Home / ಕವನ / ಕವಿತೆ / ಅಡಿಕೆ ಆಡುವ ಹಾಡು

ಅಡಿಕೆ ಆಡುವ ಹಾಡು

ಐದು ಅಕ್ಷರದಿಂದ ತೆಯದು ಗಂಧಾಽದಿಂದ|
ಮಲ್ಲಿಗ್ಹೂವಿಽನ ಕ್ರಮಽದಿಂದ||
ಮಲ್ಲಿಗ್ಹೂವಿಽನ ಕ್ರಮದಿಂದ ತಂಗೆಮ ತನ್ನ|
ರಾಯರ ಶೀಪಾದಾಽ ತೊಳಂದಾಳ ||೧||

ರಾಯರ ಮಗಳ ಬಂಽದು ಪಾದಪೂಜಿ ಮಾಡಟಿಸಗೆ|
ಪಾದಲಿ ಕಂಡಾಳಽ ಪದಮವ||
ಪಾದಲಿ ಕಂಡಾಽಳೆ ಪದಮವ ರಾಯಿರ ನಿಮಗ|
ಆನಿ ಏರಂಥಾ ಬಲಽ ಬಂದ ||೨||

ಶಟ್ಟೆವರ ಮಗಳ ಬಂಽಮ ಬಟ್ಟ್‌ ಪೂಜಿ ಮಾಽಡಟಿಗೆ|
ಬಟ್ಟಿಲಿ ಕಂಡಾಳಽ ಪದಽಮಽವ||
ಬಟ್ಟಿಲಿ ಕಂಡಾಽಳ ಪದಮವ ರಾಯರ ನಿಮಗ|
ಮಂಚ ಏರಂಥಾಽ ಬಲಽ ಬಂದ ||೩||
* * *

ಹೆತ್ತೂರ ರಾಽಜ್ಯ ನಿಮ್ಮಪ್ಪ ಆಳಿದರೇನ|
ಒಂಕಿಗಿ ನಮ್ಮ ಕಾಲಽ ತೊಳಽದೆಲ್ಲ||
ಒಂಕಿಗಿ ನಿಮ ಕಾಽಲ ನಾವ್ಯಾಕ ತೊಳಿಯುನು ಧೊರಿಯ|
ಪ್ರೇಮ ಬಲ್ಲವರಽ ಗುಣಕಾಗಿ ||೪||

ಎಂಟೂರ ರಾಜ್ಯ ನಿಮ್ಮಣ್ಣ ಆಳಿದರೇನ|
ಸರಗಿಗಿ ನಮ ಕಾಲಽ ತೊಳಽದೆಲ್ಲ||
ಸರಗಿಗಿ ನಿಮ ಕಾಽಲ ನಾವ್ಯಾಕ ತೊಳೆಯುನು ಧೊರಿಯ|
ಚಿತ್ತ ಬಲ್ಲವರಽ ಗುಣಾಕಾಽಗಿ ||೫||

ಆರೂರ ರಾಽಜ್ಯ ನಿಮ ತಮ್ಮ ಆಳಿದರೇನ|
ನತ್ತಿಗಿ ನಮ ಕಾಲ ತೊಳಽದೆಲ್ಲ|
ನೆತ್ತಿಗಿ ನಿಮ ಕಾಲ ನಾವ್ಯಾಕ ತೊಳೆಯುನು ಧೊರಿಯ|
ಮುತ್ತೈೈದಿತನಽ ಪಡಽದೇವ ||೬||
* * *

ಬಾಳಿಯ ಕಾಯಾಂಽಗ ಬಾಗಿ ಬಂದಳ ಬಾಲಿ|
ಭಾಗ ಕೊಡು ರಾಯಾಽ ಎಡಽದಲ್ಲಿ||
ಭಾಗ ಕೊಡು ರಾಽಯ ಎಡದಲಿ ಸಾವಿರದ|
ಮಾಣೀಕ್ಹೇರವರಽ ಮಗಽಳೀಗಿ ||೭||

ನಿಂಬಿ ಕಾಯ್ಹಾಂಽಗ ತುಂಬಿ ಬಂದಳ ಬಾಲಿ|
ಇಂಬ ಕೊಡು ರಾಯಾಽ ಎಡಽದಲ್ಲಿ||
ಇಂಬ ಕೊಡು ರಾಽಯ ಎಡದಲ್ಲಿ ಸಾವಿರದ|
ಒಜ್ಜಿರ್‍ಹೇರವರಽ ಮಗಳೀಗಿ ||೮||
* * *

ರಾಜರಾಜರು ಕೂಽಡಿ ರಾಜೆಲ್ಲ ಹುಡುಕಿದರ|
ಮತ್ತೆಲ್ಲಿ ತಂದ್ಯೊಽ ಚೆಲಽವೀನ||
ಮತ್ತೆಲ್ಲಿ ತಂದ್ಯೋ ಚೆಲವೀನ ಹಲಸಂಗಿ|
ಆಗರದಾಗಿತ್ತೊಂದರಽಗಿಣಿಯ ||೯||

ಶೆಟ್ಟಿ ಶೆಟ್ಟೆರು ಕೂಽಡಿ ದಿಕ್ಕೆಲ್ಲಾ ಹುದುಕಿದರ|
ಮತ್ತೆಲ್ಲಿ ತಂದ್ಯೊಽ ಚೆಲಽವಿನ||
ಮತ್ತೆಲ್ಲಿ ತಂಜ್ಯೊ ಚೆಲವೀನ ಹಲಸಂಗಿ|
ಬಾಳಿ ಬನೆದಾನೊಂದರಽಗಿಣಿಯ ||೧೦||
*****

ವಧುವರರಿಗೆ ಸರ್ವಜನರು ಕೂಡಿ ಅಕ್ಕೀಕಾಳು (ಅಕ್ಷತೆ) ಒಗೆದ ಮೇಲೆ ತುಸು ಹೊತ್ತಿನಲ್ಲಿ ಅವರಿಂದ ನಗೆಯಾಟವನ್ನು ಆಡಿಸುತ್ತಾರೆ. ಆಗ ಒಬ್ಬರು ಅಡಿಕೆಯನ್ನು ಗಟ್ಟಿಯಾಗಿ ಹಿಡಿಯಬೇಕು; ಇನ್ನೊಬ್ಬರು ಅದನ್ನು ಬಿಡಿಸಿಕೊಳ್ಳಬೇಕು. ಆಗ ಸುತ್ತಮುತ್ತಲಿನ ಹೆಣ್ಣುಮಕ್ಕಳು ಈ ಹಾಡನ್ನು ಹಾಡುವರು.

ಛಂದಸ್ಸು:- ತ್ರಿಪದಿ.

ಶಬ್ದಪ್ರಯೋಗಗಳು:- ಐದು ಅಕ್ಷರ=ಶಿವಪಾರ್ವತಿ ಎಂಬ ಐದು ಅಕ್ಷರಗಳಾಗಿರಬಹುದು. ಮಲ್ಲಿಗ್ಹೂವಿನ ಕ್ರಮದಿಂದ= (ಅಡಿಗಳು) ಮಲ್ಲಿಗೆಯಂತೆ ಮೃದುವಾಗಿವೆಯೆಂದು ಭಾವಿಸಿ. ಪಾದಲಿ=ಪಾದದಲ್ಲಿ. ಪದಮ=ಪದ್ಮಚಿಹ್ನ. ಬಲಬಂದು=ಬಲವು ಬರಲಿ. ಬಟ್ಟಲಿ=ಬೆರಳಲ್ಲಿ. ಒಂಕಿ=ತೋಳಿನ ಆಭರಣ. ಸರಗಿ=ಕೊರಳಿನ ಆಭರಣ. ಕಾಯಾಂಗ-ಕಾಯಿಯಂತೆ. ಭಾಗ=ಸ್ಥಳ.

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...