Home / ಕವನ / ಕವಿತೆ / ವಿಶ್ವಾಂಜಲಿ

ವಿಶ್ವಾಂಜಲಿ

ರಾಗ ದೇಶ ಜಿಲ್ಲಾ-ತ್ರಿತಾಲ

ಏನೆದ್ಭುತ ಮಹಿಮೆಯೊ ನಿನ್ನ
ಪ್ರಭೋ ಪೊಗಳಲಳವೆ ಎನ್ನ || ಪಲ್ಲ ||

ತಡೆಯರಿಯದೆ ಹರಿಯುವ ಗಗನತಲಂ
ನಿನ್ನೊಡೆತನದ ಪತಾಳೆಯೊಲು ವಲಂ
ನೆಳಲಿಸಿ ಹೊದಿಪುದು ವಸುಮತಿಯಗಲಂ
ನಿನ್ನ ಪ್ರಭಾವವನು || ೧ ||

ನಿಲಲಾರದ ದಿನಕರನನುದಿನದಿ
ಬೆಳಕುಗಳ ತುತೂರಿಯನತಿಘನದಿ
ಪಸರಿಸಿ ಸಾರ್‍ವನು ಭುವನ ಭುವನದಿ
ನಿನ್ನ ಪ್ರತಾಪವನು || ೨ ||

ತಾರಕಿತ ವಾಲೆಗಳ ತೆರೆದಿರಿಸಿ,
ಅಮೃತದ ದೀವಿಗೆಯನು ಮುಂದುರಿಸಿ,
ಪಾಡುವಳು ರಜನಿ ಕಬ್ಬಿಗರರಸಿ
ನಿನ್ನ ಲೀಲೆಯನು || ೩ ||

ಕ್ಷಿತಿಬಾಲೆಯ ತೋಳುಯಲಲಿ ತೂಗಿ,
ಜೀವನ ಜೋಗುಳದನುಪದಮಾಗಿ
ಮೊರೆವುದು ಗಾಳಿಯೀ ಜಗವನು ಕೂಗಿ
ನಿನ್ನ ಕೀರ್ತಿಯನು || ೪ ||

ನಿನ್ನಯ ಕೆಯ್ಗನ್ನಡಿಯಹ ಜಲಧಿ
ಪ್ರತಿಬಿಂಬಮನಾಂತಕಲ ವಿಕಲದಿ,
ಪ್ರಕಟಪುದಲೆಯ ತರಲ ಕಲಕಲದಿ
ನಿನ್ನ ಛಾಯೆಯನು || ೫ ||

ಜಗದೇಕವಾಣಿಯಲಿ ತವ ಚರಿತಂ
ಕೆತ್ತಿರುವ ಯಶಸ್ತಂಭದೊಲಿರುತಂ
ನುಡಿವುದು ನದಿಕಂರದಿ ಗಿರಿ ನಿರತಂ
ನಿನ್ನ ನೀತಿಯನು || ೬ ||

ಬಗೆಬಗೆಯಿಂದಾರಾಧಿಸಲರಿಯೆ,
ಮಗು ತೊದಲುಲಿವೊಲು ತಾಯನು ಕರೆಯೆ,
ಉಲಿವೆನು ಮಗುಳ್ದುಲಿನೆನು ಶ್ರೀ ಹರಿಯೆ
ನಿನ್ನ ನಾಮವನು || ೭ ||
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...