ವ್ಯತ್ಯಾಸ

ಸ್ವಚ್ಚಂದ ಬೆಳಕಿನಲಿ
ಅಟ್ಟ ಅಡುಗೆಯ ಉಂಡು
ಆಕಾಶ ಭೂಮಿಗಳೇ
ನೆಲ ಮಾಡುಗೊಂಡು
ನಾಳೆ ಎಂಬುದ ಮರೆತು
ಇಂದಿಂದೆ ಬದುಕುವರು
ಅಲೆಮಾರಿ ಜನರು

ಚಿಂತೆಯಂಬ ಬೊಂತೆಗೆ
ಒಂದೊಂದು ಗುಂಡು
ಗೋಲಿಯ ಹೊಡೆದು
ತಣ್ಣೆಯನ್ನಕ್ಕೆ ಉಪ್ಪು
ಮೆಣಸು ನುರಿದು

ದಿನ ದಿನವೂ ಹೊಸ
ರುಚಿ ಹಿಂಜಿ ಅರೆದು
ಅಂದದಲಿ ಕೂಡಿಹರು
ಜೋಪಡಿಯ ಜನರು

ರಟ್ಟೆ ಗುಟ್ಟನ್ನು ಅರಿತು
ಕರ್ಮ ತತ್ವದಿ ಬೆರೆತು
ಸುಖ ದುಃಖ ಸಹಿಸಿ
ಸಹಿ ಕಹಿಯ ಬೆರೆಸಿ
ಹಂಗಿನಾಳಗದೆ ಹಿಗ್ಗಿ
ಸಂತೃಪ್ತ ಸಾಧಕರು
ಶ್ರಮಿಕ ಜನರು

ಮೆರೆದ ಮೊರೆತದ ನಡುವೆ
ಬೇಕು ಬಿಸಾತಿಲ್ಲದೇ ಕುಣಿದು

ಅಂಕೆ-ಶಂಕೆಗಳೇ ಸತ್ತು
ಕಳಂಕಗಳ ಕೊಳೆ ಹೊತ್ತು
ಹಂಸತೂಲಿಕಾ ತಲ್ಪದಲ್ಲೂ
ಹವಣಿಸಿ ನಿದ್ದೆಗೆ
ಕಂಗೆಟ್ಟು ಕೂಗಿಹರು
ಮಹಡಿಯಲ್ಲಿನ ಜನರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿಡಿ ನನ್ನ ಪಾಡಿಗೆ ನನ್ನನ್ನು
Next post ಆನೆಗಳು ಎರಡು ವಿಧ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

cheap jordans|wholesale air max|wholesale jordans|wholesale jewelry|wholesale jerseys