Home / ಕವನ / ಕವಿತೆ / ಬರಲಿರುವ ದಿನ

ಬರಲಿರುವ ದಿನ

– ಪಲ್ಲವಿ –

ಬೇಗನೆ ಬಾ, ಬರಲಿರುವಾ
ಸವಿದಿನ ನೀನು…
ಸಾಗಿಸುವೆನು ಇಂದಿನ ಈ
ಕಹಿಬವಣೆಯನು!


ನಿನ್ನೆಯ ದಿನ ಹೋಯ್ತು, ಸಾಗಿ
ಬೇಕಿಹುದನು ಕೊಡಲೆ ಇಲ್ಲ;
ಇಂದಿನ ದಿನ ನಡೆದಿರುವುದು
ಹೇಗೊ ಕಾಲ ಸವೆಯುತಿಹುದು,
ಬೇಕಾದುದು ಬರಲೆ ಇಲ್ಲ!
ಬರಡೆ ಬಯಕೆಯೆಲ್ಲ…
ಗುರಿಯೆ ದೊರೆಯಲಿಲ್ಲ!


ಆದರೇನು ಅಲ್ಲ ವ್ಯರ್ಥ,
ನಿನ್ನೆ-ಇಂದಿಗಿಹುದು ಅರ್ಥ!
ಹೊಸ ಹೊಸ ನೋಟಗಳ ತೋರಿ
ಹೊಸ ಅನುಭವ ಬೀರಿ ಬೀರಿ,
ಕಲಿಸಿರುವುವು ಒಂದನು;
ಬರಿಯೆ ಬಯಕೆಗಿಂತ ಗೆಯ್ಮೆ
ಹಿರಿಯದೆಂಬ ಹೊಂದನು.


ಕಿವಿಯು ಕೇಳಬೇಕು ಶುಭವ,
ಕಣ್ಣು ನೋಡಬೇಕು ನಿಜವ,
ನಾಲಗೆ ನುಡಿದಾಡಬೇಕು
ಕೆಳೆ ತುಂಬಿದ ದಿಟವ !
ಕೈ ಒಳಿತಿಗೆ ಗೈಯಬೇಕು,
ಮನ ಶುಭವನೆ ನೆನೆಯಬೇಕು,
ಕಾಲು ನಡೆಯುತಿರಲೆಬೇಕು
ಅಮೃತದತ್ತ ತೆರಳಬೇಕು-
ಎಂಬನುಭವವ..
ಕಳೆದ ನಿನ್ನೆ ಕಳೆವ ಇಂದು
ಕೊಟ್ಟವೆ ತಿಳಿವ!
ನೀಡಿವೆ ವಿಭವ!


ಬರಲಿಹ ದಿನ ಬರಿಯದಲ್ಲ;
ನನ್ನಯ ಅನುಭವವಿದೆಲ್ಲ-
ನನ್ನ ಗೈಮೆಯೊಂಹೊಂದನು
ಹಣ್ಣಿಗಣಿಯ ಮಾಡದೇನು?
ಅಂದು ನನ್ನ ಮಿಡಿವ ಬಯಕೆ
ಬಯಲಾಗುವ ಭೀತಿಯೇಕೆ?
ಬರಲಿಹ ದಿನ ನಾಳೆ…
ನಾನು ಗೈಮೆಗೇಳೆ….
ಮನೆಯ ತುಂಬ ಕಾಳೇ!

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...