ಓ ಬೆಂಕಿ! ಸಾಗರದ ನೂರ್ಲಕ್ಷ ಅಲೆಗಳಿಗೆ
ಬೆಂಕಿ ಹೊತ್ತಿಸಿದಂತೆ ಕೆನ್ನಾಲಗೆಯನೆತ್ತಿ
ಹೊರಳಿಸಿದೆ! ಈಗಿನ್ನು – ಕಳೆದಿಲ್ಲ ಅರೆಗಳಿಗೆ!-
ದಡದ ಮರಳಿನ ಅಮಿತ ಸೇನೆಯನು ಹಿಂದೊತ್ತಿ,
ತಡಿಯೆಲ್ಲ ತನಗೆಂದು, ಮುನ್ಮುಂದೆ ಒತ್ತೊತ್ತಿ,
ಮೇಲೇರಿ, ಗರ್ಜಿಸುತ, ನೀಲಿಮಯ ಆಗಸಕೆ
ಸಾರಿ ತನ್ನದೆಯಾಸೆ, ಕೆರಳಿ, ತಡಿಯನು ಮುತ್ತಿ
ನೊರೆಯಾಗಿ ಹರಿದಾಡಿ, ಮುರಿದಿರಲು ಮನದೆಣಿಕೆ
ಹಿಂದೋಡಿ, ಮಗುದೊಮ್ಮೆ ಮೈಲಿಯತ್ತರದೊಂದು
ಹಾವಿನಾಕಾರದಿಂ ಬಂದು ಹೆದರಿಸಹೊರಟು
ದಡದೆಡೆಗೆ ಸರಿದಂತೆ, ಹೆಡೆ ಭೂಮಿಗಿಳಿತಂದು
ಬರಿಯ ಅಡಿ ನೀರಾಗಿ, ಎದೆಯಾಸೆ ಸುಳಿಮುರುಟು
ಸಸಿಯಾಗಿ- ದ್ವೇಷದಿಂ, ಕೋಪದಿಂ, ಉರಿಹತ್ತಿ,
ಸಾಗರವು ಉರಿಯುತಿದೆ-ಕಂಪಲೆಯ ಉರಿಬತ್ತಿ!
*****
Related Post
ಸಣ್ಣ ಕತೆ
-
ಯಿದು ನಿಜದಿ ಕತೀ…
ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ... ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ, ವುಗಾದಿ… Read more…
-
ಇನ್ನೊಬ್ಬ
ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…
-
ಕೇರೀಜಂ…
ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…
-
ಕೂನನ ಮಗಳು ಕೆಂಚಿಯೂ….
ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…
-
ದೇವರು
ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…