ಸಂಜೆಯ ಮಂಜು

ಸಂಜೆಯ ಮಂಜು ಕವಿಯು ವೇಳಗೆ
ಬಂದರು ನಾಲ್ಕು ಜನ
ಮುಖವೇ ಕಾಣದ ಹೆಸರೇ ಕೇಳದ
ಯಾರೋ ದೀನಜನ

ಜಗುಲಿಯ ಮೇಲೆ ಕೂರಿಸಿ ಹಾಕಿದೆ
ಉಳಿದ ಕೊಂಚ ಅನ್ನ
ಹಾಸಲು ಹೊದೆಯಲು ನಾಚದೆ ನೀಡಿದೆ
ತುಂಡು ಹೊದಿಕೆಯನ್ನ

ಆತುರದಿಂದಲೆ ತಿಂದರು ಅನ್ನವ
ಮುಖ ಅರಳಿತು ಹಿತಕೆ,
ಏನು ಬೆಚ್ಚಗಿದೆ ಆಹಾ! ಎಂದರು
ಮೈಗೆ ಹೊದ್ದು ಹೊದಿಕೆ.
ಬೆಳಗಾಗೇಳುತ ಬಂದರೆ ಹೊರಗೆ
ಇಡೀ ಜಗಲಿ ಬರಿದು!
ಹೇಳದೆ ನಡೆವುದೆ ಎನ್ನುತ ಪೂಜೆಗೆ
ಬಂದೆ ನೀರ ಮಿಂದು

ಆದರೇನು ಇದು, ದೇವರ ಮನೆಯಲಿ
ಧೂಪದ ಪರಿಮಳವು!
ದೀಪ ಉರಿದಿವೆ ಹೂವು ಸುರಿದಿವೆ
ಸಂದಿವೆ ಪೂಜೆಗಳು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯೋಗಃ ಕಾರ್ಮಸು ಕೌಶಲಂ
Next post ಪಂಥ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

cheap jordans|wholesale air max|wholesale jordans|wholesale jewelry|wholesale jerseys