Home / ಕವನ / ಕವಿತೆ / ಒಂದು ದಿನದ ಪಯಣ

ಒಂದು ದಿನದ ಪಯಣ

ದಿನಾ ಬರುವ ಪ್ಯಾಕೆಟ್ ಹಾಲಿನ
ವ್ಯಾನ್ ಈ ದಿನ ಓಣಿಯಲ್ಲಿ ಬಂದಿಲ್ಲ
ಎದುರು ಮನೆಯ ಬಾಡಿಗೆ ಹುಡುಗರ
ದಂಡು ಆಯಾ ಮಾಡುವ ಚಹಾಕ್ಕಾಗಿ
ಕಾದು ಕುಳಿತಿದ್ದಾರೆ. ಮೂಲೆ ಮನೆಯ
ಗೇಟಿಗೆ ಒರಗಿ ನಿಂತ ಅವ್ವಯಾಕೋ
ದಿಗಿಲಾಗಿದ್ದಾಳೆ ಉರಿವ ಒಲೆಯ ಒಳಗೆ ಹಾಗೇ ಬಿಟ್ಟು.

ಪೇಪರಿನ ಹುಡುಗ ಎಂದಿನಂತೆ
ಎಲ್ಲ ಬಾಗಿಲುಗಳಿಗೂ ಸುದ್ದಿ ಒಗೆದು
ಹೋಗಿದ್ದಾನೆ, ಹೂವಿನ ಹುಡುಗಿ ಬ್ರೆಡ್
ಮಾರುವ ಹುಡುಗ ತಮ್ಮಲ್ಲಿಯೇ ಮೆಲ್ಲಗೆ
ಮಾತನಾಡುತ್ತ ಉದ್ಯೋಗದ ಬೆಳಕು ಹೊತ್ತು
ತಂದಿದ್ದಾರೆ ರೆಕ್ಕೆ ಬಿಚ್ಚಿದ ಹಕ್ಕಿಗಳು ಹಾರಾಡಿ
ತೇಲುತ್ತ ಸಾಗಿವೆ ಕರ್ಮಯೋಗಕ್ಕೆ ಊದಿನ ಕಡ್ಡಿ
ಹಚ್ಚಿ ಫಡಕುಗಳ ತೆಗೆದ ಶೆಟ್ಟಿ
ಲೆಕ್ಕ ಹಾಕುವ ದಿನಗಳ ತೆರೆದಿದ್ದಾನೆ.

ಒಂದು ದಿನದ ಪಯಣ ಸಾಗಿದ ಅವರವರ
ಲೆಕ್ಕದಲಿ ಗಂಟೆಗಳು ಭಾರಿಸುತ್ತಲಿದೆ ಮತ್ತೆ
ಹಗಲಲ್ಲೂ ಉರಿಯುತ್ತದೆ ಬೀದಿ ದೀಪಗಳು.
ಬಿಳಿಗಡ್ಡದ ಮುದುಕರು ಕೆಮ್ಮುತ್ತ ಕುಳಿತಿದ್ದಾರೆ
ಚಹಾದಂಗಡಿಯ ಕಟ್ಟೇ ಮೇಲೆ ಬಿತ್ತಿದ್ದು ಬೆಳೆಯಾಗದ
ರೀತಿಗೆ ಬೆರಗಾಗಿ ಹೌಹಾರಿ.
ಮಕ್ಕಳು ಬಿಳಿ ಅಕ್ಷರವ ಗೀಚುತ್ತಲಿವೆ ಕರಿಪಾಠಿಯಲಿ,
ಅಡುಗೆ ಮನೆಯಿಂದ ಒಗ್ಗರಣೆ ವಾಸನೆ
ಹರಿದು ಬರದ ಹೊತ್ತಿನಲಿ, ಸುಕ್ಕಾಗಿವೆ
ಮುಖದ ನೆರಿಗೆಗಳು, ಮುಕ್ಕಾಗಿವೆ ಕೈ ಬಳೆಗಳು,
ಹಾದಿಯ ಮಣ್ಣಿನಲಿ ಮೂಡಿವೆ ಎಲ್ಲರ ಪಾದದಗುರುತು.

ಸೂರ್ಯ ಹೊತ್ತು ಸಾಗಿದ್ದಾನೆ ಬೆವರ ಹನಿಗಳ
ಭತ್ತದ ಗದ್ದೆಯಲಿ ತೇಲಿವೆ ಹಸಿರು ಚಿಟ್ಟೆಗಳು
ಸೀಮೆ ಎಣ್ಣೆಗಾಗಿ ನಿಂತ ಸಾಲಿನಲ್ಲಿ ಅಲ್ಪ ವಿರಾಮವಾಗಿ
ಕುಳಿತಿದ್ದಾಳೆ ಅಜ್ಜಿ ಮೊಮ್ಮಗನೊಂದಿಗೆ
ಸುಕ್ಕಾದ ಸೀರೆ ಉಟ್ಟ ನೀರೆಯರು ಸಾಗಿದ್ದಾರೆ
ಲೋಕಲ್ ಟ್ರೇನು ಬಸ್ಸು ಹಿಡಿದು ನೌಕರಿ ಎಂಬ
ಹುತ್ತದ ಒಳಗೆ ತುಂಬ ಇರುವೆ ಕಡಿಸಿಕೊಳ್ಳಲು.
ಹೋಟೆಲ್ಲುಗಳಲ್ಲಿ ದೋಸೆಗಳು ಗುಂಡಗಾಗಿವೆ
ಭೂಮಿಯ ಚಲನೆಯ ಗತಿಯಲಿ
ತಾಯಿ ಕಂದನ ಎದೆಗವಚಿಕೊಂಡು ಆಸ್ಪತ್ರೆಯ
ಮೆಟ್ಟಿಲು ಏರುತ್ತಿದ್ದಾಳೆ, ಪಿಕ್ಚರ್ ಫ್ರೆಮ್ನ ಶಾರ್ಟ ಅಂಗಲ
ವಿಸ್ತಾರ ಹರಡುತ್ತದೆ ಕೊನೆಯಲ್ಲಿ ನೀಲ ಆಕಾಶದ ಕ್ಯಾಮರಾ
ಕಣ್ಣುಗಳು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...