ಪಂಥ

ನಿನ್ನ ತಿಳಿವುದಕಿಂತ ನನ್ನ ತಿಳಿವುದೇ ಲೇಸು
ನೀನೆ ನಾನೆಂದೆಂಬ ಪದವೇ ಲೇಸು

ಕಂಡವರು ಕೇಳಿದರೆ ನಗರೆ ಈ ಭಾವವನು?
ಅದ್ವೈತ ಸಿದ್ಧಾಂತ ಸುಲಭವೇ ಏನು?

ಉನ್ನತದ ಬ್ರಹ್ಮಾಂಡಕಾದಿಬೀಜವು ನೀನು
ನಿನ್ನಿಂದ ಬಂದಿರುವ ಜೀವಿ ನಾನು

ಬದಿಯೊಳಿದ್ದೂ ಎನಗೆ ಕಾಣದಿಹೆಯಾ ನೀನು
ತಾಳು ತಾಳೋ ನಿನ್ನ ಕಲೆವೆ ನಾನು

ದೇಹಧಾರಿಯ ಸ್ಫರ್ಧೆ ಬೆಳೆಯುತಿರಲಿ
ಪರೆಬಿಟ್ಟು ಪರೆಬಿಟ್ಟು ತಿಳಿವು ಬರಲಿ

ನನ್ನ ಮದ ಒಳಗೊಳಗೆ ಕುಗ್ಗುತಿರಲಿ
ನಿನ್ನ ಕರುಣದ ಬಲವು ಹೆಚ್ಚುತಿರಲಿ

ಚಲನವಿಲ್ಲದ ಚಿತ್ತ ಮೂಡದೇನು?
ಎಂದಿಗಾದರು ದಾರಿ ಗಾಣದೇನು?

ಸಪ್ತ ಸ್ವರ್ಗವ ತೂರಿ ಬಾರದಿಹೆನೆ?
ಮುಕ್ತಿ ಪಥದೊಳು ಕಹಳೆ ಊದದಿಹೆನೆ?

ತನ್ಮಯತ್ವದ ಪಂಥ ಗೆಲ್ಲದೇನು?
ಜನಕಜೆಯು ತಾನೆ ತಾನಾಗಳೇನು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಜೆಯ ಮಂಜು
Next post ಮರಳಿ ಈ ಚೌಕದಲಿ ನಿಂತು

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…