ಯಶೋಧೆ ಕಂದ

ಯಶೋಧೆ ಕಂದ ಕೃಷ್ಣನಿಗೆ
ಹೇಳುತ್ತಿದ್ದಳು ಪುಟ್ಟ ಹತ್ತ ಬೇಡ
ಯದುಗಿರಿಯ ಬೆಟ್ಟ ಅದರ ಮೇಲೆ
ಕೂಡಲಿ ಹಾಯಾಗಿ ಬಣ್ಣ ಬಣ್ಣದ ಹಕ್ಕಿಗಳು
ಹಾಡಲಿ ಜೀವ ರಾಗಗಳ.

ಕಂದ ನೀನು ಅಲ್ಲಿ ಸುಳಿದಾಡಬೇಡ
ತೇಲಲಿ ಮೋಡಗಳು ಸುರಿಯಲಿ
ತಂಪು ನಿಶ್ಯಬ್ದಗಳ ಗುಂಗು ಹಿಡಿದು
ಹೂಗಳು ಕಂಪು ಸೂಸಲು ಎದೆ ಆಳಕೆ
ಹರಿಯಲಿ ಭಾವನದಿ.

ಕಂದ ತಕತಕ ಕುಣಿಯಬೇಡ
ಬೆಟ್ಟದ ತಪ್ಪಲಲ್ಲಿ ಹಸಿರು ಹಾಸಿದ
ಬಯಲಲಿ ನರ್ತಿಸಲಿ ನಿನ್ನ ಪ್ರೀತಿಯ ನವಿಲು
ಗರಿಗೆದರಿ ಬಾಚಿ ತಬ್ಬಿಕೊಳ್ಳಲು ಇಂಚರದ ಹಕ್ಕಿಗಳು
ಹುಟ್ಟಲಿ ಸಾಕ್ಷಿಗಳು.

ಪುಟ್ಟ ಹತ್ತ ಬೇಡ ಎತ್ತರದ ಬಂಡೆಗಳು
ಗಿಲಿ ಗಿಲಿ ಗೆಜ್ಜೆಯ ಗೋಪಿಯರು
ನರ್ತಿಸಲಿ ಸರಿದು ಹೋಗುವ
ಮೋಡಗಳ ಜೊತೆಗೂಡಿ ಖುಷಿಯಲಿ ಅರಳಲಿ
ಅಮರ ಪ್ರೇಮ ಕಾವ್ಯ

ಕಂದ ಕೊಳಲನೂದಬೇಡ ಬೆಟ್ಟದಲಿ
ಎಲ್ಲಾ ರಾಗಗಳು ನದಿಯಾಗಿ ಹರಿದು
ಎದೆಯ ಬಯಲ ತುಂಬಾ ಪ್ರೀತಿ
ಅಲೆಗಳು ಕೃಷ್ಣ ಕೃಷ್ಣ ಎಂದು ಅಪ್ಪಳಿಸಲಿ
ಅದು ನೀನು ಜಗದ್ದೋಧಾರಕ ಯಶೋದೆ
ಕಂದ ಕೃಷ್ಣ ಎಂದೆಂದೂ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಶಾಕಿರಣ
Next post ಗಾಜಿನ ಗೋಡೆ

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

cheap jordans|wholesale air max|wholesale jordans|wholesale jewelry|wholesale jerseys