Home / ಕವನ / ಕವಿತೆ / ಮರಳಿ ಈ ಚೌಕದಲಿ ನಿಂತು

ಮರಳಿ ಈ ಚೌಕದಲಿ ನಿಂತು

ಲೋಟ ಮೇಲೇರುವುದು
ಲೋಟ ಕೆಳಗಿಳಿಯುವುದು
ಒಂದರಿಂದಿನ್ನೊಂದಕ್ಕೆ
ಧುಮುಕುವುದು
ಭೋರ್ಗರೆವ ಜಲಪಾತ
ಪಾರದರ್ಶಕ ಗ್ಲಾಸುಗಳಲ್ಲಿ
ತುಂಬಿ ಹರಿಯುವುದು
ಗುಳ್ಳೆಯೆಬ್ಬಿಸಿ
ಮೂಗಿನ ಹೊಳ್ಳೆಯೆಬ್ಬಿಸಿ

ಆದ್ದರಿಂದಲೆ ಅವರಿಗೆ
ಹೊಳ್ಳರೆಂದು ಹೆಸರು
ಕಳ್ಳರಿಗೆ ಸುಳ್ಳರಿಗೆ
ಹುಳ್ಳರಿಗೆ ಎಲ್ಲಿರಿಗೆ
ಪ್ರಿಯವಾದವರು

ಕಡಿಯೆ ಕಾರದ ಕಡ್ಡಿ
ಎಂಥ ಹಲ್ಲುಗಳಿಗೂ
ಸವಾಲಿನಂತಿರುವ ’
ಮುರುಕು-ಅಥವ
ಹತ್ತಿ ಹಾಸಿಗೆಯಂತೆ
ಮೆತ್ತನೆಯ ಪೋಡಿ
ಬೆಂಚಿನ ಮೇಲೆ ಬ೦ದು
ಕುಳಿತುಕೊಳ್ಳುವುವು
ಅಟ್ಟದ ಅಡ್ದದಿಂದ
ಕಟ್ಟಿ ತೂಗಿದ ಬಾಳೆಯ ಹಣ್ಣು
ಮಿಟುಕಿಸುವುದು ಕಣ್ಣು
ಯಾವ ಮಾಯಕದಲ್ಲಿ
ಎಲ್ಲ ಮಂಗ ಮಾಯ

ಹೇಳಿ ಹೊಳ್ಳರೆ ಹೇಳಿ
ಕೋಚಣ್ಣ ಬಂಟರಿಗೆ
ಹೇಗೆ ಹಿಡಿಯಿತು ಹುಚ್ಚು ?
ಹೆಂಗಸು ಮಕ್ಕಳೆದುರು
ಹೊಯ್ದು ಬಿಟ್ಟರೆ ಉಚ್ಚು !
ಸೋತರು ಕೆಳಕೋರ್ಟಿನಲಿ
ಸೋತರು ಮೇಲು ಕೊರ್ಟಿನಲಿ
ಮಾನ ಹೋಯಿತು
ಮರ್ಯಾದೆ ಹೋಯಿತು
ಉಳಿದುದೊಂದೆ ಕೋಮಣ ನೋಡಿ!

ಸೊರ್ ಸೊರ್ ಎ೦ದು
ಯಾರು ಯಾರನ್ನು ಅಣಕಿಸುವ ಸದ್ದು?
ಲೋಟದಿಂದ ಬಟ್ಟಲಿಗೆ
ಬಟ್ಟಲಿನಿಂದ ಗಂಟಲಿಗೆ
ಸಾಗಿ ಹೋದ ಸುಖವೆ
ಬದಲಾದ ಮುಖವೆ!
ಹೀಗೇಕೆಂದು
ಕೇಳುವೆನು ನನಗೆ ನಾನು
ಮರಳಿ ಈ ಚೌಕದಲಿ ನಿಂತು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...