Home / ಕವನ / ಕವಿತೆ / ಎಚ್ಚರಿಕೆ

ಎಚ್ಚರಿಕೆ

ಬಂಧನವರಿಯದೆ
ಸುಖವನು ಬಯಸದೆ
ಬೆಳೆಯುತ ಬರುತಿಹಳೀ ಸೀತೆ

ನಿರುತವು ಶ್ರಾವ್ಯದ
ಗಾನವನೊರೆವಳು
ಕಿರುನಗೆ ಮೊಗದೊಳು ಸುಪ್ರೀತೆ

ಗಾಯಕಿ ನಿನ್ನಯ
ಗಾನವ ಕೇಳಲು
ಕಾತರರಾಗಿಹೆವೆಂದೊಡನೆ

ಕಂಗಳ ಮುಚ್ಚುತ
ತಾಳವ ತಟ್ಟುತ
ಝೇಂಕೃತನಾದವ ಗೆಯ್ಯುವಳು

ಗಾನದ ಸಾಗರ-
ದಲೆಗಳ ಸೆಳೆತದಿ
ತೂಗಿಸಿ ತೇಲಿಸಿ ನಲಿಸುವಳೂ

ವಾಣಿಯ ವೀಚಿಯ
ಮಾಲೆಯ ಪೋಣಿಸಿ
ಕ್ಷಣದೊಳು ಮೆಯ್ಯನು ಮರೆಸುವಳು

ನಿಸ್ಪೃಹ ಮನಸಿನ
ನಮ್ಮೀ ಸೀತೆಗೆ
ಓದುವುದೆಂದರೆ ಹಿರಿಯಾಸೆ

ಹೇಳಲು ಬಾರದ
ಸುಖವನು ನೀಡುವ
ಕಲೆಗಳ ಕಂಡರೆ ಬಹುಪ್ರೀತಿ

ಚಿಗುರಿದ ಲತೆಯೊಳು
ಅರಳುತ ಬರುತಿಹ
ಕುಸುಮವ ಹೋಲುವ ಓ ಸೀತೇ

ವಿಶ್ವದ ರಂಗದಿ
ನಾನಾ ಬಗೆಗಳ
ಯಂತ್ರಗಳಿರುವುವು ಎಚ್ಚರಿಕೆ

ಕಣ್ಣಿಗೆ ಕಾಣದ
ಸ್ಥಳದೊಳು ಕೆಲವೆಡೆ
ಮಣ್ಣೊಳು ಹುದುಗಿವೆ ವಜ್ರಗಳು

ಹೊನ್ನಿನ ರಾಸಿಯ
ಮಧ್ಯದಿ ಕೆಲವೆಡೆ
ಸರ್ಪಗಳಿರುವುವು ಎಚ್ಚರಿಕೆ

ಭಾವದಿ ತುಂಬಿದೆ
ದೇವನ ಸೃಷ್ಟಿಯು
ಎಂಬುದನೆಂದಿಗು ಮರೆಯದಿರು

ಮೇಘವ ಚುಂಬಿಸಿ
ಗಗನದಿ ಸುಳಿಯುತ
ಹಾರುವ ಹಕ್ಕಿಯ ತೆರದೊಳಿರು

ಕಲ್ಮಷವಿಲ್ಲದ
ನಿನ್ನೀ ಹೃದಯದಿ
ಮುಳ್ಳಿನ ಕಂಪೆಯ ಹರಡದಿರು

ಕಷ್ಟದಿ ನರಳುವ
ಜನರಿಗೆ ಮರುಗುತ
ಸಾಯವ ಮಾಳ್ಪುದ ಮರೆಯದಿರು

ಹೇಳಲು ಬಾರದ
ಸುಖವನು ನೀಡುವ
ಕಲೆಗಳ ಬಯಸುವ ಓ ಸೀತೇ

ಸುಖ ಸ್ವಾತಂತ್ರ್‍ಯದ
ಗೈಮೆಯ ಫಲವನು
ಸೃಷ್ಟಿಯ ಕರ್ತನೆ ಉಣುತಿರಲಿ

ಬಂಧನ ರಹಿತದ
ನಿನ್ನೀ ಬಾಳ್ವೆಗೆ
ಸೃಷ್ಟಿಯ ಕರ್ತನ ಒಲವಿರಲಿ

ಎಂದಳು ಕಿವಿಯೊಳು
ಪ್ರೀತಿಯ ತಂಗಿಗೆ
ಸೀತೆಯ ಸೋದರಿ ಜನಕಜೆಯು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...