ಅಡಿಕೆ ಆಡುವ ಹಾಡು

ಐದು ಅಕ್ಷರದಿಂದ ತೆಯದು ಗಂಧಾಽದಿಂದ|
ಮಲ್ಲಿಗ್ಹೂವಿಽನ ಕ್ರಮಽದಿಂದ||
ಮಲ್ಲಿಗ್ಹೂವಿಽನ ಕ್ರಮದಿಂದ ತಂಗೆಮ ತನ್ನ|
ರಾಯರ ಶೀಪಾದಾಽ ತೊಳಂದಾಳ ||೧||

ರಾಯರ ಮಗಳ ಬಂಽದು ಪಾದಪೂಜಿ ಮಾಡಟಿಸಗೆ|
ಪಾದಲಿ ಕಂಡಾಳಽ ಪದಮವ||
ಪಾದಲಿ ಕಂಡಾಽಳೆ ಪದಮವ ರಾಯಿರ ನಿಮಗ|
ಆನಿ ಏರಂಥಾ ಬಲಽ ಬಂದ ||೨||

ಶಟ್ಟೆವರ ಮಗಳ ಬಂಽಮ ಬಟ್ಟ್‌ ಪೂಜಿ ಮಾಽಡಟಿಗೆ|
ಬಟ್ಟಿಲಿ ಕಂಡಾಳಽ ಪದಽಮಽವ||
ಬಟ್ಟಿಲಿ ಕಂಡಾಽಳ ಪದಮವ ರಾಯರ ನಿಮಗ|
ಮಂಚ ಏರಂಥಾಽ ಬಲಽ ಬಂದ ||೩||
* * *

ಹೆತ್ತೂರ ರಾಽಜ್ಯ ನಿಮ್ಮಪ್ಪ ಆಳಿದರೇನ|
ಒಂಕಿಗಿ ನಮ್ಮ ಕಾಲಽ ತೊಳಽದೆಲ್ಲ||
ಒಂಕಿಗಿ ನಿಮ ಕಾಽಲ ನಾವ್ಯಾಕ ತೊಳಿಯುನು ಧೊರಿಯ|
ಪ್ರೇಮ ಬಲ್ಲವರಽ ಗುಣಕಾಗಿ ||೪||

ಎಂಟೂರ ರಾಜ್ಯ ನಿಮ್ಮಣ್ಣ ಆಳಿದರೇನ|
ಸರಗಿಗಿ ನಮ ಕಾಲಽ ತೊಳಽದೆಲ್ಲ||
ಸರಗಿಗಿ ನಿಮ ಕಾಽಲ ನಾವ್ಯಾಕ ತೊಳೆಯುನು ಧೊರಿಯ|
ಚಿತ್ತ ಬಲ್ಲವರಽ ಗುಣಾಕಾಽಗಿ ||೫||

ಆರೂರ ರಾಽಜ್ಯ ನಿಮ ತಮ್ಮ ಆಳಿದರೇನ|
ನತ್ತಿಗಿ ನಮ ಕಾಲ ತೊಳಽದೆಲ್ಲ|
ನೆತ್ತಿಗಿ ನಿಮ ಕಾಲ ನಾವ್ಯಾಕ ತೊಳೆಯುನು ಧೊರಿಯ|
ಮುತ್ತೈೈದಿತನಽ ಪಡಽದೇವ ||೬||
* * *

ಬಾಳಿಯ ಕಾಯಾಂಽಗ ಬಾಗಿ ಬಂದಳ ಬಾಲಿ|
ಭಾಗ ಕೊಡು ರಾಯಾಽ ಎಡಽದಲ್ಲಿ||
ಭಾಗ ಕೊಡು ರಾಽಯ ಎಡದಲಿ ಸಾವಿರದ|
ಮಾಣೀಕ್ಹೇರವರಽ ಮಗಽಳೀಗಿ ||೭||

ನಿಂಬಿ ಕಾಯ್ಹಾಂಽಗ ತುಂಬಿ ಬಂದಳ ಬಾಲಿ|
ಇಂಬ ಕೊಡು ರಾಯಾಽ ಎಡಽದಲ್ಲಿ||
ಇಂಬ ಕೊಡು ರಾಽಯ ಎಡದಲ್ಲಿ ಸಾವಿರದ|
ಒಜ್ಜಿರ್‍ಹೇರವರಽ ಮಗಳೀಗಿ ||೮||
* * *

ರಾಜರಾಜರು ಕೂಽಡಿ ರಾಜೆಲ್ಲ ಹುಡುಕಿದರ|
ಮತ್ತೆಲ್ಲಿ ತಂದ್ಯೊಽ ಚೆಲಽವೀನ||
ಮತ್ತೆಲ್ಲಿ ತಂದ್ಯೋ ಚೆಲವೀನ ಹಲಸಂಗಿ|
ಆಗರದಾಗಿತ್ತೊಂದರಽಗಿಣಿಯ ||೯||

ಶೆಟ್ಟಿ ಶೆಟ್ಟೆರು ಕೂಽಡಿ ದಿಕ್ಕೆಲ್ಲಾ ಹುದುಕಿದರ|
ಮತ್ತೆಲ್ಲಿ ತಂದ್ಯೊಽ ಚೆಲಽವಿನ||
ಮತ್ತೆಲ್ಲಿ ತಂಜ್ಯೊ ಚೆಲವೀನ ಹಲಸಂಗಿ|
ಬಾಳಿ ಬನೆದಾನೊಂದರಽಗಿಣಿಯ ||೧೦||
*****

ವಧುವರರಿಗೆ ಸರ್ವಜನರು ಕೂಡಿ ಅಕ್ಕೀಕಾಳು (ಅಕ್ಷತೆ) ಒಗೆದ ಮೇಲೆ ತುಸು ಹೊತ್ತಿನಲ್ಲಿ ಅವರಿಂದ ನಗೆಯಾಟವನ್ನು ಆಡಿಸುತ್ತಾರೆ. ಆಗ ಒಬ್ಬರು ಅಡಿಕೆಯನ್ನು ಗಟ್ಟಿಯಾಗಿ ಹಿಡಿಯಬೇಕು; ಇನ್ನೊಬ್ಬರು ಅದನ್ನು ಬಿಡಿಸಿಕೊಳ್ಳಬೇಕು. ಆಗ ಸುತ್ತಮುತ್ತಲಿನ ಹೆಣ್ಣುಮಕ್ಕಳು ಈ ಹಾಡನ್ನು ಹಾಡುವರು.

ಛಂದಸ್ಸು:- ತ್ರಿಪದಿ.

ಶಬ್ದಪ್ರಯೋಗಗಳು:- ಐದು ಅಕ್ಷರ=ಶಿವಪಾರ್ವತಿ ಎಂಬ ಐದು ಅಕ್ಷರಗಳಾಗಿರಬಹುದು. ಮಲ್ಲಿಗ್ಹೂವಿನ ಕ್ರಮದಿಂದ= (ಅಡಿಗಳು) ಮಲ್ಲಿಗೆಯಂತೆ ಮೃದುವಾಗಿವೆಯೆಂದು ಭಾವಿಸಿ. ಪಾದಲಿ=ಪಾದದಲ್ಲಿ. ಪದಮ=ಪದ್ಮಚಿಹ್ನ. ಬಲಬಂದು=ಬಲವು ಬರಲಿ. ಬಟ್ಟಲಿ=ಬೆರಳಲ್ಲಿ. ಒಂಕಿ=ತೋಳಿನ ಆಭರಣ. ಸರಗಿ=ಕೊರಳಿನ ಆಭರಣ. ಕಾಯಾಂಗ-ಕಾಯಿಯಂತೆ. ಭಾಗ=ಸ್ಥಳ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಾಲೆಗೆ ಬಂದ ಚಿರತೆ
Next post ಹೋದ ಬಾಲ್ಯ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys