ವಚನ ವಿಚಾರ – ಅಸಹಾಯಕ

ವಚನ ವಿಚಾರ – ಅಸಹಾಯಕ

ಕೆಸರಲ್ಲಿ ಬಿದ್ದ ಬಡಪಶುವಿನಂತೆ
ಆನು ದೆಸೆದೆಸೆಗೆ ಬಾಯಿ ಬಿಡುತ್ತಿದ್ದೇನೆ
ಅಯ್ಯಾ
ಆರೈವವರಿಲ್ಲ
ಅಕಟಕಟಾ ಪಶುವೆಂದೆನ್ನ
ಕೂಡಲ ಸಂಗಮದೇವ
ಕೊಂಬ ಹಿಡಿದೆತ್ತುವನ್ನಕ್ಕ

[ಆನು-ನಾನು, ಆರೈವರಿಲ್ಲ-ಆರೈಕೆಮಾಡುವವರಿಲ್ಲ]

ಬಸವಣ್ಣನ ಈ ವಚನ ಅಸಹಾಯಕತೆಯನ್ನು ಕುರಿತದ್ದು. ಈ ವಚನವನ್ನು ಕುರಿತು ಹೇಳುತ್ತಾ ಸುಜನಾ ಅವರು ಆಡಿದ ಮಾತುಗಳನ್ನು ಮರೆಯಲು ಆಗಿಲ್ಲ.

ಬಸವಣ್ಣ ಇಲ್ಲಿ ತನ್ನನ್ನು ಕೆಸರಿನಲ್ಲಿ ಸಿಕ್ಕಿಕೊಂಡ ಹಸುವಿಗೆ ಹೋಲಿಸಿಕೊಂಡಿದ್ದಾನೆ. ಅಸಹಾಯಕನಾಗಿ, ನನ್ನನ್ನು ಯಾರೂ ಆರೈಕೆ ಮಾಡುವವರಿಲ್ಲ, ವಿಚಾರಿಸುವವರಿಲ್ಲ, ಕೂಡಲಸಂಗಮನೇ ಬಂದು ಕೊಂಬ ಹಿಡಿದು ಎತ್ತಬೇಕು ಅನ್ನುತ್ತಾನೆ. ಸರಿ. ಆದರೆ ಗಮನಿಸಿ ನೋಡಿ. ಸಾಮಾನ್ಯ ಕವಿಯಾಗಿದ್ದರೆ ಕೊನೆಯ ಸಾಲಿಗೆ ಬರುವವೇಳೆಗೆ `ನನ್ನ ಕೈ ಹಿಡಿದು ಎತ್ತುವವರೆಗೆ’ ಅನ್ನಬಹುದಿತ್ತು. ಆದರೆ ಬಸವಣ್ಣ ಇಲ್ಲಿ ಕೇವಲ ಹಸುವಿನ ಹೋಲಿಕೆಯನ್ನು ಬಳಸುತ್ತಿಲ್ಲ, ರೂಪಕವನ್ನು ಬಳಸುತ್ತಿದ್ದಾನೆ. ಅಲ್ಲ, ತಾನೇ ಕೆಸರಿನಲ್ಲಿ ಸಿಕ್ಕಿಬಿದ್ದ ಹಸುವಾಗಿದ್ದಾನೆ. ಅಷ್ಟು ತನ್ಮಯತೆ ಇರುವುದರಿಂದಲೇ ಕೊನೆಯ ಸಾಲಿನಲ್ಲಿ ಕೊಂಬ ಹಿಡಿದೆತ್ತು ಎಂದಿದ್ದಾನೆ. ಇದು ಸುಜನಾ ಅವರು ಕೊಟ್ಟ ವಿವರಣೆ.

ಮಾತಿನಲ್ಲಿ ತನ್ನನ್ನು ಹಸುವಿಗೆ ಹೋಲಿಸಿಕೊಂಡವನು ತಲ್ಲೀನನಾಗಿ ತಾನೇ ಹಸು ಎಂದು ಭಾವಿಸುವಷ್ಟು ತಾದಾತ್ಮ್ಯ ಹೊಂದುವುದು ಇದೆಯಲ್ಲ ಅದು ಅಪರೂಪ. ಕವಿಗೆ ಮತ್ತು ಭಕ್ತನಿಗೆ ಇಬ್ಬರಿಗೂ ಇಂಥ ತಾದಾತ್ಮ್ಯ ಬೇಕು. ಆಗ ಮಾತ್ರ ಮಾತು ಬರಿಯ ಮಾತಾಗಿ ಉಳಿಯದೆ ಶಕ್ತಿಯಾಗುತ್ತದೆ. ಇಂಥ ತಾಕತ್ತು ಇರುವ ವ್ಯಕ್ತಿ ಮಾತ್ರ ನುಡಿದಂತೆ ನಡೆಯುವ ಮಾತು ಆಡಬಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮತ್ತೆ ಹಸ್ತಿನಾಪುರಕ್ಕೆ ಬಂದ ಪಾಂಡವರು
Next post ಸೊಸೆಗೊಂದು ಕಾಲ

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys