ವ್ಯತ್ಯಾಸ

ಸ್ವಚ್ಚಂದ ಬೆಳಕಿನಲಿ
ಅಟ್ಟ ಅಡುಗೆಯ ಉಂಡು
ಆಕಾಶ ಭೂಮಿಗಳೇ
ನೆಲ ಮಾಡುಗೊಂಡು
ನಾಳೆ ಎಂಬುದ ಮರೆತು
ಇಂದಿಂದೆ ಬದುಕುವರು
ಅಲೆಮಾರಿ ಜನರು

ಚಿಂತೆಯಂಬ ಬೊಂತೆಗೆ
ಒಂದೊಂದು ಗುಂಡು
ಗೋಲಿಯ ಹೊಡೆದು
ತಣ್ಣೆಯನ್ನಕ್ಕೆ ಉಪ್ಪು
ಮೆಣಸು ನುರಿದು

ದಿನ ದಿನವೂ ಹೊಸ
ರುಚಿ ಹಿಂಜಿ ಅರೆದು
ಅಂದದಲಿ ಕೂಡಿಹರು
ಜೋಪಡಿಯ ಜನರು

ರಟ್ಟೆ ಗುಟ್ಟನ್ನು ಅರಿತು
ಕರ್ಮ ತತ್ವದಿ ಬೆರೆತು
ಸುಖ ದುಃಖ ಸಹಿಸಿ
ಸಹಿ ಕಹಿಯ ಬೆರೆಸಿ
ಹಂಗಿನಾಳಗದೆ ಹಿಗ್ಗಿ
ಸಂತೃಪ್ತ ಸಾಧಕರು
ಶ್ರಮಿಕ ಜನರು

ಮೆರೆದ ಮೊರೆತದ ನಡುವೆ
ಬೇಕು ಬಿಸಾತಿಲ್ಲದೇ ಕುಣಿದು

ಅಂಕೆ-ಶಂಕೆಗಳೇ ಸತ್ತು
ಕಳಂಕಗಳ ಕೊಳೆ ಹೊತ್ತು
ಹಂಸತೂಲಿಕಾ ತಲ್ಪದಲ್ಲೂ
ಹವಣಿಸಿ ನಿದ್ದೆಗೆ
ಕಂಗೆಟ್ಟು ಕೂಗಿಹರು
ಮಹಡಿಯಲ್ಲಿನ ಜನರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿಡಿ ನನ್ನ ಪಾಡಿಗೆ ನನ್ನನ್ನು
Next post ಆನೆಗಳು ಎರಡು ವಿಧ

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…