Home / ಕವನ / ಕವಿತೆ / ಅಡಿಕೆ ಆಡುವ ಹಾಡು

ಅಡಿಕೆ ಆಡುವ ಹಾಡು

ಐದು ಅಕ್ಷರದಿಂದ ತೆಯದು ಗಂಧಾಽದಿಂದ|
ಮಲ್ಲಿಗ್ಹೂವಿಽನ ಕ್ರಮಽದಿಂದ||
ಮಲ್ಲಿಗ್ಹೂವಿಽನ ಕ್ರಮದಿಂದ ತಂಗೆಮ ತನ್ನ|
ರಾಯರ ಶೀಪಾದಾಽ ತೊಳಂದಾಳ ||೧||

ರಾಯರ ಮಗಳ ಬಂಽದು ಪಾದಪೂಜಿ ಮಾಡಟಿಸಗೆ|
ಪಾದಲಿ ಕಂಡಾಳಽ ಪದಮವ||
ಪಾದಲಿ ಕಂಡಾಽಳೆ ಪದಮವ ರಾಯಿರ ನಿಮಗ|
ಆನಿ ಏರಂಥಾ ಬಲಽ ಬಂದ ||೨||

ಶಟ್ಟೆವರ ಮಗಳ ಬಂಽಮ ಬಟ್ಟ್‌ ಪೂಜಿ ಮಾಽಡಟಿಗೆ|
ಬಟ್ಟಿಲಿ ಕಂಡಾಳಽ ಪದಽಮಽವ||
ಬಟ್ಟಿಲಿ ಕಂಡಾಽಳ ಪದಮವ ರಾಯರ ನಿಮಗ|
ಮಂಚ ಏರಂಥಾಽ ಬಲಽ ಬಂದ ||೩||
* * *

ಹೆತ್ತೂರ ರಾಽಜ್ಯ ನಿಮ್ಮಪ್ಪ ಆಳಿದರೇನ|
ಒಂಕಿಗಿ ನಮ್ಮ ಕಾಲಽ ತೊಳಽದೆಲ್ಲ||
ಒಂಕಿಗಿ ನಿಮ ಕಾಽಲ ನಾವ್ಯಾಕ ತೊಳಿಯುನು ಧೊರಿಯ|
ಪ್ರೇಮ ಬಲ್ಲವರಽ ಗುಣಕಾಗಿ ||೪||

ಎಂಟೂರ ರಾಜ್ಯ ನಿಮ್ಮಣ್ಣ ಆಳಿದರೇನ|
ಸರಗಿಗಿ ನಮ ಕಾಲಽ ತೊಳಽದೆಲ್ಲ||
ಸರಗಿಗಿ ನಿಮ ಕಾಽಲ ನಾವ್ಯಾಕ ತೊಳೆಯುನು ಧೊರಿಯ|
ಚಿತ್ತ ಬಲ್ಲವರಽ ಗುಣಾಕಾಽಗಿ ||೫||

ಆರೂರ ರಾಽಜ್ಯ ನಿಮ ತಮ್ಮ ಆಳಿದರೇನ|
ನತ್ತಿಗಿ ನಮ ಕಾಲ ತೊಳಽದೆಲ್ಲ|
ನೆತ್ತಿಗಿ ನಿಮ ಕಾಲ ನಾವ್ಯಾಕ ತೊಳೆಯುನು ಧೊರಿಯ|
ಮುತ್ತೈೈದಿತನಽ ಪಡಽದೇವ ||೬||
* * *

ಬಾಳಿಯ ಕಾಯಾಂಽಗ ಬಾಗಿ ಬಂದಳ ಬಾಲಿ|
ಭಾಗ ಕೊಡು ರಾಯಾಽ ಎಡಽದಲ್ಲಿ||
ಭಾಗ ಕೊಡು ರಾಽಯ ಎಡದಲಿ ಸಾವಿರದ|
ಮಾಣೀಕ್ಹೇರವರಽ ಮಗಽಳೀಗಿ ||೭||

ನಿಂಬಿ ಕಾಯ್ಹಾಂಽಗ ತುಂಬಿ ಬಂದಳ ಬಾಲಿ|
ಇಂಬ ಕೊಡು ರಾಯಾಽ ಎಡಽದಲ್ಲಿ||
ಇಂಬ ಕೊಡು ರಾಽಯ ಎಡದಲ್ಲಿ ಸಾವಿರದ|
ಒಜ್ಜಿರ್‍ಹೇರವರಽ ಮಗಳೀಗಿ ||೮||
* * *

ರಾಜರಾಜರು ಕೂಽಡಿ ರಾಜೆಲ್ಲ ಹುಡುಕಿದರ|
ಮತ್ತೆಲ್ಲಿ ತಂದ್ಯೊಽ ಚೆಲಽವೀನ||
ಮತ್ತೆಲ್ಲಿ ತಂದ್ಯೋ ಚೆಲವೀನ ಹಲಸಂಗಿ|
ಆಗರದಾಗಿತ್ತೊಂದರಽಗಿಣಿಯ ||೯||

ಶೆಟ್ಟಿ ಶೆಟ್ಟೆರು ಕೂಽಡಿ ದಿಕ್ಕೆಲ್ಲಾ ಹುದುಕಿದರ|
ಮತ್ತೆಲ್ಲಿ ತಂದ್ಯೊಽ ಚೆಲಽವಿನ||
ಮತ್ತೆಲ್ಲಿ ತಂಜ್ಯೊ ಚೆಲವೀನ ಹಲಸಂಗಿ|
ಬಾಳಿ ಬನೆದಾನೊಂದರಽಗಿಣಿಯ ||೧೦||
*****

ವಧುವರರಿಗೆ ಸರ್ವಜನರು ಕೂಡಿ ಅಕ್ಕೀಕಾಳು (ಅಕ್ಷತೆ) ಒಗೆದ ಮೇಲೆ ತುಸು ಹೊತ್ತಿನಲ್ಲಿ ಅವರಿಂದ ನಗೆಯಾಟವನ್ನು ಆಡಿಸುತ್ತಾರೆ. ಆಗ ಒಬ್ಬರು ಅಡಿಕೆಯನ್ನು ಗಟ್ಟಿಯಾಗಿ ಹಿಡಿಯಬೇಕು; ಇನ್ನೊಬ್ಬರು ಅದನ್ನು ಬಿಡಿಸಿಕೊಳ್ಳಬೇಕು. ಆಗ ಸುತ್ತಮುತ್ತಲಿನ ಹೆಣ್ಣುಮಕ್ಕಳು ಈ ಹಾಡನ್ನು ಹಾಡುವರು.

ಛಂದಸ್ಸು:- ತ್ರಿಪದಿ.

ಶಬ್ದಪ್ರಯೋಗಗಳು:- ಐದು ಅಕ್ಷರ=ಶಿವಪಾರ್ವತಿ ಎಂಬ ಐದು ಅಕ್ಷರಗಳಾಗಿರಬಹುದು. ಮಲ್ಲಿಗ್ಹೂವಿನ ಕ್ರಮದಿಂದ= (ಅಡಿಗಳು) ಮಲ್ಲಿಗೆಯಂತೆ ಮೃದುವಾಗಿವೆಯೆಂದು ಭಾವಿಸಿ. ಪಾದಲಿ=ಪಾದದಲ್ಲಿ. ಪದಮ=ಪದ್ಮಚಿಹ್ನ. ಬಲಬಂದು=ಬಲವು ಬರಲಿ. ಬಟ್ಟಲಿ=ಬೆರಳಲ್ಲಿ. ಒಂಕಿ=ತೋಳಿನ ಆಭರಣ. ಸರಗಿ=ಕೊರಳಿನ ಆಭರಣ. ಕಾಯಾಂಗ-ಕಾಯಿಯಂತೆ. ಭಾಗ=ಸ್ಥಳ.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...