Home / ಕಥೆ / ಕಿರು ಕಥೆ / ಹೂವಿನ ಸಂಕಲ್ಪ

ಹೂವಿನ ಸಂಕಲ್ಪ

ಒಂದು ಸುಂದರ ಬೆಳಗಲ್ಲಿ ಹೂ ಒಂದು ಸಂಕಲ್ಪ ಮಾಡಿತು. ಏನಾದರಾಗಲಿ ಇಂದು ಧ್ಯಾನದ ಪರಮ ಚರಮತೆ ಮುಟ್ಟಬೇಕೆಂದು. ಸುಖಾಸನದಲ್ಲಿ ಮಂದಸ್ಮಿತ ತಾಳಿ ಸುಮನ ಧ್ಯಾನಕ್ಕೆ ಕುಳಿತುಕೊಂಡಿತು.

ಕೆಲವೇ ಕ್ಷಣದಲ್ಲಿ ಮಂದಾನಿಲ ಬಂದು “ಹೂವೇ! ಹೂವೇ!” ಎಂದು ಬೆನ್ನು ತಟ್ಟಿ ಮಾತನಾಡಿಸಿತು. ಹೂವು ತನ್ನ ಧ್ಯಾನದ ನಿಲುವನ್ನು ತೊರೆಯಲಿಲ್ಲ.

ಬೆಳಕು ಬೀರುತ್ತ ಬೆಳ್ಳಿ ಕಿರಣ ಓಡಿ ಒಂದು-
“ಹೂವೇ! ಹೂವೇ! ನಿನ್ನ ಸಖನ ನೆನಪಿಲ್ಲವೇ?” ಎಂದು ಕೇಳಿತು.
ಸುಮನದ ಧ್ಯಾನದ ರೆಪ್ಪೆ ದಳ ಅಲಗಲಿಲ್ಲ.
ಧ್ಯಾನದ ಮೌನ ಮುಂದುವರಿಯಿತು.

ಮಧ್ಯಾಹ್ನ ಸೂರ್‍ಯ ನೆತ್ತಿಗೇರಿ ಬಂದು ಹೂ ಹೃದಯವನ್ನು ಕಲುಕಲು ನೋಡಿದ. ಹೂವು ಉರಿಬಿಸಲನ್ನು ಸಹಿಸಿ ಧ್ಯಾನ ಮುಂದುವರಿಸಿತು.

ಮತ್ತೆ “ಸಂಧ್ಯಾ” ಮೆಲ್ಲನೆ ಹೆಜ್ಜೆ ಇಟ್ಟು ಬಂದು “ಕಣ್ಣು ಮುಚ್ಚಾಲೆ ಆಡೋಣವೇ”? ಎಂದು ಪಿಸು ಗುಟ್ಟಿತು.

“ಮೂಕ ಮೌನ, ಮುನಿಸೇಕೆ? ಬಾ ಸಖಿ” ಎಂದು ಗೋಗರಿಯಿತು.

ಹೂವು ಕಣ್ಣು ತೆರೆಯಲಿಲ್ಲ, ಬಾಯಿ ಬಿಡಲಿಲ್ಲ. ಮೌನದಲ್ಲಿ ಮುಂದುವರಿಯಿತು.

ಸಂಜೆಗತ್ತಲೆ ತೆರೆ ಎಳೆದೊಡನೆ “ನಿಶೆ” ಕತ್ತಲೆಯ ಹೊದಿಕೆ ಹೊದ್ದು ಕಳ್ಳನಂತೆ ಹೂ ಹೃದಯ ಕದಿಯಲು ಬಂದಿತು.

“ಮೇಲೆ, ಆಗಸ, ಚಂದ್ರಮನ ಚೆಲುವು ನೋಡು, ಬೆಳದಿಂಗಳ ಹಾಡು ಕೇಳು, ನಕ್ಷತ್ರದ ನಾಟ್ಯನೋಡು. ನಿಶಾ ತೊಳಿನ ಅಪ್ಪುಗೆಗೆ ನೀ ಬರಲು ಏಕೆ ತಡ? ಸುಮನ, ನಿನ್ನ ಸಮಾಗಮಕ್ಕಾಗಿ ನಾ ಪರಿತಪಿಸುತಿರುವೆ” ಎಂದಿತು. ಹೂವಿನ ಧ್ಯಾನ, ತಪ ಹಾಗೆ ಮುಂದುವರೆದಿತ್ತು.

ಮಧ್ಯರಾತ್ರಿ ಹಿಮ ಬಿರುಗಾಳಿ ಅಪ್ಪಳಿಸಿ ಬಂತು. ಹೂವಿನ ಪಕಳೆಗಳೆಲ್ಲಾ ಉದರಿ ಮಣ್ಣು ಸೇರಿತು. ಅದರೊಡನೆ ಹೂಗರ್‍ಭದಲ್ಲಿ ಅಡಗಿದ್ದ ಧ್ಯಾನ ಬೀಜ ಮೃಣ್ಮಯವ ಸೇರಿ ಚಿನ್ಮಯವಾಯಿತು. ಬಿರುಗಾಳಿಗೆ ಸೋಲಾಯಿತು. ಹೂವಿನ ಹೃದಯ ನನ್ನಾದಾಗಲಿಲ್ಲ ಎಂದು, ರೊಯ್ಯನೆ ರೋದಿಸುತ್ತ ಬೆಳಗು ಮೂಡುವುದರಲ್ಲಿ ಸಮುದ್ರಗರ್‍ಭದಲ್ಲಿ ಬಚ್ಚಿಟ್ಟು ಕೊಂಡಿತು. ಹೂ ಸಂಕಲ್ಪಕ್ಕೆ ಸ್ವರ್‍ಗ ಕೈಗೆಟುಕಿತ್ತು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...