ಯಶೋಧೆ ಕಂದ

ಯಶೋಧೆ ಕಂದ ಕೃಷ್ಣನಿಗೆ
ಹೇಳುತ್ತಿದ್ದಳು ಪುಟ್ಟ ಹತ್ತ ಬೇಡ
ಯದುಗಿರಿಯ ಬೆಟ್ಟ ಅದರ ಮೇಲೆ
ಕೂಡಲಿ ಹಾಯಾಗಿ ಬಣ್ಣ ಬಣ್ಣದ ಹಕ್ಕಿಗಳು
ಹಾಡಲಿ ಜೀವ ರಾಗಗಳ.

ಕಂದ ನೀನು ಅಲ್ಲಿ ಸುಳಿದಾಡಬೇಡ
ತೇಲಲಿ ಮೋಡಗಳು ಸುರಿಯಲಿ
ತಂಪು ನಿಶ್ಯಬ್ದಗಳ ಗುಂಗು ಹಿಡಿದು
ಹೂಗಳು ಕಂಪು ಸೂಸಲು ಎದೆ ಆಳಕೆ
ಹರಿಯಲಿ ಭಾವನದಿ.

ಕಂದ ತಕತಕ ಕುಣಿಯಬೇಡ
ಬೆಟ್ಟದ ತಪ್ಪಲಲ್ಲಿ ಹಸಿರು ಹಾಸಿದ
ಬಯಲಲಿ ನರ್ತಿಸಲಿ ನಿನ್ನ ಪ್ರೀತಿಯ ನವಿಲು
ಗರಿಗೆದರಿ ಬಾಚಿ ತಬ್ಬಿಕೊಳ್ಳಲು ಇಂಚರದ ಹಕ್ಕಿಗಳು
ಹುಟ್ಟಲಿ ಸಾಕ್ಷಿಗಳು.

ಪುಟ್ಟ ಹತ್ತ ಬೇಡ ಎತ್ತರದ ಬಂಡೆಗಳು
ಗಿಲಿ ಗಿಲಿ ಗೆಜ್ಜೆಯ ಗೋಪಿಯರು
ನರ್ತಿಸಲಿ ಸರಿದು ಹೋಗುವ
ಮೋಡಗಳ ಜೊತೆಗೂಡಿ ಖುಷಿಯಲಿ ಅರಳಲಿ
ಅಮರ ಪ್ರೇಮ ಕಾವ್ಯ

ಕಂದ ಕೊಳಲನೂದಬೇಡ ಬೆಟ್ಟದಲಿ
ಎಲ್ಲಾ ರಾಗಗಳು ನದಿಯಾಗಿ ಹರಿದು
ಎದೆಯ ಬಯಲ ತುಂಬಾ ಪ್ರೀತಿ
ಅಲೆಗಳು ಕೃಷ್ಣ ಕೃಷ್ಣ ಎಂದು ಅಪ್ಪಳಿಸಲಿ
ಅದು ನೀನು ಜಗದ್ದೋಧಾರಕ ಯಶೋದೆ
ಕಂದ ಕೃಷ್ಣ ಎಂದೆಂದೂ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಶಾಕಿರಣ
Next post ಗಾಜಿನ ಗೋಡೆ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…