ
ನಾಭಿಯ ಸೆಳೆತದ ಅಲೆ ಜೀವ ಬಂದು
ಪಿಸುಗುಟ್ಟಿದ ಕ್ಷಣ ಮಿಂದು ಬೆಂದ
ಎದೆ ಹುಟ್ಟು ಸಹಜ ಬಯಲು ಮರ
ಚಿಗುರು ಹಗುರ ರಾಗ ಅನುರಾಗ
ಹೂವಗಂಧ ಮೋಡ ಮಳೆ ಅಂಬರಕೆ ನೀಲಿ ತುಂಬ ಬೇಕು.

ಕಣ್ಣಂಚಿನಲಿ ಬಿರಿದ ತಾವರೆ ಬಿಂಬ ಹಾಡಿ
ಮುತ್ತಿಕ್ಕಿದ ಸ್ವಾತಿ ಹಕ್ಕಿಕೊರಳೊಳಗೆ ಇಳಿದ ತೋಡಿ
ರಾಗ ಭಾವಕೆ ಬಿರಿದ ಮಲ್ಲೆ ಮೊಗ್ಗು ಜಾಜಿ ಸಂಪಿಗೆ
ನೆಲದಲಿ ಅರಳಿದ ಪ್ರಸಾದ ಜೀವ ತುಂಬಿ
ಹಕ್ಕಿ ಹಾಡು ಇಳಿದು ಇಳಿದು ಮಿಡಿತ
ಸದ್ದು ಒಳಗೂ ಹೊರಗೂ ಬೆಳೆದು
ಬಸಿರುಕಟ್ಟಿ ಬಯಲು ಆಲಯದೊಳಗೆ ಸಾಂಗತ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಂಟು ನೆಪ
Next post ಬದುಕು-ಬಣ್ಣ

ಸಣ್ಣ ಕತೆ

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…