ಮರಳಿ ಈ ಚೌಕದಲಿ ನಿಂತು

ಲೋಟ ಮೇಲೇರುವುದು
ಲೋಟ ಕೆಳಗಿಳಿಯುವುದು
ಒಂದರಿಂದಿನ್ನೊಂದಕ್ಕೆ
ಧುಮುಕುವುದು
ಭೋರ್ಗರೆವ ಜಲಪಾತ
ಪಾರದರ್ಶಕ ಗ್ಲಾಸುಗಳಲ್ಲಿ
ತುಂಬಿ ಹರಿಯುವುದು
ಗುಳ್ಳೆಯೆಬ್ಬಿಸಿ
ಮೂಗಿನ ಹೊಳ್ಳೆಯೆಬ್ಬಿಸಿ

ಆದ್ದರಿಂದಲೆ ಅವರಿಗೆ
ಹೊಳ್ಳರೆಂದು ಹೆಸರು
ಕಳ್ಳರಿಗೆ ಸುಳ್ಳರಿಗೆ
ಹುಳ್ಳರಿಗೆ ಎಲ್ಲಿರಿಗೆ
ಪ್ರಿಯವಾದವರು

ಕಡಿಯೆ ಕಾರದ ಕಡ್ಡಿ
ಎಂಥ ಹಲ್ಲುಗಳಿಗೂ
ಸವಾಲಿನಂತಿರುವ ’
ಮುರುಕು-ಅಥವ
ಹತ್ತಿ ಹಾಸಿಗೆಯಂತೆ
ಮೆತ್ತನೆಯ ಪೋಡಿ
ಬೆಂಚಿನ ಮೇಲೆ ಬ೦ದು
ಕುಳಿತುಕೊಳ್ಳುವುವು
ಅಟ್ಟದ ಅಡ್ದದಿಂದ
ಕಟ್ಟಿ ತೂಗಿದ ಬಾಳೆಯ ಹಣ್ಣು
ಮಿಟುಕಿಸುವುದು ಕಣ್ಣು
ಯಾವ ಮಾಯಕದಲ್ಲಿ
ಎಲ್ಲ ಮಂಗ ಮಾಯ

ಹೇಳಿ ಹೊಳ್ಳರೆ ಹೇಳಿ
ಕೋಚಣ್ಣ ಬಂಟರಿಗೆ
ಹೇಗೆ ಹಿಡಿಯಿತು ಹುಚ್ಚು ?
ಹೆಂಗಸು ಮಕ್ಕಳೆದುರು
ಹೊಯ್ದು ಬಿಟ್ಟರೆ ಉಚ್ಚು !
ಸೋತರು ಕೆಳಕೋರ್ಟಿನಲಿ
ಸೋತರು ಮೇಲು ಕೊರ್ಟಿನಲಿ
ಮಾನ ಹೋಯಿತು
ಮರ್ಯಾದೆ ಹೋಯಿತು
ಉಳಿದುದೊಂದೆ ಕೋಮಣ ನೋಡಿ!

ಸೊರ್ ಸೊರ್ ಎ೦ದು
ಯಾರು ಯಾರನ್ನು ಅಣಕಿಸುವ ಸದ್ದು?
ಲೋಟದಿಂದ ಬಟ್ಟಲಿಗೆ
ಬಟ್ಟಲಿನಿಂದ ಗಂಟಲಿಗೆ
ಸಾಗಿ ಹೋದ ಸುಖವೆ
ಬದಲಾದ ಮುಖವೆ!
ಹೀಗೇಕೆಂದು
ಕೇಳುವೆನು ನನಗೆ ನಾನು
ಮರಳಿ ಈ ಚೌಕದಲಿ ನಿಂತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಂಥ
Next post ಸಾಕ್ಷಿ

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…