ನಂದಿಯ ಬೆಟ್ಟದ ಮೇಲುಗಡೆ

ಬೇಡದೆ ಬಿಸುಡಿದ ವಸ್ತುವೊಲಾಯ್ತಿಳೆ
ಕೆಳ ಕೆಳಗಾಳದ ಕಣಿವೆಯೊಳು;
ಕಪ್ಪೆಯ ಗೂಡೋ, ಹುತ್ತವೊ ಇದು ಎನೆ
ನಗೆಗೇಡಾಯಿತು ನೆರೆಹೊಳಲು;
ಕೆರೆಯೋ ಕೊಚ್ಚೆಯೊ, ಪೈರೋ ಪಾಚೆಯೊ,
ಹಳುವೋ ಹುಲ್ಗಾವಲ ಹರಹೋ?
ಎನ್ನುತ ಭ್ರಮಿಸುವ ತೆರವಿಂದಾಯಿತು
ನಂದಿಯ ಬೆಟ್ಟದ ಮೇಲುಗಡೆ.

ಐರಾವತವೆನೆ ಬಿಳಿಮುಗಿಲಾನೆಯ
ಸದರದಿ ಮುಟ್ಟುತ ನೇವರಿಸಿ,
ಕುಸುಮಾವಳಿಯೆನೆ ಬಾನಿನ ನೀಲವ
ಟೊಂಗೆಯ ತುದಿಯೊಳು ದೋಲಯಿಸಿ,
ಚಿರ ಯೌವನವೆನೆ ಹಸುರನು ಮೆರೆಯಿಸಿ,
ಜುಮ್ಮೆನೆ ಸುರಭಿಯ ನಿಃಶ್ವಸಿಸಿ,
ದನಿಯೊಳು ನೆಳಲೊಳು ಚೋದ್ಯಂಗೊಳಿಸುವ
ಬನವಿದಿಗೋ ಮಲೆ ಮೇಲುಗಡೆ!

ಕಿರುದೆರೆಕುದುರೆಯ ರವಿರಾವುತರನು
ಕೊಳದಂಗಣದೊಳಗೋಡಿಸುತ,
ಚಣಕೂ ಚೆದರುವ ಮೋಡದ ಮಂದೆಗೆ
ಬಾನಿನ ಬಯಲೊಳಗೂಳಿಡುತ,
ತಲೆ ಕೆದರುತ, ಮೈ ಕುಣಿಸುತ ತರುಗಳ
ಹುಡುಗಾಟಕೆ ಹುಯಿಲಿಡಿಸುತ್ತ,
ತಿಣ್ಣನೆ ಮಂದಿಯ ತುಡುಕುತ, ಜಡತೆಯ
ಕಸಿಯುವೆಲರ್ ಮಲೆ ಮೇಲುಗಡೆ.

ಪಗಲಿರುಳಾಗಿಸಿ ದೆಸೆಯೊಗ್ಗೂಡಿಸಿ
ಲೋಕವ ಮೋಹಿಸುತುರವಣಿಸಿ,
ಘುಡು ಘುಡಿಸುತಸುತಲಾರ್ಭಟಿಸುತ ಫಳ್ಳನೆ
ಪಲ್ಕಿಯುತ ಭೀಕರನೆನಿಸಿ,
ಬುದ್ಧನ ಮಾರನೊಲಚಲವ ತಾಗುತ
ಹಮ್ಮುಳಿದೋಡಲು ಕಾರ್ಮುಗಿಲು,
ನಗುತಿಹ ದೇವರ ದಿವ್ಯಸ್ಮಿತವೆನೆ
ಮಳೆಬಿಸಿಲಿದೂ ಮಲೆ ಮೇಲುಗಡೆ.

ಸೊದೆಯಂತಸುವನು ಬಿಸಿಲುದ್ದೀಪಿಸೆ
ನಲಿದುಲಿದಾಡುವೆ-ಸುರನವೊಲು;
ಕೈಯೆಡೆ ಕೋಡೊಳು ರೆಕ್ಕೆಯಗೊಳ್ಳಲು
ಮುಗಿಲುತ್ಸುಕಿಸುವೆ-ಯಕ್ಷನೊಲು;
ಗಿರಿಶನೊಲದ್ರಿಯ ನಡೆವ ಮಹಾತ್ಮನ
ಹಿಂಬಾಲಿಸುವೆನು- ಗಣರವೊಲು;
ಅಮರ್ತ್ಯಚೇತನರನೇಕಭಾವಗ-
ಳಿಂತೆನಗಹುದೈ ಮೇಲುಗಡೆ.

ಮೆಲ್ಲನೆ ಮೆಲ್ಲನೆ ಬೆಳುದೆಸೆ ದಳಗಳ
ತಿರೆ ಹೂ ಮುಚ್ಚಲು, ಇರುಳಿಳಿಯೆ,
ಶಾಂತನ ತೇಜಸ್ವಿಯ ಸಾನ್ನಿಧ್ಯದಿ
ತಮ್ಮೊಳಬೆಳಕೊಳು ಜನವೆಸೆಯೆ,
ಶ್ರುತಿ ನುಡಿಯಲು, ನುತಿಯೊಗೆಯಲು, ಕರಣಗ-
ಳಮಿತಾಚರಣೆಯ ಸುತನವೊಲು
ದಣಿದಾತ್ಮದ ಬಳಿಗೈತರ-ಅಹ ಏ-
ನುತ್ಸವವೋ ಮಲೆ ಮೇಲುಗಡೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅತ್ತೆಸೊಸೆಯರ ಜಗಳ
Next post ಕಟ್ಟುತಾವೆ ಹಕ್ಕಿ

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

cheap jordans|wholesale air max|wholesale jordans|wholesale jewelry|wholesale jerseys