ಬೇಸಿಗೆಯ ಒಂದಿರುಳು
ತಡೆಯಲಾರದೆ ಸೆಖೆ,
ಬಿಸಿಲು ಮೆಚ್ಚೆಯ ಮೇಲೆ
ಮೈಯೊಡ್ಡಿ ತಂಗಾಳಿಗೆ
ಮಲಗಿದ್ದಾಗ ಅಂಗಾತ –
ಮೇಲೆ ನೀಲಾಕಾಶ
ಶಾಂತ ಸಾಗರ ಸದೃಶ.
ನೀಲಿ ವೆಲ್ವೆಟ್ ಬಟ್ಟೆ
ಮೇಲೆ ಹರಡಿದ ಚಮಕಿ,
ಅಸಂಖ್ಯ ಆಕಾಶ ಕಾಯಗಳ,
ಕ್ಷೀರ ಪಥ, ನಕ್ಷತ್ರ ಪುಂಜಗಳ,
ಸೌರವ್ಯೂಹಗಳ ಮಧ್ಯದಲ್ಲೊಂದು
ನಮ್ಮ ಭೂಮಿಯಂಥದೇ ಗ್ರಹ!
ಅಲ್ಲೂ ನಮ್ಮಂತಹ ಮನುಜರು
ಸುರ ಸುಂದರರು, ತೇಜಃಪುಂಜರು.
ರೆಕ್ಕೆ ಇಲ್ಲದ ಚೆಲುವೆ
ರಂಭೆಯಂತಹ ದೇವತೆ
ಜ್ಯೋತಿ ವರ್ಷಗಳ ದೂರದಿಂದ
ಕರೆಯುತಿಹಳೆನ್ನ ಪ್ರೇಮದಿಂದ!
ಏಳಲಾರೆನು ನಾ ಹೆಳವ
ತೀರಿಸಲಾರದೆ ಋಣವ
ಬಿಡಿಸಲಾರದೆ ಬಂಧನವ
ಮಹಡಿಯ ನೆಲ ಕಚ್ಚಿರುವೆ
ನಾ ಬರಲಾರೆ ಚೆಲುವೆ
ನೀನಿರುವಲ್ಲಿಗೆ.
ನಾ ಇರುವೆ ಇಲ್ಲೇ
ನೀನಿರು ಅಲ್ಲೇ
ನನ್ನ ನೋವ ಕೇಳು
ಇಳಿಸು ಹೆಗಲ ಭಾರವ
ತಣಿಸು ತೀರದ ದಾಹವ
ನನ್ನ ನಿನ್ನ ಗುಪ್ತ ಸ್ನೇಹಭಾವ
ಹೀಗೆಯೇ ಇರಲಿ ಚಿರಂತನ.
*****
೨೧-೧೨-೧೯೯೩
Related Post
ಸಣ್ಣ ಕತೆ
-
ಹಳ್ಳಿ…
ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…
-
ಒಂದು ಹಿಡಿ ಪ್ರೀತಿ
ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…
-
ಹನುಮಂತನ ಕಥೆ
ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…
-
ರಾಮಿ
‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…
-
ಅವರು ನಮ್ಮವರಲ್ಲ
ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…