ಹಸಿರ ಸೀಮಂತ

ಯುಗದ ಆದಿ ಯುಗಾದಿ
ಭುವಿಗೆ ಇನ್ನು ಹೊಸ ಕಾಂತಿ
ಹಸಿರ ಹೊತ್ತ ಗಿಡಮರಗಳು
ಹಾತೊರೆದು ನಿಂತಿವೆ
ನವ ಯುಗದ ಸ್ವಾಗತಕೆ

ಕೋಗಿಲೆಗಳ ಇಂಚರದಿ
ಮಂಗಳಕರ ನಾದದಲಿ
ಭೂರಮೆಯು ಕೈ ಬೀಸಿ
ಕರೆಯುವಳು ನಮ್ಮನ್ನೆಲ್ಲ
ಹೊಸ ವರುಷದ ಹೊನಲಿಗೆ

ಚೈತ್ರದಲಿ ಚಿಗುರೊಡೆದು
ಹೊಸ ಜನ್ಮವ ತಾ ತಳೆದು
ಹಸಿರಲ್ಲಿ ಮೊಗ್ಗಾಗಿ
ಮೊಗ್ಗುಗಳೆಲ್ಲ ಹೂವಾಗಿ
ಮಡಿಲಲ್ಲಿ ಫಲವ ಹೊತ್ತಿಹಳು

ಹೆಣ್ಣೊಂದು ಬಸಿರಾಗಿ
ಸೀಮಂತಕೆ ಅಣಿಯಾದಂತೆ
ಹಸಿರೆಲ್ಲ ಬಸಿರಾಗಿ ನಿಂತು
ಸೀಮಂತ ತನಗೂ ಬೇಕೆಂದಿದೆ
ಈ ಯುಗಾದಿ ದಿನದಂದೇ

ಸಹೋದರರೆಲ್ಲ ಸೇರಬನ್ನಿ
ಸಹೋದರಿಯರನ್ನ ಜೊತೆಗೆ ಕರೆತನ್ನಿ
ಜಾತಿ, ಧರ್ಮ, ಭಾಷೆಗಳ ಭೇದ ತೊರೆದು
ಮಾಡೋಣ ಸೀಮಂತವ ನಾವೆಲ್ಲ ಇಂದು
ಫಲ ಹೊತ್ತ ಹಸಿರ ಸಿರಿ ದೇವಿಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಿರಂತನ
Next post ವ್ಯತ್ಯಾಸ

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…