ಬರಲಿರುವ ದಿನ

– ಪಲ್ಲವಿ –

ಬೇಗನೆ ಬಾ, ಬರಲಿರುವಾ
ಸವಿದಿನ ನೀನು…
ಸಾಗಿಸುವೆನು ಇಂದಿನ ಈ
ಕಹಿಬವಣೆಯನು!


ನಿನ್ನೆಯ ದಿನ ಹೋಯ್ತು, ಸಾಗಿ
ಬೇಕಿಹುದನು ಕೊಡಲೆ ಇಲ್ಲ;
ಇಂದಿನ ದಿನ ನಡೆದಿರುವುದು
ಹೇಗೊ ಕಾಲ ಸವೆಯುತಿಹುದು,
ಬೇಕಾದುದು ಬರಲೆ ಇಲ್ಲ!
ಬರಡೆ ಬಯಕೆಯೆಲ್ಲ…
ಗುರಿಯೆ ದೊರೆಯಲಿಲ್ಲ!


ಆದರೇನು ಅಲ್ಲ ವ್ಯರ್ಥ,
ನಿನ್ನೆ-ಇಂದಿಗಿಹುದು ಅರ್ಥ!
ಹೊಸ ಹೊಸ ನೋಟಗಳ ತೋರಿ
ಹೊಸ ಅನುಭವ ಬೀರಿ ಬೀರಿ,
ಕಲಿಸಿರುವುವು ಒಂದನು;
ಬರಿಯೆ ಬಯಕೆಗಿಂತ ಗೆಯ್ಮೆ
ಹಿರಿಯದೆಂಬ ಹೊಂದನು.


ಕಿವಿಯು ಕೇಳಬೇಕು ಶುಭವ,
ಕಣ್ಣು ನೋಡಬೇಕು ನಿಜವ,
ನಾಲಗೆ ನುಡಿದಾಡಬೇಕು
ಕೆಳೆ ತುಂಬಿದ ದಿಟವ !
ಕೈ ಒಳಿತಿಗೆ ಗೈಯಬೇಕು,
ಮನ ಶುಭವನೆ ನೆನೆಯಬೇಕು,
ಕಾಲು ನಡೆಯುತಿರಲೆಬೇಕು
ಅಮೃತದತ್ತ ತೆರಳಬೇಕು-
ಎಂಬನುಭವವ..
ಕಳೆದ ನಿನ್ನೆ ಕಳೆವ ಇಂದು
ಕೊಟ್ಟವೆ ತಿಳಿವ!
ನೀಡಿವೆ ವಿಭವ!


ಬರಲಿಹ ದಿನ ಬರಿಯದಲ್ಲ;
ನನ್ನಯ ಅನುಭವವಿದೆಲ್ಲ-
ನನ್ನ ಗೈಮೆಯೊಂಹೊಂದನು
ಹಣ್ಣಿಗಣಿಯ ಮಾಡದೇನು?
ಅಂದು ನನ್ನ ಮಿಡಿವ ಬಯಕೆ
ಬಯಲಾಗುವ ಭೀತಿಯೇಕೆ?
ಬರಲಿಹ ದಿನ ನಾಳೆ…
ನಾನು ಗೈಮೆಗೇಳೆ….
ಮನೆಯ ತುಂಬ ಕಾಳೇ!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವದಾಸಿ ಪದ್ಧತಿ – ದೇವರ ಹೆಸರಲ್ಲಿ ಸ್ತ್ರೀ ದೌರ್‍ಜನ್ಯ
Next post ಶೆಲ್ಲಿ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…