ವಿಶ್ವಾಂಜಲಿ

ರಾಗ ದೇಶ ಜಿಲ್ಲಾ-ತ್ರಿತಾಲ

ಏನೆದ್ಭುತ ಮಹಿಮೆಯೊ ನಿನ್ನ
ಪ್ರಭೋ ಪೊಗಳಲಳವೆ ಎನ್ನ || ಪಲ್ಲ ||

ತಡೆಯರಿಯದೆ ಹರಿಯುವ ಗಗನತಲಂ
ನಿನ್ನೊಡೆತನದ ಪತಾಳೆಯೊಲು ವಲಂ
ನೆಳಲಿಸಿ ಹೊದಿಪುದು ವಸುಮತಿಯಗಲಂ
ನಿನ್ನ ಪ್ರಭಾವವನು || ೧ ||

ನಿಲಲಾರದ ದಿನಕರನನುದಿನದಿ
ಬೆಳಕುಗಳ ತುತೂರಿಯನತಿಘನದಿ
ಪಸರಿಸಿ ಸಾರ್‍ವನು ಭುವನ ಭುವನದಿ
ನಿನ್ನ ಪ್ರತಾಪವನು || ೨ ||

ತಾರಕಿತ ವಾಲೆಗಳ ತೆರೆದಿರಿಸಿ,
ಅಮೃತದ ದೀವಿಗೆಯನು ಮುಂದುರಿಸಿ,
ಪಾಡುವಳು ರಜನಿ ಕಬ್ಬಿಗರರಸಿ
ನಿನ್ನ ಲೀಲೆಯನು || ೩ ||

ಕ್ಷಿತಿಬಾಲೆಯ ತೋಳುಯಲಲಿ ತೂಗಿ,
ಜೀವನ ಜೋಗುಳದನುಪದಮಾಗಿ
ಮೊರೆವುದು ಗಾಳಿಯೀ ಜಗವನು ಕೂಗಿ
ನಿನ್ನ ಕೀರ್ತಿಯನು || ೪ ||

ನಿನ್ನಯ ಕೆಯ್ಗನ್ನಡಿಯಹ ಜಲಧಿ
ಪ್ರತಿಬಿಂಬಮನಾಂತಕಲ ವಿಕಲದಿ,
ಪ್ರಕಟಪುದಲೆಯ ತರಲ ಕಲಕಲದಿ
ನಿನ್ನ ಛಾಯೆಯನು || ೫ ||

ಜಗದೇಕವಾಣಿಯಲಿ ತವ ಚರಿತಂ
ಕೆತ್ತಿರುವ ಯಶಸ್ತಂಭದೊಲಿರುತಂ
ನುಡಿವುದು ನದಿಕಂರದಿ ಗಿರಿ ನಿರತಂ
ನಿನ್ನ ನೀತಿಯನು || ೬ ||

ಬಗೆಬಗೆಯಿಂದಾರಾಧಿಸಲರಿಯೆ,
ಮಗು ತೊದಲುಲಿವೊಲು ತಾಯನು ಕರೆಯೆ,
ಉಲಿವೆನು ಮಗುಳ್ದುಲಿನೆನು ಶ್ರೀ ಹರಿಯೆ
ನಿನ್ನ ನಾಮವನು || ೭ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಸವ : ಅಂದು-ಇಂದು
Next post ಶಾಲೆಗೆ ಬಂದ ಚಿರತೆ

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

cheap jordans|wholesale air max|wholesale jordans|wholesale jewelry|wholesale jerseys