Home / ಲೇಖನ / ಇತರೆ / ಶಾಲೆಗೆ ಬಂದ ಚಿರತೆ

ಶಾಲೆಗೆ ಬಂದ ಚಿರತೆ

ಜುಲೈ ೨೦೧೫ ರಂದು ಗುರುವಾರ ದಿನದಂದು ಚಿಕ್ಕ ಮಗಳೂರಿನಲ್ಲಿ ಜರುಗಿದ ಕತೆಯಿದು. ಚಿಕ್ಕ ಮಗಳೂರಿನ ಹೃದಯ ಭಾಗದಲ್ಲಿರುವ ಟೌನ್ ಮಹಿಳಾ ಸಮಾಜ ಶಾಲೆಗೆ (ಟಿ‌ಎಂಎಸ್) ಚಿರತೆಯೊಂದು ಬಂದೇ ಬಿಟ್ಟಿತು!

ಅಲ್ಲಿದ್ದ ಮಕ್ಕಳು ಶಿಕ್ಷಕರೆಲ್ಲ ಗಾಬರಿ ಬಿದ್ದು ಓಡಿದರು. ಈ ಚಿರತೆ ಶಾಲೆಗೆ ಬರುವ ಮುನ್ನ- ಕೋರ್ಟು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಪಟ್ಟಾಭಿರಾಮೇಗೌಡ ಎಂಬುವವರ ಮೇಲೆ ಎರಗಿ ಗಾಯ ಮಾಡಿದೆ!

ಶಾಲೆಗೆ ಬಂದ ಚಿರತೆಯನ್ನು ಕೊಠಡಿಯಲ್ಲಿ ಬಂದಿಯನ್ನಾಗಿಸಿ ಉಪಾಯವಾಗಿ ಮೆಲ್ಲಗೆ ಕಿಟಕಿ ಹಾಕುವಾಗ ಅದು ಅರಣ್ಯ ಇಲಾಖೆಯ ಚಾಲಕ ಗಣೇಶ್ ಎಂಬುವರ ಬಲಗೈಯ ನಾಲ್ಕು ಬೆರಳುಗಳನ್ನು ಕಚ್ಚಿದೆ! ಇವರನ್ನು ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳಿಸಿದ್ದಾರೆ! ಶಾಲೆ ಪಕ್ಕದ ಕಡೂರು ಕ್ಲಬ್ ಕಡೆಯಿಂದ ಮರದ ಮೇಲಿಂದ ರಸ್ತೆಗೆ ಚಿರತೆ ಜಿಗಿದಿದೆ. ಅಲ್ಲಿಂದ ಶಾಲೆಗೆ ಬಂದಿದೆ. ಅದನ್ನು ಕಂಡು ಎಲ್ಲರೂ ಹೌಹಾರಿದ್ದಾರೆ. ಅಲ್ಲೇ ಇದ್ದ ನೆರಳಚ್ಚು ಯಂತ್ರದ ಕೊಠಡಿ ಸೇರಿಕೊಂಡಿದೆ.

ತದ ನಂತರ ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಸತತವಾಗಿ ಐದಾರು ತಾಸು ಕಾರ್ಯಚರಣೆಯ ಮೂಲಕ ಸುರಕ್ಷಿತವಾಗಿ ಚಿರತೆಯನ್ನು ಸೆರೆ ಹಿಡಿದರು.

ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿನ ಡಾ. ವಿನಯ್‌ ಅವರು ಅರಿವಳಿಕೆಯ ಚುಚ್ಚುಮದ್ದನ್ನು ಅಲ್ಲಿದ್ದ ಚಿರತೆಗೆ ಯಶಸ್ವಿಯಾಗಿ ಸಿಡಿಸಿ ಅಲ್ಲಿದ್ದ ಜನರಿಂದ ಮೆಚ್ಚುಗೆ ಗಳಿಸಿದರು.

ಈ ಅರಿವಳಿಕೆಯ ಚುಚ್ಚುಮದ್ದನ್ನು ಸಿಡಿಸುವ ಪರಿಣಿತ ಪಶು ವೈದ್ಯರು ಇಡೀ ಚಿಕ್ಕಮಗಳೂರು ಜಿಲ್ಲೆಯಲ್ಲೇ ಇಲ್ಲದಿರುವುದರಿಂದ ಈ ಒಂದು ಚಿರತೆಯ ಕಾರ್‍ಯಚರಣೆಯು ತುಂಬಾ ತಡವಾಯಿತು.

ತದನಂತರ ಈ ಚಿರತೆಯನ್ನು ಸುರಕ್ಷಿತವಾಗಿ ಅರಣ್ಯ ಸಿಬ್ಬಂದಿ ಹಿಡಿದರು. ಸಕಲ ಬಂದೋಬಸ್ತೋವಿನ ನಡುವಿನ ಮಧ್ಯೆ ಭದ್ರಾ ಅಭಯಾರಣ್ಯಕ್ಕೆ ಕ್ಷೇಮವಾಗಿ ಬಿಟ್ಟು ಟಾಟಾ ಮಾಡಿ ಬಂದರು.

ಚಿಕ್ಕಮಂಗಳೂರಿನ ತುಂಬೆಲ್ಲ ಎರಡು ಮೂರು ದಿನ ಚಿರತೆ ಶಾಲೆಗೆ ಬಂದ ಸುದ್ದಿನೇ ಚರ್‍ಚೆಗೆ ಗ್ರಾಸವಾಯಿತು.

ಈಗೀಗ ಕಾಡಿನ ಪ್ರಾಣಿಗಳು ಆಹಾರ, ನೀರು, ಹರಸುತ್ತಾ ನಾಡಿಗೆ ಬರುತ್ತಿವೆ. ನಾಡಿನ ಜನ ಕಾಡನ್ನು ಉಳಿಸಿದರೆ ಮಾತ್ರ ನಾಡು ಉಳಿದೀತೂ ಇಲ್ಲವಾದರೆ ವಿಪತ್ತು ತಪ್ಪಿದ್ದಲ್ಲ! ಗಂಡಾಂತರ ಕಟ್ಟಿಟ್ಟ ಬುತ್ತಿ…
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...