ಜಂಬದ ಕೋಳಿ

ಕವಿತೆಯ ಕಟ್ಟುವ ಜಂಬದ ಕೋಳೀ!
ಬಾ ಬಾ ಎನ್ನುತ ಕೂಗಿದನು
ಅವನೇ ನನ್ನನ್ನು ಕರೆದವೆನೆನ್ನುತ
ಜವದೊಳು ದನಿಹಿಡಿದೋಡಿದೆನು

ಏನಿದು ನಿನ್ನೀ ಆರ್ಭಟವೆನ್ನುತ
ನಸುನಗೆಯಿಂದಲಿ ಕೇಳಿದನು
ನಾನೇನುತ್ತರ ಕೊಡದಿರೆ ಮರುಕದಿ
ಗಡುವನು ನಿಯಮಿಸಿ ಕಳುಹಿದನು

ಗಡುವಿಗೆ ಉತ್ತರ ಕೊಡುವೆನು ಎನ್ನುತ
ಸಡಗರದಿಂದಲಿ ಸಾಗಿದೆನು
ಒಡೆಯಾ, ನಿನ್ನನು ತಿಳಿಯಲೆ ನನ್ನೀ
ಕವಿತೆಗಳೆನ್ನುತ ಓಡಿದೆನು

ನಿನ್ನನು ತಿಳಿಯದ ಘನ ಪಂಡಿತಳೆ
ನನ್ನನು ತಿಳಿಯಲು ಹೊರಟಿಹೆಯಾ?
ನಿನ್ನನು ತಿಳಿದರೆ ನನ್ನನು ತಿಳಿಯುವೆ
ನಡೆ ನೆಡೆ ಎನ್ನುತ ಕಳುಹಿದನು

ಥಟ್ಟನೆ ನನ್ನನು ತಿಳಿಯುವೆನೆನ್ನುತ
ದೃಷ್ಟಿಯ ಮರಳಿಸಿ ನೋಡಿದೆನು
ಸೃಷ್ಟಿಯೆ ತಲೆಕೆಳಗಾಯಿತು ಆಕ್ಷಣ
ಅಬ್ಬಾ ಎನ್ನುತ ನಡುಗಿದೆನು

ಕಾಣದು ಛೀ ಛೀ ಇದು ಹೊಸದಾರಿ
ನಾನಿದನೊಲ್ಲೆನು ಎಡವಿದೆನು
ಹೂವನು ಮುಡಿಯಲು ಬೇರುಗಳೇತಕೆ?
ಬಿಡು ಬಿಡು ಎನ್ನುತ ಕೊಡವಿದೆನು

ಬೇರಿನೊಳಲ್ಲವೆ ಸಾರದ ಸವಿಯು?
ಭುಜಿಸುವುದೇನನು ಎಲೆ ಮರುಳೇ!
ದಾರಿಯನರಿಯದೆ ನಡೆದರೆ ಫಲವೆ?
ಜನಕಜೆ ಎನ್ನುತ ಕೂಗಿದನು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಯ ಜಯ ಜಯ ಕನ್ನಡ ರಾಜೇಶ್ವರಿ
Next post ಮೋಡ

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…