Home / ಕಥೆ / ಕಿರು ಕಥೆ / ಹೂವಿನ ಸಂಕಲ್ಪ

ಹೂವಿನ ಸಂಕಲ್ಪ

ಒಂದು ಸುಂದರ ಬೆಳಗಲ್ಲಿ ಹೂ ಒಂದು ಸಂಕಲ್ಪ ಮಾಡಿತು. ಏನಾದರಾಗಲಿ ಇಂದು ಧ್ಯಾನದ ಪರಮ ಚರಮತೆ ಮುಟ್ಟಬೇಕೆಂದು. ಸುಖಾಸನದಲ್ಲಿ ಮಂದಸ್ಮಿತ ತಾಳಿ ಸುಮನ ಧ್ಯಾನಕ್ಕೆ ಕುಳಿತುಕೊಂಡಿತು.

ಕೆಲವೇ ಕ್ಷಣದಲ್ಲಿ ಮಂದಾನಿಲ ಬಂದು “ಹೂವೇ! ಹೂವೇ!” ಎಂದು ಬೆನ್ನು ತಟ್ಟಿ ಮಾತನಾಡಿಸಿತು. ಹೂವು ತನ್ನ ಧ್ಯಾನದ ನಿಲುವನ್ನು ತೊರೆಯಲಿಲ್ಲ.

ಬೆಳಕು ಬೀರುತ್ತ ಬೆಳ್ಳಿ ಕಿರಣ ಓಡಿ ಒಂದು-
“ಹೂವೇ! ಹೂವೇ! ನಿನ್ನ ಸಖನ ನೆನಪಿಲ್ಲವೇ?” ಎಂದು ಕೇಳಿತು.
ಸುಮನದ ಧ್ಯಾನದ ರೆಪ್ಪೆ ದಳ ಅಲಗಲಿಲ್ಲ.
ಧ್ಯಾನದ ಮೌನ ಮುಂದುವರಿಯಿತು.

ಮಧ್ಯಾಹ್ನ ಸೂರ್‍ಯ ನೆತ್ತಿಗೇರಿ ಬಂದು ಹೂ ಹೃದಯವನ್ನು ಕಲುಕಲು ನೋಡಿದ. ಹೂವು ಉರಿಬಿಸಲನ್ನು ಸಹಿಸಿ ಧ್ಯಾನ ಮುಂದುವರಿಸಿತು.

ಮತ್ತೆ “ಸಂಧ್ಯಾ” ಮೆಲ್ಲನೆ ಹೆಜ್ಜೆ ಇಟ್ಟು ಬಂದು “ಕಣ್ಣು ಮುಚ್ಚಾಲೆ ಆಡೋಣವೇ”? ಎಂದು ಪಿಸು ಗುಟ್ಟಿತು.

“ಮೂಕ ಮೌನ, ಮುನಿಸೇಕೆ? ಬಾ ಸಖಿ” ಎಂದು ಗೋಗರಿಯಿತು.

ಹೂವು ಕಣ್ಣು ತೆರೆಯಲಿಲ್ಲ, ಬಾಯಿ ಬಿಡಲಿಲ್ಲ. ಮೌನದಲ್ಲಿ ಮುಂದುವರಿಯಿತು.

ಸಂಜೆಗತ್ತಲೆ ತೆರೆ ಎಳೆದೊಡನೆ “ನಿಶೆ” ಕತ್ತಲೆಯ ಹೊದಿಕೆ ಹೊದ್ದು ಕಳ್ಳನಂತೆ ಹೂ ಹೃದಯ ಕದಿಯಲು ಬಂದಿತು.

“ಮೇಲೆ, ಆಗಸ, ಚಂದ್ರಮನ ಚೆಲುವು ನೋಡು, ಬೆಳದಿಂಗಳ ಹಾಡು ಕೇಳು, ನಕ್ಷತ್ರದ ನಾಟ್ಯನೋಡು. ನಿಶಾ ತೊಳಿನ ಅಪ್ಪುಗೆಗೆ ನೀ ಬರಲು ಏಕೆ ತಡ? ಸುಮನ, ನಿನ್ನ ಸಮಾಗಮಕ್ಕಾಗಿ ನಾ ಪರಿತಪಿಸುತಿರುವೆ” ಎಂದಿತು. ಹೂವಿನ ಧ್ಯಾನ, ತಪ ಹಾಗೆ ಮುಂದುವರೆದಿತ್ತು.

ಮಧ್ಯರಾತ್ರಿ ಹಿಮ ಬಿರುಗಾಳಿ ಅಪ್ಪಳಿಸಿ ಬಂತು. ಹೂವಿನ ಪಕಳೆಗಳೆಲ್ಲಾ ಉದರಿ ಮಣ್ಣು ಸೇರಿತು. ಅದರೊಡನೆ ಹೂಗರ್‍ಭದಲ್ಲಿ ಅಡಗಿದ್ದ ಧ್ಯಾನ ಬೀಜ ಮೃಣ್ಮಯವ ಸೇರಿ ಚಿನ್ಮಯವಾಯಿತು. ಬಿರುಗಾಳಿಗೆ ಸೋಲಾಯಿತು. ಹೂವಿನ ಹೃದಯ ನನ್ನಾದಾಗಲಿಲ್ಲ ಎಂದು, ರೊಯ್ಯನೆ ರೋದಿಸುತ್ತ ಬೆಳಗು ಮೂಡುವುದರಲ್ಲಿ ಸಮುದ್ರಗರ್‍ಭದಲ್ಲಿ ಬಚ್ಚಿಟ್ಟು ಕೊಂಡಿತು. ಹೂ ಸಂಕಲ್ಪಕ್ಕೆ ಸ್ವರ್‍ಗ ಕೈಗೆಟುಕಿತ್ತು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...