ಪಂಥ

ನಿನ್ನ ತಿಳಿವುದಕಿಂತ ನನ್ನ ತಿಳಿವುದೇ ಲೇಸು
ನೀನೆ ನಾನೆಂದೆಂಬ ಪದವೇ ಲೇಸು

ಕಂಡವರು ಕೇಳಿದರೆ ನಗರೆ ಈ ಭಾವವನು?
ಅದ್ವೈತ ಸಿದ್ಧಾಂತ ಸುಲಭವೇ ಏನು?

ಉನ್ನತದ ಬ್ರಹ್ಮಾಂಡಕಾದಿಬೀಜವು ನೀನು
ನಿನ್ನಿಂದ ಬಂದಿರುವ ಜೀವಿ ನಾನು

ಬದಿಯೊಳಿದ್ದೂ ಎನಗೆ ಕಾಣದಿಹೆಯಾ ನೀನು
ತಾಳು ತಾಳೋ ನಿನ್ನ ಕಲೆವೆ ನಾನು

ದೇಹಧಾರಿಯ ಸ್ಫರ್ಧೆ ಬೆಳೆಯುತಿರಲಿ
ಪರೆಬಿಟ್ಟು ಪರೆಬಿಟ್ಟು ತಿಳಿವು ಬರಲಿ

ನನ್ನ ಮದ ಒಳಗೊಳಗೆ ಕುಗ್ಗುತಿರಲಿ
ನಿನ್ನ ಕರುಣದ ಬಲವು ಹೆಚ್ಚುತಿರಲಿ

ಚಲನವಿಲ್ಲದ ಚಿತ್ತ ಮೂಡದೇನು?
ಎಂದಿಗಾದರು ದಾರಿ ಗಾಣದೇನು?

ಸಪ್ತ ಸ್ವರ್ಗವ ತೂರಿ ಬಾರದಿಹೆನೆ?
ಮುಕ್ತಿ ಪಥದೊಳು ಕಹಳೆ ಊದದಿಹೆನೆ?

ತನ್ಮಯತ್ವದ ಪಂಥ ಗೆಲ್ಲದೇನು?
ಜನಕಜೆಯು ತಾನೆ ತಾನಾಗಳೇನು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಜೆಯ ಮಂಜು
Next post ಮರಳಿ ಈ ಚೌಕದಲಿ ನಿಂತು

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys