Home / ಕವನ / ಕವಿತೆ / ಕಡವಿನಲ್ಲಿ

ಕಡವಿನಲ್ಲಿ

ಕಾಣಲಿಹುದನು ಕಂಡೆನೆಲ್ಲ,
ಕೊಳ್ಳಲಿಹುದನು ಕೊಂಡೆನೆಲ್ಲ,
ಹಿರಿವುದೆಂದೀ ಸಂತೆ ಬಲ್ಲ
ರಾರು ನೆರಸಿದನಲ್ಲದೆ? ೪

ಬಂದು ಪೋಪರು ಮೊತ್ತಮೊತ್ತದೆ-
ಯಾರಿಗೇಕೇನೆಂದು ಗೊತ್ತದೆ?
ಬಾಳದೊಡವೆಗೆ ಬೆಲೆಯ ತೆತ್ತುದೆ
ನನ್ನ ಪಾಲಿನ ಕೌತುಕ. ೮

ಇಲ್ಲಿ ಇನ್ನಿರಲಿಷ್ಟವಿಲ್ಲ-
ಕೆಲಸವಿಲ್ಲದಲಿರಲು ಸಲ್ಲ,
ಇನ್ನು ಮರಳುವೆನೆಂದು ಮೆಲ್ಲ
ನಿಳಿದೆ ಕಡವಿನ ಕೇರಿಗೆ ೧೨

ಸಂತೆಗೆನ್ನಯ ಬಳಿಕ ಬಂದು,
ಸುತ್ತಿ ನನ್ನೊಡನೆನ್ನ ಮುಂದು
ಮನೆಗೆ ಮಗುಳಿದ ಮಡದಿ ನೊಂದು
ಬೇಸರಳೆ ನಾನಿಲ್ಲದೆ? ೧೬

ಮೆಟ್ಟು ಮಿಸುಕದು ಕಡವಿನಲ್ಲಿ;
ನನ್ನನಿಲ್ಲಿಗೆ ನಸುಕಿನಲ್ಲಿ
ತಂದು ಮುಟ್ಟಿಸಿದಂಬಿ ಎಲ್ಲಿ?
ಎಲ್ಲಿಗಾದೆಯ ಅಂಬಿಗ? ೨೦

ತೊಂಡು ತೊಳಸುವ ದೋಣಿಯನ್ನ
ನಂಬಿ ಬಂದೆನೆ? ಅಕಟ, ಮುನ್ನ
ಹುಟ್ಟನರಿಯದನಳವೆ ನನ್ನ
ಹುಟ್ಟನಿಕ್ಕಲು, ೧ಪಾತಿಗ? ೨೪

ಕುಳಿತೆ ನೀಂ ಗಡ ಬೆನ್ನನೆನ್ನ-
ಮಬ್ಬು ಮರಸಿತು ಮೊಗವ ನಿನ್ನ;
ಸಂತೆಗಾಂ ಸಡಗರಿಸುವನ್ನ
ನಿನ್ನ ಹೆಸರೇನೆಂದೆನೆ? ೨೮

ಓಡ ಓಡೆಂದರಚಿ ಕರೆದೆ,
ಆಚೆ ಮೂದಲಿಪಂತೆ ಮೊರೆದೆ,
ಇಲ್ಲ ಮರುಮಾತೆಲ್ಲ ಬರಿದೆ,
ನನ್ನ ಕರೆ ಮೇಣಾಂ ವಿನಾ ೩೨

೨ತೊರೆಯರೆರೆಯಾ, ಏಕೆ ನಿನ್ನ
ಹೊತ್ತಿಗಲ್ಲದೆ ಬಾರೆ ಮುನ್ನ?
ಹೊತ್ತ ಹಿಂಗಿಸಿ ಹಾಯಿಸೆನ್ನ-
ಕಂಬನಿಯ ಕರೆ ಕೇಳದೆ? ೩೬
*****
೧ ಪಾತಿ=ದೋಣಿ, ಪಾತಿಗ=ದೋಣಿಗಾರ
೨ ತೊರೆಯ = ಅಂಬಿಗ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...