Home / ಕವನ / ಕವಿತೆ / ನಾನು ನೀನು

ನಾನು ನೀನು

ಬಹುಶಃ ಹಗಲು ಇರುಳಿಂದ ಬೈಗು ಬೆಳಗಿಂದ
ಭೂಮಿ ಬಾನಿಂದ ನೆಲವು ಜಲದಿಂದ
ತಾರೆಯು ಪುಂಜದಿಂದ ಸೂರ್ಯನು ಕಪ್ಪುಗೂಡಿಂದ
ಬೇರೆಯಾದಂದು ನಾವಿಬ್ಬರೂ ಬೇರೆ ಬೇರಾಗಿರಬೇಕು
ಇಡಿಯಾಗಿ ನೋಡಿದರೆ ನನಗೂ ನಿನಗೂ ಕೋಟಿ ರೂಪ
ಬಿಡಿಯಾಗಿ ನೋಡಿದರೆ ನಾನೊಂದು ಬಯಕೆ ನೀನೊಂದು ಬಯಕೆ
ಬಯಕೆಯಾದೀತು ಹೇಗೆ ಪಾಪ?

ನನ್ನ ನಿನ್ನ ಬಂಧ ಜನ್ಮಾಂತರಗಳ ಅನುಬಂಧವೆಂಬ ಭ್ರಮೆಯೋ?
ಏಕವು ಅನೇಕವಾಗುವ ಅಥವಾ ಅನೇಕವು ಏಕವಾಗುವ
ಭ್ರಮಣೆಯೋ?
ಇದು ಒಂದು ಚಣದ ಹಸಿವೆಯೋ? ಜೀವಚಕ್ರದ
ಹಲ್ಲುಮಸೆವೆಯೋ?
ಒಂದರ ಪ್ರಾಣ ಇನ್ನೊಂದರ ಉಸಿರಾಗಿ ಒಂದರ ಬರವಿನ್ನೊಂದರ
ವರವಾಗಿ
ಕಣ್ಣು ಗೊಂಬೆಗಳಲ್ಲಿ ಸೂತ್ರ ಹಾಕಿ ಕುಣಿದಾಡಿದುದು
ಕೇವಲ ಕಥೆಯೋ? ನರಗಳ ಹಿಂಡುವ ವೆಥೆಯೋ?
ಕಾಣದುದು ಮೊಳೆದೋರಿದಾಗ ಕಂಡುದು ಕಾಣದಾದಾಗ

ಜಗವನ್ನೇ ರಂಗುರಂಗಾಗಿಸುವ ಗುಂಗಿನ ಕಲೆ
ಒಂದರಲ್ಲೊಂದು ಕಾದು ಕೆಣಕಿ ಕೂಡಿ ಕಬಳಿಸಿ
ಒಂದನ್ನೊಂದು ಸೇರಿ ಹೀರುವ ಮಾಟ
ಹರಿದು ಹಬ್ಬಲೆಂದು ಕೂಡುವ ಕೂಟ
ನಾವಿಬ್ಬರೂ ಬೇರೆಯಾದಂದಿನಷ್ಟು ಹಳೆಯದಾದರೂ
ಚಣ ಚಣವೂ ಹೊಸಮಸೆಯಾಗುವ ಮರ್ಮ
ತಳ ಬುಡವ ವ್ಯಾಪಿಸಿರುವ ಧರ್ಮ
ಎಂದೆಂದಿಗೂ ಹೊಸದು.
*****

Tagged:

Leave a Reply

Your email address will not be published. Required fields are marked *

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...

ಶೋಭಾ, ನಿನ್ನ ಎಲ್ಲಾ ಕಾಗದಗಳೂ ತಲುಪಿವೆ. ಓದುತ್ತಲೂ ಇದ್ದೇನೆ. ‘ತಂಪೆರೆಯುವ ನಿನ್ನ ಕಾಗದಗಳನ್ನು ದಿನಾ ಎದುರು ನೋಡುತ್ತಿರುತ್ತೇನೆ. ಅಬ್ಬಾ! ಎಷ್ಟು ಪ್ರಶ್ನೆಗಳನ್ನು ಕೇಳಿದ್ದೀಯಾ? ಬರೆಯುವ ಶಕ್ತಿ ಬರಲೀಂತ ಕಾಯ್ತಾ ಇದ್ದೆ. ಮಾನಸಿಕ ವಿಪ್ಲವದಲ್ಲಿ ಮನಸ್ಸು, ದೇಹ ಎಲ್ಲವೂ ಕೊರಡಿನಂತಾ...