Home / ಕವನ / ಕವಿತೆ / ಒಂದಾನೊಂದು ದಿನ

ಒಂದಾನೊಂದು ದಿನ

ಒಂದು ಸುಡುಬಿಸಿಲು ಮಧ್ಯಾಹ್ನ
ನನ್ನ ನೆರಳು ನಾನೇ
ನೋಡುತ್ತ ನಿಂತಿದ್ದೆ

ಅಂದು ಸಂತೆಯ ದಿನ
ಒಬ್ಬರ ಸುಳಿವಿಲ್ಲ

ನಿದ್ದೆ ಬಂದಂತಾಗಿ ಆಕಳಿಸಿದೆ
ನಾಯಿಯೊಂದು ಬಂದು
ಕಾಲೆತ್ತಿ
ಉಚ್ಚೆ ಒಯ್ದು ಹೋಯಿತು
ನನ್ನ ನೆರಳು ಸ್ವಲ್ಫ09
ಸರಿದಂತೆನಿಸಿತು

ನಿರ್ದಯಿ ಸೂರ್ಯ
ನನ್ನೊಳಗಿನಿಂದ
ಉದುರಿ ಬಿದ್ದಿದ್ದ
ಒಣಗಿದ ಎಲೆಗಳ ಮೇಲೆ
ಆಕ್ರಮಣಕ್ಕೆ ಪ್ರಯತ್ನಿಸುತ್ತಿದ್ದ

ಗಾಳಿ ಉಸಿರುಗಟ್ಟಿದಂತೆ
ಆಗೊಮ್ಮೆ ಈಗೊಮ್ಮೆ ಬಿಕ್ಕುತ್ತಿತ್ತು

ನನ್ನ ನೆರಳು
ದೂರ
ನನ್ನ ಬಿಟ್ಟು ಜಾರಿದಂತಿತ್ತು

ನೋಡುತ್ತಿರುವಂತೆ
ಒಬ್ಬ ಹುಡುಗ ಒಂದು ಹುಡುಗಿ
ನನ್ನತ್ತಲೇ ಬಂದು
ಒತ್ತಿಕೊಂಡು
ಕುಳಿತರು
ತುಂಬಾ ಹೊತ್ತು
ಮಾತನಾಡಿದರು
ನಡು ನಡುವೆ ಅತ್ತರು
ಎದ್ದು ಹೋಗುವಾಗ
ನಕ್ಕರು

ಕದ್ದು ಕದ್ದು ನೋಡುತ್ತಿದ್ದ
ಸೂರ್ಯ
ಸೀದಾ ಬಂದವನೆ ಕೇಳಿದ
’ಏನು ಮಾಡಿದೆ,
ಸಾಯಲೆಂದು ಬಂದವರು
ಬದುಕಲೆಂದು ಹಿಂದಿರುಗಿದರು?’

ಏನು ಹೇಳಲಿ?
ಹಸಿರೆಲೆಯನೊಮ್ಮೆ
ಬಿದ್ದ ಒಣ ಎಲೆಯನೊಮ್ಮೆ
ಪ್ರೀತಿಯಿಂದ
ದಿಟ್ಟಿಸಿ ನೋಡಿ
ನಕ್ಕೆ

ಗಾಳಿ ತೆಳ್ಳಗೆ ಬೀಸಲು ಶುರುವಿಟ್ಟಿತು
ನನ್ನ ನೆರಳು
ನಾಳಿನ ಬೆಳಗಿಗಾಗಿ ಕಾಯುತ್ತ
ಒಡಲೊಳಗೆ ಸೇರಿಬಿಟ್ಟಿತು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...