ನಮಿಸುವೆನು ತಾಯೆ

ನಮಿಸುವೆನು ನಮಿಸುವೆನು ನಮಿಸುವೆನು ತಾಯೆ
ನಿನ್ನ ಪ್ರೀತಿಗೆ ಬಾಗಿ ಕೈಮುಗಿದೆ ಕಾಯೆ
ಜನಮನದಲಿ
ಗಿರಿವನದಲಿ
ಉಸಿರಾಗಿ ಹಸಿರಾಗಿ ಹರಿಯುತಿಹ ಮಾಯೆ

ಬಲ್ಲೆ ನಾ ನಿನ್ನ ದನಿ ಕಲರವದಲಿ
ಮೈಬಣ್ಣ ಉದಯಾಸ್ತ ಮುಗಿಲುಗಳಲಿ
ನಡಿಗೆಯಿದೆ ಹರಿಯುತಿಹ ತೊರೆಗಳಲ್ಲಿ
ಉಡಿಗೆ ಮೈಲಿಗಳುದ್ದ ಹಸಿರಿನಲ್ಲಿ

ಕಣ್ಣಿನೆಚ್ಚರವಾದ ಹಗಲಿನಲ್ಲಿ
ಕನಸಿನಚ್ಚರಿಯಾದ ರಾತ್ರಿಯಲ್ಲಿ
ನಿದ್ದೆ ಎಚ್ಚರಗಳಲಿ ಕಾಯುತಿರುವ
ಜೀವವನು ಅನುಭವಕೆ ತೇಯುತಿರುವೆ

ನಿನ್ನ ಕೀರ್ತಿಗೆ ಕಾದಿದವರು ನೆಲೆ ನಿಂತರು
ಇತಿಹಾಸದಲ್ಲಿ ಮನ ಹೂಡಿ
ನೀನಿತ್ತ ಮೈಮನಸು ನಿನ್ನದೆ ಇದೋ ಕೊಡುವೆ
ಕವಿದ ಜಡಭಾವ ದೂಡಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದಾನೊಂದು ದಿನ
Next post ಕನ್ನಡ

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…