ಜಂಬದ ಕೋಳಿ

ಕವಿತೆಯ ಕಟ್ಟುವ ಜಂಬದ ಕೋಳೀ!
ಬಾ ಬಾ ಎನ್ನುತ ಕೂಗಿದನು
ಅವನೇ ನನ್ನನ್ನು ಕರೆದವೆನೆನ್ನುತ
ಜವದೊಳು ದನಿಹಿಡಿದೋಡಿದೆನು

ಏನಿದು ನಿನ್ನೀ ಆರ್ಭಟವೆನ್ನುತ
ನಸುನಗೆಯಿಂದಲಿ ಕೇಳಿದನು
ನಾನೇನುತ್ತರ ಕೊಡದಿರೆ ಮರುಕದಿ
ಗಡುವನು ನಿಯಮಿಸಿ ಕಳುಹಿದನು

ಗಡುವಿಗೆ ಉತ್ತರ ಕೊಡುವೆನು ಎನ್ನುತ
ಸಡಗರದಿಂದಲಿ ಸಾಗಿದೆನು
ಒಡೆಯಾ, ನಿನ್ನನು ತಿಳಿಯಲೆ ನನ್ನೀ
ಕವಿತೆಗಳೆನ್ನುತ ಓಡಿದೆನು

ನಿನ್ನನು ತಿಳಿಯದ ಘನ ಪಂಡಿತಳೆ
ನನ್ನನು ತಿಳಿಯಲು ಹೊರಟಿಹೆಯಾ?
ನಿನ್ನನು ತಿಳಿದರೆ ನನ್ನನು ತಿಳಿಯುವೆ
ನಡೆ ನೆಡೆ ಎನ್ನುತ ಕಳುಹಿದನು

ಥಟ್ಟನೆ ನನ್ನನು ತಿಳಿಯುವೆನೆನ್ನುತ
ದೃಷ್ಟಿಯ ಮರಳಿಸಿ ನೋಡಿದೆನು
ಸೃಷ್ಟಿಯೆ ತಲೆಕೆಳಗಾಯಿತು ಆಕ್ಷಣ
ಅಬ್ಬಾ ಎನ್ನುತ ನಡುಗಿದೆನು

ಕಾಣದು ಛೀ ಛೀ ಇದು ಹೊಸದಾರಿ
ನಾನಿದನೊಲ್ಲೆನು ಎಡವಿದೆನು
ಹೂವನು ಮುಡಿಯಲು ಬೇರುಗಳೇತಕೆ?
ಬಿಡು ಬಿಡು ಎನ್ನುತ ಕೊಡವಿದೆನು

ಬೇರಿನೊಳಲ್ಲವೆ ಸಾರದ ಸವಿಯು?
ಭುಜಿಸುವುದೇನನು ಎಲೆ ಮರುಳೇ!
ದಾರಿಯನರಿಯದೆ ನಡೆದರೆ ಫಲವೆ?
ಜನಕಜೆ ಎನ್ನುತ ಕೂಗಿದನು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಯ ಜಯ ಜಯ ಕನ್ನಡ ರಾಜೇಶ್ವರಿ
Next post ಮೋಡ

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…