Home / ಕವನ / ಕವಿತೆ / ಸೊಸೆಗೊಂದು ಕಾಲ

ಸೊಸೆಗೊಂದು ಕಾಲ

ಸೈರಿಸು ಮಗಳೇ
ಹೈರಾಣವಾಗದಿರು
ಶತ ಶತಮಾನಗಳಿಂದ ಬಂದ
ಗತ್ತು ಗಮ್ಮತ್ತು ಶಾಶ್ವತವಲ್ಲ.
ಹೊಸದಂತೂ ಅಲ್ಲ.
ಅಟ್ಟವೇರಿದವರು ಇಳಿಯಲೇ ಬೇಕಲ್ಲ
ನಿನ್ನವ್ವ ನನ್ನವ್ವ ಅವರವ್ವ.
ತುಳಿದದ್ದು ಒಂದೇ ಹಾದಿ
ಕಲ್ಲು ಮುಳ್ಳಿನ ಗಾದಿ
ನಾಲ್ಕು ಗೋಡೆಗಳಲ್ಲೇ ಚಿತ್ತಾರ
ಹೊಸಲಿನಿಂದಾಚೆ ಹೊಸ
ಜಗತ್ತು ಕಂಡರಿಯದೆ
ದನಿಯೆತ್ತದ ದರ್ಪದ
ದಳ್ಳುರಿಗೆ ದಹಿಸಿ ದಹಿಸಿ
ಗುಡುಗಾಗದೆ ಮಿಂಚಾಗದೆ
ತಣ್ಣನೆಯ ಮೋಡವಾಗಿ
ಮಡುಗಟ್ಟೆ ಮಳಮಳಿಸಿ
ಒಳಗೊಳಗೆ ಕುದ್ದು
ಕಾವಿಗೆ ಕರಗಿದವರು
ಕತ್ತಲೆಯ ಕಾಮಕ್ಕೆ
ಬೆತ್ತಲಾಗಿ ಬಸಿರಾಗಿ
ಕಟ್ಟುನಿಟ್ಟಿನ ಮನುಶಾಸನ
ತಪ್ಪದೆ ಪಾಲಿಸಿ ಚರಿತ್ರೆ
ಇತಿಹಾಸದ ಗರ್ಭ ಸೇರದೆ
ಕಥೆ ಕಾದಂಬರಿಗೆ
ವಸ್ತುವಾದವರು
ಸೈರಿಸು ಮಗಳೇ
ಕಾಲ ಯಾರಪ್ಪನದೂ ಅಲ್ಲ.
ನನ್ನ ನಿನ್ನ ಯಾರ ಮಾತು ಕೇಳುವುದಿಲ್ಲ
ಸಹನೆಯ ದೀಪ ಹಿಡಿದು ಕಾಯುತ್ತಿರು
ಬಂದೇ ಬರುತ್ತದೆ
ಅತ್ತೆಗೊಂದು ಕಾಲವಾದರೆ
ಸೊಸೆಗೊಂದು ಕಾಲ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...