ಬೇಸಿಗೆಯ ಒಂದಿರುಳು
ತಡೆಯಲಾರದೆ ಸೆಖೆ,
ಬಿಸಿಲು ಮೆಚ್ಚೆಯ ಮೇಲೆ
ಮೈಯೊಡ್ಡಿ ತಂಗಾಳಿಗೆ
ಮಲಗಿದ್ದಾಗ ಅಂಗಾತ –
ಮೇಲೆ ನೀಲಾಕಾಶ
ಶಾಂತ ಸಾಗರ ಸದೃಶ.
ನೀಲಿ ವೆಲ್ವೆಟ್ ಬಟ್ಟೆ
ಮೇಲೆ ಹರಡಿದ ಚಮಕಿ,
ಅಸಂಖ್ಯ ಆಕಾಶ ಕಾಯಗಳ,
ಕ್ಷೀರ ಪಥ, ನಕ್ಷತ್ರ ಪುಂಜಗಳ,
ಸೌರವ್ಯೂಹಗಳ ಮಧ್ಯದಲ್ಲೊಂದು
ನಮ್ಮ ಭೂಮಿಯಂಥದೇ ಗ್ರಹ!
ಅಲ್ಲೂ ನಮ್ಮಂತಹ ಮನುಜರು
ಸುರ ಸುಂದರರು, ತೇಜಃಪುಂಜರು.
ರೆಕ್ಕೆ ಇಲ್ಲದ ಚೆಲುವೆ
ರಂಭೆಯಂತಹ ದೇವತೆ
ಜ್ಯೋತಿ ವರ್ಷಗಳ ದೂರದಿಂದ
ಕರೆಯುತಿಹಳೆನ್ನ ಪ್ರೇಮದಿಂದ!
ಏಳಲಾರೆನು ನಾ ಹೆಳವ
ತೀರಿಸಲಾರದೆ ಋಣವ
ಬಿಡಿಸಲಾರದೆ ಬಂಧನವ
ಮಹಡಿಯ ನೆಲ ಕಚ್ಚಿರುವೆ
ನಾ ಬರಲಾರೆ ಚೆಲುವೆ
ನೀನಿರುವಲ್ಲಿಗೆ.
ನಾ ಇರುವೆ ಇಲ್ಲೇ
ನೀನಿರು ಅಲ್ಲೇ
ನನ್ನ ನೋವ ಕೇಳು
ಇಳಿಸು ಹೆಗಲ ಭಾರವ
ತಣಿಸು ತೀರದ ದಾಹವ
ನನ್ನ ನಿನ್ನ ಗುಪ್ತ ಸ್ನೇಹಭಾವ
ಹೀಗೆಯೇ ಇರಲಿ ಚಿರಂತನ.
*****
೨೧-೧೨-೧೯೯೩
Related Post
ಸಣ್ಣ ಕತೆ
-
ಹಳ್ಳಿ…
ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…
-
ಕನಸುಗಳಿಗೆ ದಡಗಳಿರುದಿಲ್ಲ
ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…
-
ತಿಥಿ
"ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…
-
ಉರಿವ ಮಹಡಿಯ ಒಳಗೆ
ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…
-
ಮೇಷ್ಟ್ರು ಮುನಿಸಾಮಿ
ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ.… Read more…