Home / ಕವನ / ಕವಿತೆ / ಬಸವ : ಅಂದು-ಇಂದು

ಬಸವ : ಅಂದು-ಇಂದು

ಬಸವ
ನಿನ್ನ ಕಾಲಕ್ಕೂ
ನನ್ನ ಕಾಲಕ್ಕೂ
ವ್ಯತ್ಯಾಸವೇನಿಲ್ಲ!
ಆದರೆ
ನಿನಗೂ
ನನಗೂ
ವ್ಯತ್ಯಾಸ ಬಹಳ!

ಬಸವ
ನಿನ್ನ ವಿಭೂತಿಗೂ
ನನ್ನ ವಿಭೂತಿಗೂ
ಬಣ್ಣ, ವಿನ್ಯಾಸ, ಪ್ರೊಡಕ್ಷನ್‌ನಲ್ಲೇನೂ
ವ್ಯತ್ಯಾಸವಿಲ್ಲ
ಆದರೆ
ಅದರೊಳಗಿನ ತತ್ವದ ಮಾತು
ಇಲ್ಲಿ ಬೇಡ, ಅಷ್ಟೇ!

ಬಸವ
ನಾನು ನಿನ್ನ ಪಂಥದವ
ಇದಕೆ ಗುರುತು
ತಹಸಿಲ್ದಾರ್ ಕೊಟ್ಟ ಪ್ರಮಾಣಪತ್ರ.
ಇದನು ನಂಬಿದರೆಷ್ಟು, ನೀನು
ಬಿಟ್ಟರೆ ಎಷ್ಟು!

ಬಸವ
ನೀನು ಭಕ್ತಿ ಭಂಡಾರಿಯಾಗಬೇಡ.
ನೀನು ಹಾಗೆ ಆದರೆ
ನಮಗೆ ಕಿಮ್ಮತ್ತಿಲ್ಲ.
ಹಾಗಾಗಿ
ಕಿರೀಟ ಧರಿಸು, ಕುದುರೆಯೇರು
ಹೊರಡು ವಿಧಾನಸೌಧದ ಕಡೆಗೆ.
ಕೇಸರಿ ಮಾರ್ಗವಾದರೂ ಸರಿಯೇ
ಮುನ್ನುಗ್ಗು ಪಾರ್ಲಿಮೆಂಟಿನೆಡೆಗೆ.
ಆಗ ಸಾಕ್ಷಾತ್ಕಾರ ನಿನ್ನ ಶಕ್ತಿ
ಆ ನಿನ್ನ ನೋಡಲು ನಮಗೆ ಕಾತುರ!

ಬಸವ
ನೀನು ಹೀಗೆ ಬಂದದ್ದಾಗಿದೆ
ಬಂದವನು ಇಲ್ಲೇ ಇರು
ಆ ನಿನ್ನ ಹಳೆ ವರಸೆ ತೋರಿದರೆ
ಹಿಂದೆ ಆದಂತೆ ಮರ್‍ಡರ್
ಈಗಲೂ ಆಗುವೆ ಹುಷಾರ್!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...