Home / ಕವನ / ಕವಿತೆ / ನಾನು ನೀನು

ನಾನು ನೀನು

ಬಹುಶಃ ಹಗಲು ಇರುಳಿಂದ ಬೈಗು ಬೆಳಗಿಂದ
ಭೂಮಿ ಬಾನಿಂದ ನೆಲವು ಜಲದಿಂದ
ತಾರೆಯು ಪುಂಜದಿಂದ ಸೂರ್ಯನು ಕಪ್ಪುಗೂಡಿಂದ
ಬೇರೆಯಾದಂದು ನಾವಿಬ್ಬರೂ ಬೇರೆ ಬೇರಾಗಿರಬೇಕು
ಇಡಿಯಾಗಿ ನೋಡಿದರೆ ನನಗೂ ನಿನಗೂ ಕೋಟಿ ರೂಪ
ಬಿಡಿಯಾಗಿ ನೋಡಿದರೆ ನಾನೊಂದು ಬಯಕೆ ನೀನೊಂದು ಬಯಕೆ
ಬಯಕೆಯಾದೀತು ಹೇಗೆ ಪಾಪ?

ನನ್ನ ನಿನ್ನ ಬಂಧ ಜನ್ಮಾಂತರಗಳ ಅನುಬಂಧವೆಂಬ ಭ್ರಮೆಯೋ?
ಏಕವು ಅನೇಕವಾಗುವ ಅಥವಾ ಅನೇಕವು ಏಕವಾಗುವ
ಭ್ರಮಣೆಯೋ?
ಇದು ಒಂದು ಚಣದ ಹಸಿವೆಯೋ? ಜೀವಚಕ್ರದ
ಹಲ್ಲುಮಸೆವೆಯೋ?
ಒಂದರ ಪ್ರಾಣ ಇನ್ನೊಂದರ ಉಸಿರಾಗಿ ಒಂದರ ಬರವಿನ್ನೊಂದರ
ವರವಾಗಿ
ಕಣ್ಣು ಗೊಂಬೆಗಳಲ್ಲಿ ಸೂತ್ರ ಹಾಕಿ ಕುಣಿದಾಡಿದುದು
ಕೇವಲ ಕಥೆಯೋ? ನರಗಳ ಹಿಂಡುವ ವೆಥೆಯೋ?
ಕಾಣದುದು ಮೊಳೆದೋರಿದಾಗ ಕಂಡುದು ಕಾಣದಾದಾಗ

ಜಗವನ್ನೇ ರಂಗುರಂಗಾಗಿಸುವ ಗುಂಗಿನ ಕಲೆ
ಒಂದರಲ್ಲೊಂದು ಕಾದು ಕೆಣಕಿ ಕೂಡಿ ಕಬಳಿಸಿ
ಒಂದನ್ನೊಂದು ಸೇರಿ ಹೀರುವ ಮಾಟ
ಹರಿದು ಹಬ್ಬಲೆಂದು ಕೂಡುವ ಕೂಟ
ನಾವಿಬ್ಬರೂ ಬೇರೆಯಾದಂದಿನಷ್ಟು ಹಳೆಯದಾದರೂ
ಚಣ ಚಣವೂ ಹೊಸಮಸೆಯಾಗುವ ಮರ್ಮ
ತಳ ಬುಡವ ವ್ಯಾಪಿಸಿರುವ ಧರ್ಮ
ಎಂದೆಂದಿಗೂ ಹೊಸದು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...