ಯಶೋಧೆ ಕಂದ

ಯಶೋಧೆ ಕಂದ ಕೃಷ್ಣನಿಗೆ
ಹೇಳುತ್ತಿದ್ದಳು ಪುಟ್ಟ ಹತ್ತ ಬೇಡ
ಯದುಗಿರಿಯ ಬೆಟ್ಟ ಅದರ ಮೇಲೆ
ಕೂಡಲಿ ಹಾಯಾಗಿ ಬಣ್ಣ ಬಣ್ಣದ ಹಕ್ಕಿಗಳು
ಹಾಡಲಿ ಜೀವ ರಾಗಗಳ.

ಕಂದ ನೀನು ಅಲ್ಲಿ ಸುಳಿದಾಡಬೇಡ
ತೇಲಲಿ ಮೋಡಗಳು ಸುರಿಯಲಿ
ತಂಪು ನಿಶ್ಯಬ್ದಗಳ ಗುಂಗು ಹಿಡಿದು
ಹೂಗಳು ಕಂಪು ಸೂಸಲು ಎದೆ ಆಳಕೆ
ಹರಿಯಲಿ ಭಾವನದಿ.

ಕಂದ ತಕತಕ ಕುಣಿಯಬೇಡ
ಬೆಟ್ಟದ ತಪ್ಪಲಲ್ಲಿ ಹಸಿರು ಹಾಸಿದ
ಬಯಲಲಿ ನರ್ತಿಸಲಿ ನಿನ್ನ ಪ್ರೀತಿಯ ನವಿಲು
ಗರಿಗೆದರಿ ಬಾಚಿ ತಬ್ಬಿಕೊಳ್ಳಲು ಇಂಚರದ ಹಕ್ಕಿಗಳು
ಹುಟ್ಟಲಿ ಸಾಕ್ಷಿಗಳು.

ಪುಟ್ಟ ಹತ್ತ ಬೇಡ ಎತ್ತರದ ಬಂಡೆಗಳು
ಗಿಲಿ ಗಿಲಿ ಗೆಜ್ಜೆಯ ಗೋಪಿಯರು
ನರ್ತಿಸಲಿ ಸರಿದು ಹೋಗುವ
ಮೋಡಗಳ ಜೊತೆಗೂಡಿ ಖುಷಿಯಲಿ ಅರಳಲಿ
ಅಮರ ಪ್ರೇಮ ಕಾವ್ಯ

ಕಂದ ಕೊಳಲನೂದಬೇಡ ಬೆಟ್ಟದಲಿ
ಎಲ್ಲಾ ರಾಗಗಳು ನದಿಯಾಗಿ ಹರಿದು
ಎದೆಯ ಬಯಲ ತುಂಬಾ ಪ್ರೀತಿ
ಅಲೆಗಳು ಕೃಷ್ಣ ಕೃಷ್ಣ ಎಂದು ಅಪ್ಪಳಿಸಲಿ
ಅದು ನೀನು ಜಗದ್ದೋಧಾರಕ ಯಶೋದೆ
ಕಂದ ಕೃಷ್ಣ ಎಂದೆಂದೂ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಶಾಕಿರಣ
Next post ಗಾಜಿನ ಗೋಡೆ

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಪ್ಲೇಗುಮಾರಿಯ ಹೊಡೆತ

    ಪ್ರಕರಣ ೧೩ ಕೆಲವು ದಿನಗಳ ತರುವಾಯ ತಿಪ್ಪೂರು ಹೋಬಳಿಯ ಪಾಠಶಾಲೆಗಳಿಂದ ಅನಿಷ್ಟ ವರ್ತಮಾನಗಳು ಬರಲಾರಂಭಿಸಿದುವು. ಹಳ್ಳಿಯಲ್ಲಿ ಪ್ಲೇಗುಮಾರಿ ಹೊಕ್ಕಿದೆ; ಒಂದೆರಡು ಸಾವುಗಳಾದುವು; ಜನರೆಲ್ಲ ಹೊಲಗಳಲ್ಲಿ ಗುಡಿಸಿಲುಗಳನ್ನು ಹಾಕಿಕೊಳ್ಳುತ್ತಿದಾರೆ;… Read more…