ನಮಿಸುವೆನು ತಾಯೆ

ನಮಿಸುವೆನು ನಮಿಸುವೆನು ನಮಿಸುವೆನು ತಾಯೆ
ನಿನ್ನ ಪ್ರೀತಿಗೆ ಬಾಗಿ ಕೈಮುಗಿದೆ ಕಾಯೆ
ಜನಮನದಲಿ
ಗಿರಿವನದಲಿ
ಉಸಿರಾಗಿ ಹಸಿರಾಗಿ ಹರಿಯುತಿಹ ಮಾಯೆ

ಬಲ್ಲೆ ನಾ ನಿನ್ನ ದನಿ ಕಲರವದಲಿ
ಮೈಬಣ್ಣ ಉದಯಾಸ್ತ ಮುಗಿಲುಗಳಲಿ
ನಡಿಗೆಯಿದೆ ಹರಿಯುತಿಹ ತೊರೆಗಳಲ್ಲಿ
ಉಡಿಗೆ ಮೈಲಿಗಳುದ್ದ ಹಸಿರಿನಲ್ಲಿ

ಕಣ್ಣಿನೆಚ್ಚರವಾದ ಹಗಲಿನಲ್ಲಿ
ಕನಸಿನಚ್ಚರಿಯಾದ ರಾತ್ರಿಯಲ್ಲಿ
ನಿದ್ದೆ ಎಚ್ಚರಗಳಲಿ ಕಾಯುತಿರುವ
ಜೀವವನು ಅನುಭವಕೆ ತೇಯುತಿರುವೆ

ನಿನ್ನ ಕೀರ್ತಿಗೆ ಕಾದಿದವರು ನೆಲೆ ನಿಂತರು
ಇತಿಹಾಸದಲ್ಲಿ ಮನ ಹೂಡಿ
ನೀನಿತ್ತ ಮೈಮನಸು ನಿನ್ನದೆ ಇದೋ ಕೊಡುವೆ
ಕವಿದ ಜಡಭಾವ ದೂಡಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದಾನೊಂದು ದಿನ
Next post ಕನ್ನಡ

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…