ಮಳೆ ಬಂದ ರಾತ್ರಿ

ನಿನ್ನೆ ರಾತ್ರಿ ಮಳೆ ಬಂದಿತ್ತು.
ಗಿಡ ಮರ ನೆಲ ಅಂಗಳ
ಎಲ್ಲವೂ ಮೈ ತೊಳೆದಂತೆ ಶುಭ್ರ
ಇರುವೆಗಳ ಗೂಡು ಮಾಯವಾಗಿತ್ತು
ಮತ್ತೆ ಪತ್ರಿಕೆಯಲಿ ಸುದ್ದಿ ಅಚ್ಚಾಗಿತ್ತು.

ರಾತ್ರಿ ಮಳೆ ಬಂದಿತ್ತಯ
ಹೊಸ್ತಿಲು ಸುಮ್ಮನೆ ಮೈ ಚಾಚಿ ಮಲಗಿದರೆ
ಕಿಟಕಿಯ ಫಡಕುಗಳು ಗಾಳಿಗೆ ಹಾರಾಡುತ್ತಿದ್ದವು
ಕರೆಂಟು ಹೋಗಿ ಗಂವ್ ಎನ್ನುವ ಕತ್ತಲು
ಮಿಂಚು ಫಳಪಳಿಸಿ ಮನೆ ಕಣ್ಣೊಡೆಯಿತು.

ರಾತ್ರಿ ಮಳೆ ಬಂದಿತ್ತು.
ನಾನೆಲ್ಲಿರುವೆ ಎಂಬ ಭ್ರಮೆ ಒಳಗೆ ತ್ಯುಯ್ದ
ಮೈ ಮುರಿದು ಮುದುಡಿದ ಜೀವ
ಒಂಥರಾ ಕಳವಳದಲಿ ಮುಲುಕಾಡಿತು
ಒಳಗೊಳಗೆ ಹೆಜ್ಜೆಯ ಗುರುತುಗಳು ಮೂಡಿದ್ದವು

ರಾತ್ರಿ ಮಳೆ ಬಂದಿತ್ತು
ಆದರೂ ಬೆಚ್ಚಗಿನ ಕಾವು ಒಳಗೆ
ಖಚಿತಗೊಳಿಸಲಿಲ್ಲ ಭೂಮಿಯ ತಣ್ಣನೆಯ ಸ್ಪರ್ಶ
ಹಕ್ಕಿಗಳು ಮುದುಡಿದವು ರೆಕ್ಕೆ ಒದ್ದೆಮಾಡುತ್ತ
ಬದುಕಿನ ಸರಳದಾರಿ ಮಾತ್ರ ತೊಳೆದವು

ರಾತ್ರಿ ಮಳೆ ಬಂದಿತ್ತು
ಛತ್ತು ಭೂಮಿ ಅಂಗಳ ಗಿಡಮರಕೆ
ಹನಿ ಹನಿ ಸಿಹಿ ಸಿಂಚನ ಉಸುರಿತ್ತು
ಯಾರ ನೆನಪಲಿ ಯಾವ ಕನವರಿಕೆಗಳೋ
ಅವನಿರುವಲ್ಲಿಗೆ ಮತ್ತೆ ಮನಸ್ಸು ಚಲಿಸಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೆಳತಿ, ನೆನಪೇತಕೆ ಬರುವುದೊ?
Next post ಸೂರ್ಯ ದಂಡೆ

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…