ವಚನ ವಿಚಾರ – ಅಸಹಾಯಕ

ವಚನ ವಿಚಾರ – ಅಸಹಾಯಕ

ಕೆಸರಲ್ಲಿ ಬಿದ್ದ ಬಡಪಶುವಿನಂತೆ
ಆನು ದೆಸೆದೆಸೆಗೆ ಬಾಯಿ ಬಿಡುತ್ತಿದ್ದೇನೆ
ಅಯ್ಯಾ
ಆರೈವವರಿಲ್ಲ
ಅಕಟಕಟಾ ಪಶುವೆಂದೆನ್ನ
ಕೂಡಲ ಸಂಗಮದೇವ
ಕೊಂಬ ಹಿಡಿದೆತ್ತುವನ್ನಕ್ಕ

[ಆನು-ನಾನು, ಆರೈವರಿಲ್ಲ-ಆರೈಕೆಮಾಡುವವರಿಲ್ಲ]

ಬಸವಣ್ಣನ ಈ ವಚನ ಅಸಹಾಯಕತೆಯನ್ನು ಕುರಿತದ್ದು. ಈ ವಚನವನ್ನು ಕುರಿತು ಹೇಳುತ್ತಾ ಸುಜನಾ ಅವರು ಆಡಿದ ಮಾತುಗಳನ್ನು ಮರೆಯಲು ಆಗಿಲ್ಲ.

ಬಸವಣ್ಣ ಇಲ್ಲಿ ತನ್ನನ್ನು ಕೆಸರಿನಲ್ಲಿ ಸಿಕ್ಕಿಕೊಂಡ ಹಸುವಿಗೆ ಹೋಲಿಸಿಕೊಂಡಿದ್ದಾನೆ. ಅಸಹಾಯಕನಾಗಿ, ನನ್ನನ್ನು ಯಾರೂ ಆರೈಕೆ ಮಾಡುವವರಿಲ್ಲ, ವಿಚಾರಿಸುವವರಿಲ್ಲ, ಕೂಡಲಸಂಗಮನೇ ಬಂದು ಕೊಂಬ ಹಿಡಿದು ಎತ್ತಬೇಕು ಅನ್ನುತ್ತಾನೆ. ಸರಿ. ಆದರೆ ಗಮನಿಸಿ ನೋಡಿ. ಸಾಮಾನ್ಯ ಕವಿಯಾಗಿದ್ದರೆ ಕೊನೆಯ ಸಾಲಿಗೆ ಬರುವವೇಳೆಗೆ `ನನ್ನ ಕೈ ಹಿಡಿದು ಎತ್ತುವವರೆಗೆ’ ಅನ್ನಬಹುದಿತ್ತು. ಆದರೆ ಬಸವಣ್ಣ ಇಲ್ಲಿ ಕೇವಲ ಹಸುವಿನ ಹೋಲಿಕೆಯನ್ನು ಬಳಸುತ್ತಿಲ್ಲ, ರೂಪಕವನ್ನು ಬಳಸುತ್ತಿದ್ದಾನೆ. ಅಲ್ಲ, ತಾನೇ ಕೆಸರಿನಲ್ಲಿ ಸಿಕ್ಕಿಬಿದ್ದ ಹಸುವಾಗಿದ್ದಾನೆ. ಅಷ್ಟು ತನ್ಮಯತೆ ಇರುವುದರಿಂದಲೇ ಕೊನೆಯ ಸಾಲಿನಲ್ಲಿ ಕೊಂಬ ಹಿಡಿದೆತ್ತು ಎಂದಿದ್ದಾನೆ. ಇದು ಸುಜನಾ ಅವರು ಕೊಟ್ಟ ವಿವರಣೆ.

ಮಾತಿನಲ್ಲಿ ತನ್ನನ್ನು ಹಸುವಿಗೆ ಹೋಲಿಸಿಕೊಂಡವನು ತಲ್ಲೀನನಾಗಿ ತಾನೇ ಹಸು ಎಂದು ಭಾವಿಸುವಷ್ಟು ತಾದಾತ್ಮ್ಯ ಹೊಂದುವುದು ಇದೆಯಲ್ಲ ಅದು ಅಪರೂಪ. ಕವಿಗೆ ಮತ್ತು ಭಕ್ತನಿಗೆ ಇಬ್ಬರಿಗೂ ಇಂಥ ತಾದಾತ್ಮ್ಯ ಬೇಕು. ಆಗ ಮಾತ್ರ ಮಾತು ಬರಿಯ ಮಾತಾಗಿ ಉಳಿಯದೆ ಶಕ್ತಿಯಾಗುತ್ತದೆ. ಇಂಥ ತಾಕತ್ತು ಇರುವ ವ್ಯಕ್ತಿ ಮಾತ್ರ ನುಡಿದಂತೆ ನಡೆಯುವ ಮಾತು ಆಡಬಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮತ್ತೆ ಹಸ್ತಿನಾಪುರಕ್ಕೆ ಬಂದ ಪಾಂಡವರು
Next post ಸೊಸೆಗೊಂದು ಕಾಲ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…