ಒಂದಾನೊಂದು ದಿನ

ಒಂದು ಸುಡುಬಿಸಿಲು ಮಧ್ಯಾಹ್ನ
ನನ್ನ ನೆರಳು ನಾನೇ
ನೋಡುತ್ತ ನಿಂತಿದ್ದೆ

ಅಂದು ಸಂತೆಯ ದಿನ
ಒಬ್ಬರ ಸುಳಿವಿಲ್ಲ

ನಿದ್ದೆ ಬಂದಂತಾಗಿ ಆಕಳಿಸಿದೆ
ನಾಯಿಯೊಂದು ಬಂದು
ಕಾಲೆತ್ತಿ
ಉಚ್ಚೆ ಒಯ್ದು ಹೋಯಿತು
ನನ್ನ ನೆರಳು ಸ್ವಲ್ಫ09
ಸರಿದಂತೆನಿಸಿತು

ನಿರ್ದಯಿ ಸೂರ್ಯ
ನನ್ನೊಳಗಿನಿಂದ
ಉದುರಿ ಬಿದ್ದಿದ್ದ
ಒಣಗಿದ ಎಲೆಗಳ ಮೇಲೆ
ಆಕ್ರಮಣಕ್ಕೆ ಪ್ರಯತ್ನಿಸುತ್ತಿದ್ದ

ಗಾಳಿ ಉಸಿರುಗಟ್ಟಿದಂತೆ
ಆಗೊಮ್ಮೆ ಈಗೊಮ್ಮೆ ಬಿಕ್ಕುತ್ತಿತ್ತು

ನನ್ನ ನೆರಳು
ದೂರ
ನನ್ನ ಬಿಟ್ಟು ಜಾರಿದಂತಿತ್ತು

ನೋಡುತ್ತಿರುವಂತೆ
ಒಬ್ಬ ಹುಡುಗ ಒಂದು ಹುಡುಗಿ
ನನ್ನತ್ತಲೇ ಬಂದು
ಒತ್ತಿಕೊಂಡು
ಕುಳಿತರು
ತುಂಬಾ ಹೊತ್ತು
ಮಾತನಾಡಿದರು
ನಡು ನಡುವೆ ಅತ್ತರು
ಎದ್ದು ಹೋಗುವಾಗ
ನಕ್ಕರು

ಕದ್ದು ಕದ್ದು ನೋಡುತ್ತಿದ್ದ
ಸೂರ್ಯ
ಸೀದಾ ಬಂದವನೆ ಕೇಳಿದ
’ಏನು ಮಾಡಿದೆ,
ಸಾಯಲೆಂದು ಬಂದವರು
ಬದುಕಲೆಂದು ಹಿಂದಿರುಗಿದರು?’

ಏನು ಹೇಳಲಿ?
ಹಸಿರೆಲೆಯನೊಮ್ಮೆ
ಬಿದ್ದ ಒಣ ಎಲೆಯನೊಮ್ಮೆ
ಪ್ರೀತಿಯಿಂದ
ದಿಟ್ಟಿಸಿ ನೋಡಿ
ನಕ್ಕೆ

ಗಾಳಿ ತೆಳ್ಳಗೆ ಬೀಸಲು ಶುರುವಿಟ್ಟಿತು
ನನ್ನ ನೆರಳು
ನಾಳಿನ ಬೆಳಗಿಗಾಗಿ ಕಾಯುತ್ತ
ಒಡಲೊಳಗೆ ಸೇರಿಬಿಟ್ಟಿತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಗಿಲು ಸುರಿಸುವುದು ನೀರು
Next post ನಮಿಸುವೆನು ತಾಯೆ

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…