ಹುಡುಕಾಟ

ಹೃದಯ ಆರಿಸುತ್ತಲಿದೆ
ಒಂದು ಆಸರೆಗಾಗಿ ಈ
ಧೂಳು ತುಂಬಿದ ಓಣಿಯಲಿ
ಹೆಜ್ಜೆ ಸಪ್ಪಳಗಳೇ ಕೇಳಿಸುತ್ತಿಲ್ಲ |

ಈ ಜೀವನ ಕೊಟ್ಟವನೇ ಕೇಳು
ಪರಿತಪಿಸುತಲಿದೆ ಹೃದಯ ಒಂದು
ಒಲವಿನ ಭೇಟಿಗಾಗಿ
ಅಂತರಾಳದ ಮೂಕ ರಾಗ ಕೇಳಿಸುತ್ತಿಲ್ಲವೇ?

ಎಲ್ಲೆಲ್ಲೋ ಹರಿದಾಡಿದ ಮನಸ್ಸು
ಕೇಳುತಿದೆ ಒಂದು ಒಲವಿನ ಸ್ಪರ್ಶ
ಎಲ್ಲಿಯೂ ಒಂದು ಧ್ವನಿ
ಈ ಸಂತೆಯಲಿ ಹೊರಟವರಿಗೆ ಕೇಳಿಸುತ್ತಿಲ್ಲ |

ಹೊತ್ತಿ ಉರಿಯುವ ಹೃದಯಕೆ
ಶಾಂತ ಸರಳವಾದ ಒಂದು ಹಾಡು
ಹೊರಗೆ ಹಸುರಿನ ಬಯಲು
ಒಳಗೆ ಒಂದು ಮರ್ಮರ ಕೇಳಿಸುತ್ತಿಲ್ಲ |

ಬರೀ ಯಾತನೆಯ ನರಳಾಟ
ರಾತ್ರಿಯ ಪಹರಿಗೆ ಬೆಳದಿಂಗಳು
ಬಿಕ್ಕುಗಳು ಹರಡಿದ ಹಾಸಿಗೆ
ಆ ದಿನಗಳು ನೆನಪಿಗೆ ಬರುವದಿಲ್ಲ |

ಎಲ್ಲಿ ಹೋದರೂ ಮತ್ತೆ ಮಳೆಯ
ರಾತ್ರಿ ನೀ ಮರಳಿ ಬರುವೆಯಾ
ಎಲ್ಲಾ ಕನಸುಗಳೆ ನೆರಳ ಸವರಿ
ಆದರೂ ಯಾವುದೂ ಅಚ್ಚಾಗುವುದೇ ಇಲ್ಲ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಓ ಬೆಂಕಿ!
Next post ಸೂರ್ಯ-ಚಂದ್ರ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

cheap jordans|wholesale air max|wholesale jordans|wholesale jewelry|wholesale jerseys