ಚಿರಂತನ

ಬೇಸಿಗೆಯ ಒಂದಿರುಳು
ತಡೆಯಲಾರದೆ ಸೆಖೆ,
ಬಿಸಿಲು ಮೆಚ್ಚೆಯ ಮೇಲೆ
ಮೈಯೊಡ್ಡಿ ತಂಗಾಳಿಗೆ
ಮಲಗಿದ್ದಾಗ ಅಂಗಾತ –
ಮೇಲೆ ನೀಲಾಕಾಶ
ಶಾಂತ ಸಾಗರ ಸದೃಶ.
ನೀಲಿ ವೆಲ್ವೆಟ್ ಬಟ್ಟೆ
ಮೇಲೆ ಹರಡಿದ ಚಮಕಿ,
ಅಸಂಖ್ಯ ಆಕಾಶ ಕಾಯಗಳ,
ಕ್ಷೀರ ಪಥ, ನಕ್ಷತ್ರ ಪುಂಜಗಳ,
ಸೌರವ್ಯೂಹಗಳ ಮಧ್ಯದಲ್ಲೊಂದು
ನಮ್ಮ ಭೂಮಿಯಂಥದೇ ಗ್ರಹ!
ಅಲ್ಲೂ ನಮ್ಮಂತಹ ಮನುಜರು
ಸುರ ಸುಂದರರು, ತೇಜಃಪುಂಜರು.
ರೆಕ್ಕೆ ಇಲ್ಲದ ಚೆಲುವೆ
ರಂಭೆಯಂತಹ ದೇವತೆ
ಜ್ಯೋತಿ ವರ್ಷಗಳ ದೂರದಿಂದ
ಕರೆಯುತಿಹಳೆನ್ನ ಪ್ರೇಮದಿಂದ!
ಏಳಲಾರೆನು ನಾ ಹೆಳವ
ತೀರಿಸಲಾರದೆ ಋಣವ
ಬಿಡಿಸಲಾರದೆ ಬಂಧನವ
ಮಹಡಿಯ ನೆಲ ಕಚ್ಚಿರುವೆ
ನಾ ಬರಲಾರೆ ಚೆಲುವೆ
ನೀನಿರುವಲ್ಲಿಗೆ.
ನಾ ಇರುವೆ ಇಲ್ಲೇ
ನೀನಿರು ಅಲ್ಲೇ
ನನ್ನ ನೋವ ಕೇಳು
ಇಳಿಸು ಹೆಗಲ ಭಾರವ
ತಣಿಸು ತೀರದ ದಾಹವ
ನನ್ನ ನಿನ್ನ ಗುಪ್ತ ಸ್ನೇಹಭಾವ
ಹೀಗೆಯೇ ಇರಲಿ ಚಿರಂತನ.
*****
೨೧-೧೨-೧೯೯೩

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವರು ಪಗಡೆಯಾಡುವುದಿಲ್ಲ, ಆದರೆ ಇಸ್ಪೀಟು ಆಡುತ್ತಾನೆ?
Next post ಹಸಿರ ಸೀಮಂತ

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…