Home / ಲೇಖನ / ಇತರೆ / ವಚನ ವಿಚಾರ – ಅಸಹಾಯಕ

ವಚನ ವಿಚಾರ – ಅಸಹಾಯಕ

ಕೆಸರಲ್ಲಿ ಬಿದ್ದ ಬಡಪಶುವಿನಂತೆ
ಆನು ದೆಸೆದೆಸೆಗೆ ಬಾಯಿ ಬಿಡುತ್ತಿದ್ದೇನೆ
ಅಯ್ಯಾ
ಆರೈವವರಿಲ್ಲ
ಅಕಟಕಟಾ ಪಶುವೆಂದೆನ್ನ
ಕೂಡಲ ಸಂಗಮದೇವ
ಕೊಂಬ ಹಿಡಿದೆತ್ತುವನ್ನಕ್ಕ

[ಆನು-ನಾನು, ಆರೈವರಿಲ್ಲ-ಆರೈಕೆಮಾಡುವವರಿಲ್ಲ]

ಬಸವಣ್ಣನ ಈ ವಚನ ಅಸಹಾಯಕತೆಯನ್ನು ಕುರಿತದ್ದು. ಈ ವಚನವನ್ನು ಕುರಿತು ಹೇಳುತ್ತಾ ಸುಜನಾ ಅವರು ಆಡಿದ ಮಾತುಗಳನ್ನು ಮರೆಯಲು ಆಗಿಲ್ಲ.

ಬಸವಣ್ಣ ಇಲ್ಲಿ ತನ್ನನ್ನು ಕೆಸರಿನಲ್ಲಿ ಸಿಕ್ಕಿಕೊಂಡ ಹಸುವಿಗೆ ಹೋಲಿಸಿಕೊಂಡಿದ್ದಾನೆ. ಅಸಹಾಯಕನಾಗಿ, ನನ್ನನ್ನು ಯಾರೂ ಆರೈಕೆ ಮಾಡುವವರಿಲ್ಲ, ವಿಚಾರಿಸುವವರಿಲ್ಲ, ಕೂಡಲಸಂಗಮನೇ ಬಂದು ಕೊಂಬ ಹಿಡಿದು ಎತ್ತಬೇಕು ಅನ್ನುತ್ತಾನೆ. ಸರಿ. ಆದರೆ ಗಮನಿಸಿ ನೋಡಿ. ಸಾಮಾನ್ಯ ಕವಿಯಾಗಿದ್ದರೆ ಕೊನೆಯ ಸಾಲಿಗೆ ಬರುವವೇಳೆಗೆ `ನನ್ನ ಕೈ ಹಿಡಿದು ಎತ್ತುವವರೆಗೆ’ ಅನ್ನಬಹುದಿತ್ತು. ಆದರೆ ಬಸವಣ್ಣ ಇಲ್ಲಿ ಕೇವಲ ಹಸುವಿನ ಹೋಲಿಕೆಯನ್ನು ಬಳಸುತ್ತಿಲ್ಲ, ರೂಪಕವನ್ನು ಬಳಸುತ್ತಿದ್ದಾನೆ. ಅಲ್ಲ, ತಾನೇ ಕೆಸರಿನಲ್ಲಿ ಸಿಕ್ಕಿಬಿದ್ದ ಹಸುವಾಗಿದ್ದಾನೆ. ಅಷ್ಟು ತನ್ಮಯತೆ ಇರುವುದರಿಂದಲೇ ಕೊನೆಯ ಸಾಲಿನಲ್ಲಿ ಕೊಂಬ ಹಿಡಿದೆತ್ತು ಎಂದಿದ್ದಾನೆ. ಇದು ಸುಜನಾ ಅವರು ಕೊಟ್ಟ ವಿವರಣೆ.

ಮಾತಿನಲ್ಲಿ ತನ್ನನ್ನು ಹಸುವಿಗೆ ಹೋಲಿಸಿಕೊಂಡವನು ತಲ್ಲೀನನಾಗಿ ತಾನೇ ಹಸು ಎಂದು ಭಾವಿಸುವಷ್ಟು ತಾದಾತ್ಮ್ಯ ಹೊಂದುವುದು ಇದೆಯಲ್ಲ ಅದು ಅಪರೂಪ. ಕವಿಗೆ ಮತ್ತು ಭಕ್ತನಿಗೆ ಇಬ್ಬರಿಗೂ ಇಂಥ ತಾದಾತ್ಮ್ಯ ಬೇಕು. ಆಗ ಮಾತ್ರ ಮಾತು ಬರಿಯ ಮಾತಾಗಿ ಉಳಿಯದೆ ಶಕ್ತಿಯಾಗುತ್ತದೆ. ಇಂಥ ತಾಕತ್ತು ಇರುವ ವ್ಯಕ್ತಿ ಮಾತ್ರ ನುಡಿದಂತೆ ನಡೆಯುವ ಮಾತು ಆಡಬಲ್ಲ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...