ಶೆಲ್ಲಿ

‘ಈತನಜರಾಮರನು’; ‘ಈತಸಿರಬೇಕಿತ್ತು’
ಎಂದು ಕವಿಗಳು ತಮಗೆ ಮನವಂದ ಕವಿವರರ
ಹೊಗಳುವರು. ಹೇಳೆನಗೆ. ಏನೆಂದು, ಗುರುವರ!
ನಾನು ನುತಿಸಲಿ ನಿನ್ನ ? ಅಹುದು ನಿನ್ನಯ ತೊತ್ತು
ಧಾರಿಣಿಯು, ಕಾಲನಿನ ಕಾಲಾಳು ಮೂವತ್ತು-
ಮೂರು ಕೋಟಿಯ ಗಣದ ಜೀವಕಳೆ, ಇನ್ನಿತರ
ಪ್ರಾಣಿಗಳ ಪ್ರಾಣಪತಿ, ಮತ್ತೊಂದು ದಿವ್ಯತರ
ಸ್ವರ್‍ಗದಧಿಪತಿ, – ಬಾಳ್ದೆ ಧರಣಿಯೊಳು ಮೈವೆತ್ತು!

ಬಾಳುವಯ ಹೊಂದೇರಿಗಿನ್ನೊಂದು ಹೊಂಗಳಸ
ವಿಡಲೆಂದು ಹೊಂಬಸಿರನೆಡೆಗೆ ಸಾಹಸಮಾಡಿ
ಹೋಗಬಯಸಿದ ರಧಿಕ, ಚಿರವಧಿಕ! ನೀ ಲಲ್ಲೆ –
ಯಲಿ ಕಂಡು ಬೆಳಕು-ಕತ್ತಲೆಗಳನು, ಇದು ಎಲ್ಲ
ಚೆಲುವೆಂದು ಸಾರಿದವ! ಜನಕೆ ಬೆಳಕನ್ನು ನೀಡಿ
ನಿನ್ನ ನೋಟವ ಕೊನರಿಸಲು ನಡೆದೆ, ಮನದರಸ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬರಲಿರುವ ದಿನ
Next post ಹೂವಿನ ಸಂಕಲ್ಪ

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…