Home / ಕವನ / ಕವಿತೆ / ಬಸವ : ಅಂದು-ಇಂದು

ಬಸವ : ಅಂದು-ಇಂದು

ಬಸವ
ನಿನ್ನ ಕಾಲಕ್ಕೂ
ನನ್ನ ಕಾಲಕ್ಕೂ
ವ್ಯತ್ಯಾಸವೇನಿಲ್ಲ!
ಆದರೆ
ನಿನಗೂ
ನನಗೂ
ವ್ಯತ್ಯಾಸ ಬಹಳ!

ಬಸವ
ನಿನ್ನ ವಿಭೂತಿಗೂ
ನನ್ನ ವಿಭೂತಿಗೂ
ಬಣ್ಣ, ವಿನ್ಯಾಸ, ಪ್ರೊಡಕ್ಷನ್‌ನಲ್ಲೇನೂ
ವ್ಯತ್ಯಾಸವಿಲ್ಲ
ಆದರೆ
ಅದರೊಳಗಿನ ತತ್ವದ ಮಾತು
ಇಲ್ಲಿ ಬೇಡ, ಅಷ್ಟೇ!

ಬಸವ
ನಾನು ನಿನ್ನ ಪಂಥದವ
ಇದಕೆ ಗುರುತು
ತಹಸಿಲ್ದಾರ್ ಕೊಟ್ಟ ಪ್ರಮಾಣಪತ್ರ.
ಇದನು ನಂಬಿದರೆಷ್ಟು, ನೀನು
ಬಿಟ್ಟರೆ ಎಷ್ಟು!

ಬಸವ
ನೀನು ಭಕ್ತಿ ಭಂಡಾರಿಯಾಗಬೇಡ.
ನೀನು ಹಾಗೆ ಆದರೆ
ನಮಗೆ ಕಿಮ್ಮತ್ತಿಲ್ಲ.
ಹಾಗಾಗಿ
ಕಿರೀಟ ಧರಿಸು, ಕುದುರೆಯೇರು
ಹೊರಡು ವಿಧಾನಸೌಧದ ಕಡೆಗೆ.
ಕೇಸರಿ ಮಾರ್ಗವಾದರೂ ಸರಿಯೇ
ಮುನ್ನುಗ್ಗು ಪಾರ್ಲಿಮೆಂಟಿನೆಡೆಗೆ.
ಆಗ ಸಾಕ್ಷಾತ್ಕಾರ ನಿನ್ನ ಶಕ್ತಿ
ಆ ನಿನ್ನ ನೋಡಲು ನಮಗೆ ಕಾತುರ!

ಬಸವ
ನೀನು ಹೀಗೆ ಬಂದದ್ದಾಗಿದೆ
ಬಂದವನು ಇಲ್ಲೇ ಇರು
ಆ ನಿನ್ನ ಹಳೆ ವರಸೆ ತೋರಿದರೆ
ಹಿಂದೆ ಆದಂತೆ ಮರ್‍ಡರ್
ಈಗಲೂ ಆಗುವೆ ಹುಷಾರ್!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...