Home / ಕವನ / ಕವಿತೆ / ಬಿಡಿ ನನ್ನ ಪಾಡಿಗೆ ನನ್ನನ್ನು

ಬಿಡಿ ನನ್ನ ಪಾಡಿಗೆ ನನ್ನನ್ನು


ನೀವು ಕೇಳಿದ್ದು ಒಳ್ಳೆಯದೆ ಆಯಿತು.
ನನಗೀಗ ಎಲ್ಲವೂ ಅರ್ಥವಾಯಿತು.
ನೋಡಿ –

ಹಿಂಡುಹಿಂಡಾಗಿ ಅಲೆಯುವ
ಮೋಡಗಳಲ್ಲೊಂದು ತುಣುಕೆಂದೊ…

ಆಕಾಶದ ಕ್ಯಾನ್‌ವಾಸಿನಲ್ಲಿ
ಬಳಿದ ಬಣ್ಣಗಳಲ್ಲೊಂದು ಎಳೆಯೆಂದೊ…

ಕಣ್ಣಾಮುಚ್ಚಾಲೆಯಾಡುವ
ಮಿಂಚಿನೊಳಗೊಂದು ಕಿಡಿಯೆಂದೊ…

ಒರಟಾಗಿ ಬೀಸುವ
ಗಾಳಿಯಲ್ಲೊಂದು ಗೆರೆಯೆಂದೊ…
ಈಗವನನ್ನು ವರ್ಣಿಸುವುದಿಲ್ಲ.


ರಕ್ತ-ಮಾಂಸ-ಮೂಳೆ ವಿರಚಿತ
ನನ್ನೆದೆಯ ಮೇಲೆ ಮಲಗಿದ್ದ.
ಯಾರು ಕರೆದರೊ ಗೊತ್ತಿಲ್ಲ.
ಯಾಕೆ ಕರೆದರೊ ಗೊತ್ತಿಲ್ಲ.
ಯಾವಾಗ ಕರೆದರೊ ಗೊತ್ತಿಲ್ಲ.
ಪ್ರೀತಿಯನ್ನು ಒದ್ದು ಹೊರಟು ಹೋದ.

ನನಗನಿಸುತ್ತದೆ
ಮಣ್ಣಿನೊಳಗೆ ಹಿಡಿಯಾಗಿ ಮಲಗಿದ್ದಾನೆ,
ನಾನವನ ಮುಟ್ಟಲಾರೆ.
ಮಣ್ಣಿನೊಳಗೆ ಮೈ ಮರೆತು ಮಲಗಿದ್ದಾನೆ,
ನಾನವನ ಎಬ್ಬಿಸಲಾರೆ.


ನಿಮ್ಮದು ಪ್ರೀತಿಯಾದರೂ ಸರಿಯೆ
ನಿಮ್ಮದು ಕರುಣೆಯಾದರೂ ಸರಿಯೆ
ಬದಲಾಯಿಸಲಾರವು ನನ್ನನ್ನು.
ನಿಮ್ಮದು ಮಾಟವಾದರೂ ಸರಿಯೆ
ನಿಮ್ಮದು ಮಾಯೆಯಾದರೂ ಸರಿಯೆ
ಒಳಗಾಗಲಾರೆ ನಾನು.

ನಾನೀಗ ಕವಯತ್ರಿ ಅಲ್ಲ
ನನ್ನಲ್ಲಿ ಕಲ್ಪನೆಗಳಿಲ್ಲ
ನನ್ನಲ್ಲಿ ಕನಸುಗಳಿಲ್ಲ
ನನ್ನಲ್ಲಿ ಕವಿತೆಗಳಿಲ್ಲ.

ಈ ಬಣ್ಣ-ಬೆಡಗು ಯಾವುದೂ
ಬದುಕ ಬೆಳಗಿಸುವುದಿಲ್ಲ.

ಅವನ ನೆನಪನ್ನು ಉಸಿರಾಡುತ್ತೇನೆ,
ಬಿಡಿ ನನ್ನ ಪಾಡಿಗೆ ನನ್ನನ್ನು.


Tagged:

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್‍ ಚಂದ್ರ