Home / ಕವನ / ಕವಿತೆ / ಆನೆಗಳು ಎರಡು ವಿಧ

ಆನೆಗಳು ಎರಡು ವಿಧ

ಆನೆಗಳು ಎರಡು ವಿಧ-ಕಾಡಾನೆಗಳೆಂದು ನೀರಾನೆಗ-
ಳೆಂದು. ಆದರೆ ಆರಂಭದಲ್ಲಿ ಮಾತ್ರ ಇಂಥ ವ್ಯತ್ಯಾ-
ಸವೇ ಇರಲಿಲ್ಲ- ಎಲ್ಲ ಆನೆಗಳೂ ನೀರೊಳಗೇ
ಇದ್ದುವು. ಜಲಾಂತರ್ಗಾಮಿಗಳಾಗಿ ತಿರುಗಾಡುತಿದ್ದುವು
ದೊಡ್ಡ ತೆರೆಗಳನೆಬ್ಬಿಸುತ್ತ ಈಜಾಡಿಕೊಂಡಿದ್ದುವು
ಪ್ರೀತಿ ಜಗಳ ಹೋರಾಟ ಜನನ ಮರಣ ಎಲ್ಲವೂ ಅಲ್ಲಿಯೇ
ಆಗ ಕೆಲವಾನೆಗಳೆಂದುವು-ಛೇ ಇದೆಂಥ ಬಾಳು!
ಕೇವಲ ಮೀನು ಕಪ್ಪೆಗಳಂತೆ ನಾವು ಯಾವಾಗಲೂ
ನೀರೊಳಗೆ ಅಡಗುವುದೇ ?! ಇಷ್ಟು ಭಾರೀ ದೇಹವನು
ಹೊತ್ತಿದ್ದು ಮಳೆಗೆ ನೆರೆಗೆ ಝಂಝಾವಾತಕ್ಕೆ
ಗುರಿಯಾಗಿ! ಆನೆಯ ವಂಶದವರೇ! ದಂಡೆಯೇರಲು
ಧೈರ್ಯವಿದ್ದವರೆಲ್ಲ ಬನ್ನಿ ಮುಂದೆ! ಅದೋ ಬಯಲು
ಅದೋ ಅರಣ್ಯ! ಅದೋ ಘಟ್ಟ! ಅದೋ ಅದೋ
ಪರ್ವತದ ಶಿಖರಗಳು!

ದೊಡ್ಡಾನೆ ಸಣ್ಣಾನೆ ಮರಿಯಾನೆಗಳೆಂದು ಅನೇಕ
ಆನೆಗಳು ತಾ ಮುಂದೆ ತಾ ಮುಂದೆ ಎನ್ನುತ್ತ
ಹತ್ತಿದುವು ದಂಡೆ ಹಾದುವು ಬಯಲು ಹೊಕ್ಕವು ಅರಣ್ಯ
ಏರಿದುವು ಘಟ್ಟ ಅಲೆದುವು ಪರ್ವತದ ಶಿಖರಗಳ
ಮೊದಮೊದಲು ತುಸು ಕಷ್ಟವೇ ಆಯಿತು ಅವಕ್ಕೆ
ಉಸಿರುಗಟ್ಟಿದಂತಾಯಿತು ದೇಹ ತೂಗಿ ತೊನೆ-
ದಂತಾಯಿತು ಎಲ್ಲ ಕೇವಲ ಕೆಲವೇ ವರ್ಷಗಳು
ಕ್ರಮೇಣ ಕಿವಿಗಳು ಗೆರಸೆಗಳಾದುವು ಪಾದಗಳು
ಗೊರಸೆಯಾದುವು ಎಲ್ಲಕ್ಕಿಂತ ಮುಖ್ಯ ಮೂಗು
ಮಹಾಸೊಂಡಿಲಾಯಿತು ಹಲ್ಲುಗಳು ಉಕ್ಕಿನ ಖಡ್ಗ –
ದಂತಾದುವು ಇಂಥ ಕಾಡಾನೆಗಳಿಗೆ ಮೃಗರಾಜನೆಂಬ
ಬಿರುದೂ ಬಂತು. ಅವು ಘೊಳ್ಳನೆ ಘೀಳಿಟ್ಟು
ನೀರಾನೆಗಳನ್ನು ಹಂಗಿಸಿದುವು. ನೀರಾನೆಗಳು ಪಾಪ!
ಹುಟ್ಟಾ ಆಲಸಿಗಳು ಇದ್ದಲ್ಲಿ ಇರುವಂಥ ಧಡ್ಡರು
ಯಾವ ಸಾಹಸವನ್ನೂ ಕೈಗೊಳ್ಳದ ದಪ್ಟಚರ್ಮದ
ಮೈಗಳ್ಳರು.

ಕಾಡಾನೆಗಳು ತಾನೆ ಎಷ್ಟು ಕಾಲ ಸ್ವೇಚ್ಛೆಯಿಂದ
ಇದ್ದಾವು? ಅವು ಖೆಡ್ಡಾದಲ್ಲಿ ಬಿದ್ದುವು. ಮನುಷ್ಯರ
ಕೈಯಲ್ಲಿ ಸಿಕ್ಕಿದುವು. ಮಾವುತರೆಂಬ ಜನರಿಂದ
ಅಂಕುಶದ ತಿವಿತ ಅನುಭವಿಸುತ್ತ ಭಾರವಾದ
ವಸ್ತುಗಳನ್ನು ಎಳೆಯತೊಡಗಿದುವು. ಜಾತ್ರೆಯಲ್ಲಿ
ದೇವರನ್ನು ಹೊರತೊಡಗಿದುವು ಈಗೀಗ ಅವು
ಸರ್ಕಸ್ಸಿನಲ್ಲಿ ಎಗರಾಡುತ್ತವೆ ಪಾರ್ಕುಗಳಲ್ಲಿ ಮಕ್ಕಳಿಗೆ
ಅಶ್ಚರ್ಯದ ಪ್ರಾಣಿಗಳಾಗಿ ನಿಲ್ಲುತ್ತವೆ-ಇತ್ತ ನೀರಾನೆಗಳು
ಜೀವವಿಕಾಸವನ್ನೆ ಧಿಕ್ಕರಿಸಿವೆಯೊ ಮರೆತಿವೆಯೊ
ಜಲದೊಳಗಿನ ನಾದಜಗತ್ತಿನಲ್ಲಿ ಮೈಮಮರೆತಿವೆಯೊ
ಹೇಳುವುದು ಹೇಗೆ ? ಅವುಗಳ ನಡುವೆ ಈಚೆಗೆ
ಮುಂದಾಳುಗಳು ಯಾರೂ ಬಂದಿಲ್ಲ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...