ಬಸವ : ಅಂದು-ಇಂದು

ಬಸವ
ನಿನ್ನ ಕಾಲಕ್ಕೂ
ನನ್ನ ಕಾಲಕ್ಕೂ
ವ್ಯತ್ಯಾಸವೇನಿಲ್ಲ!
ಆದರೆ
ನಿನಗೂ
ನನಗೂ
ವ್ಯತ್ಯಾಸ ಬಹಳ!

ಬಸವ
ನಿನ್ನ ವಿಭೂತಿಗೂ
ನನ್ನ ವಿಭೂತಿಗೂ
ಬಣ್ಣ, ವಿನ್ಯಾಸ, ಪ್ರೊಡಕ್ಷನ್‌ನಲ್ಲೇನೂ
ವ್ಯತ್ಯಾಸವಿಲ್ಲ
ಆದರೆ
ಅದರೊಳಗಿನ ತತ್ವದ ಮಾತು
ಇಲ್ಲಿ ಬೇಡ, ಅಷ್ಟೇ!

ಬಸವ
ನಾನು ನಿನ್ನ ಪಂಥದವ
ಇದಕೆ ಗುರುತು
ತಹಸಿಲ್ದಾರ್ ಕೊಟ್ಟ ಪ್ರಮಾಣಪತ್ರ.
ಇದನು ನಂಬಿದರೆಷ್ಟು, ನೀನು
ಬಿಟ್ಟರೆ ಎಷ್ಟು!

ಬಸವ
ನೀನು ಭಕ್ತಿ ಭಂಡಾರಿಯಾಗಬೇಡ.
ನೀನು ಹಾಗೆ ಆದರೆ
ನಮಗೆ ಕಿಮ್ಮತ್ತಿಲ್ಲ.
ಹಾಗಾಗಿ
ಕಿರೀಟ ಧರಿಸು, ಕುದುರೆಯೇರು
ಹೊರಡು ವಿಧಾನಸೌಧದ ಕಡೆಗೆ.
ಕೇಸರಿ ಮಾರ್ಗವಾದರೂ ಸರಿಯೇ
ಮುನ್ನುಗ್ಗು ಪಾರ್ಲಿಮೆಂಟಿನೆಡೆಗೆ.
ಆಗ ಸಾಕ್ಷಾತ್ಕಾರ ನಿನ್ನ ಶಕ್ತಿ
ಆ ನಿನ್ನ ನೋಡಲು ನಮಗೆ ಕಾತುರ!

ಬಸವ
ನೀನು ಹೀಗೆ ಬಂದದ್ದಾಗಿದೆ
ಬಂದವನು ಇಲ್ಲೇ ಇರು
ಆ ನಿನ್ನ ಹಳೆ ವರಸೆ ತೋರಿದರೆ
ಹಿಂದೆ ಆದಂತೆ ಮರ್‍ಡರ್
ಈಗಲೂ ಆಗುವೆ ಹುಷಾರ್!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇರುವುದೆಲ್ಲವ ಬಿಟ್ಟು
Next post ವಿಶ್ವಾಂಜಲಿ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…