Home / ಕವನ / ಕವಿತೆ / ಎಚ್ಚರಿಕೆ

ಎಚ್ಚರಿಕೆ

ಬಂಧನವರಿಯದೆ
ಸುಖವನು ಬಯಸದೆ
ಬೆಳೆಯುತ ಬರುತಿಹಳೀ ಸೀತೆ

ನಿರುತವು ಶ್ರಾವ್ಯದ
ಗಾನವನೊರೆವಳು
ಕಿರುನಗೆ ಮೊಗದೊಳು ಸುಪ್ರೀತೆ

ಗಾಯಕಿ ನಿನ್ನಯ
ಗಾನವ ಕೇಳಲು
ಕಾತರರಾಗಿಹೆವೆಂದೊಡನೆ

ಕಂಗಳ ಮುಚ್ಚುತ
ತಾಳವ ತಟ್ಟುತ
ಝೇಂಕೃತನಾದವ ಗೆಯ್ಯುವಳು

ಗಾನದ ಸಾಗರ-
ದಲೆಗಳ ಸೆಳೆತದಿ
ತೂಗಿಸಿ ತೇಲಿಸಿ ನಲಿಸುವಳೂ

ವಾಣಿಯ ವೀಚಿಯ
ಮಾಲೆಯ ಪೋಣಿಸಿ
ಕ್ಷಣದೊಳು ಮೆಯ್ಯನು ಮರೆಸುವಳು

ನಿಸ್ಪೃಹ ಮನಸಿನ
ನಮ್ಮೀ ಸೀತೆಗೆ
ಓದುವುದೆಂದರೆ ಹಿರಿಯಾಸೆ

ಹೇಳಲು ಬಾರದ
ಸುಖವನು ನೀಡುವ
ಕಲೆಗಳ ಕಂಡರೆ ಬಹುಪ್ರೀತಿ

ಚಿಗುರಿದ ಲತೆಯೊಳು
ಅರಳುತ ಬರುತಿಹ
ಕುಸುಮವ ಹೋಲುವ ಓ ಸೀತೇ

ವಿಶ್ವದ ರಂಗದಿ
ನಾನಾ ಬಗೆಗಳ
ಯಂತ್ರಗಳಿರುವುವು ಎಚ್ಚರಿಕೆ

ಕಣ್ಣಿಗೆ ಕಾಣದ
ಸ್ಥಳದೊಳು ಕೆಲವೆಡೆ
ಮಣ್ಣೊಳು ಹುದುಗಿವೆ ವಜ್ರಗಳು

ಹೊನ್ನಿನ ರಾಸಿಯ
ಮಧ್ಯದಿ ಕೆಲವೆಡೆ
ಸರ್ಪಗಳಿರುವುವು ಎಚ್ಚರಿಕೆ

ಭಾವದಿ ತುಂಬಿದೆ
ದೇವನ ಸೃಷ್ಟಿಯು
ಎಂಬುದನೆಂದಿಗು ಮರೆಯದಿರು

ಮೇಘವ ಚುಂಬಿಸಿ
ಗಗನದಿ ಸುಳಿಯುತ
ಹಾರುವ ಹಕ್ಕಿಯ ತೆರದೊಳಿರು

ಕಲ್ಮಷವಿಲ್ಲದ
ನಿನ್ನೀ ಹೃದಯದಿ
ಮುಳ್ಳಿನ ಕಂಪೆಯ ಹರಡದಿರು

ಕಷ್ಟದಿ ನರಳುವ
ಜನರಿಗೆ ಮರುಗುತ
ಸಾಯವ ಮಾಳ್ಪುದ ಮರೆಯದಿರು

ಹೇಳಲು ಬಾರದ
ಸುಖವನು ನೀಡುವ
ಕಲೆಗಳ ಬಯಸುವ ಓ ಸೀತೇ

ಸುಖ ಸ್ವಾತಂತ್ರ್‍ಯದ
ಗೈಮೆಯ ಫಲವನು
ಸೃಷ್ಟಿಯ ಕರ್ತನೆ ಉಣುತಿರಲಿ

ಬಂಧನ ರಹಿತದ
ನಿನ್ನೀ ಬಾಳ್ವೆಗೆ
ಸೃಷ್ಟಿಯ ಕರ್ತನ ಒಲವಿರಲಿ

ಎಂದಳು ಕಿವಿಯೊಳು
ಪ್ರೀತಿಯ ತಂಗಿಗೆ
ಸೀತೆಯ ಸೋದರಿ ಜನಕಜೆಯು
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...