ಸೊಸೆಗೊಂದು ಕಾಲ

ಸೈರಿಸು ಮಗಳೇ
ಹೈರಾಣವಾಗದಿರು
ಶತ ಶತಮಾನಗಳಿಂದ ಬಂದ
ಗತ್ತು ಗಮ್ಮತ್ತು ಶಾಶ್ವತವಲ್ಲ.
ಹೊಸದಂತೂ ಅಲ್ಲ.
ಅಟ್ಟವೇರಿದವರು ಇಳಿಯಲೇ ಬೇಕಲ್ಲ
ನಿನ್ನವ್ವ ನನ್ನವ್ವ ಅವರವ್ವ.
ತುಳಿದದ್ದು ಒಂದೇ ಹಾದಿ
ಕಲ್ಲು ಮುಳ್ಳಿನ ಗಾದಿ
ನಾಲ್ಕು ಗೋಡೆಗಳಲ್ಲೇ ಚಿತ್ತಾರ
ಹೊಸಲಿನಿಂದಾಚೆ ಹೊಸ
ಜಗತ್ತು ಕಂಡರಿಯದೆ
ದನಿಯೆತ್ತದ ದರ್ಪದ
ದಳ್ಳುರಿಗೆ ದಹಿಸಿ ದಹಿಸಿ
ಗುಡುಗಾಗದೆ ಮಿಂಚಾಗದೆ
ತಣ್ಣನೆಯ ಮೋಡವಾಗಿ
ಮಡುಗಟ್ಟೆ ಮಳಮಳಿಸಿ
ಒಳಗೊಳಗೆ ಕುದ್ದು
ಕಾವಿಗೆ ಕರಗಿದವರು
ಕತ್ತಲೆಯ ಕಾಮಕ್ಕೆ
ಬೆತ್ತಲಾಗಿ ಬಸಿರಾಗಿ
ಕಟ್ಟುನಿಟ್ಟಿನ ಮನುಶಾಸನ
ತಪ್ಪದೆ ಪಾಲಿಸಿ ಚರಿತ್ರೆ
ಇತಿಹಾಸದ ಗರ್ಭ ಸೇರದೆ
ಕಥೆ ಕಾದಂಬರಿಗೆ
ವಸ್ತುವಾದವರು
ಸೈರಿಸು ಮಗಳೇ
ಕಾಲ ಯಾರಪ್ಪನದೂ ಅಲ್ಲ.
ನನ್ನ ನಿನ್ನ ಯಾರ ಮಾತು ಕೇಳುವುದಿಲ್ಲ
ಸಹನೆಯ ದೀಪ ಹಿಡಿದು ಕಾಯುತ್ತಿರು
ಬಂದೇ ಬರುತ್ತದೆ
ಅತ್ತೆಗೊಂದು ಕಾಲವಾದರೆ
ಸೊಸೆಗೊಂದು ಕಾಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಅಸಹಾಯಕ
Next post ನಿನ್ನ ನೆನಪು ಕಂಪು ತಂಪು

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

cheap jordans|wholesale air max|wholesale jordans|wholesale jewelry|wholesale jerseys