ಶುಚಿಯಾಗಿರಬೇಕೊ

ಅಣ್ಣ ಶುಚಿಯಾಗಿರಬೇಕೊ
ನೀನು ಲಕಲಕ ಅನಬೇಕೋ ||

ದಿನವೂ ಸ್ನಾನವ ಮಾಡಬೇಕು
ಶುಭ್ರ ಬಟ್ಟೆಯ ಧರಿಸಬೇಕು
ಕೂದಲ ಬಾಚಿ ನೀಟಿರಬೇಕು
ನಡೆವ ಕಾಲಿಗೆ ಚಪ್ಪಲಿ ಬೇಕು ||

ವಾರದಲೊಮ್ಮೆ ಉಗುರ ಕಟಾವು
ಆಗಾಗ ಶುದ್ಧಿ ಕಣ್ಣಿನ ತಾವು
ಬೆರಳ ತಿರುವದಿರು ಮೂಗಿಗೆ
ಬೆಳಗು ರಾತ್ರಿ ಉಜ್ಜಣ್ಣ ಹಲ್ಲಿಗೆ ||

ಹಾದಿ ಬೀದಿಲಿ ಉಗುಳಬ್ಯಾಡ
ನಾಯಿಯಂತೆ ಮೂತ್ರಬ್ಯಾಡ
ಶೌಚಾಲಯವ ಬಳಸು ನಿತ್ಯಾ
ಆಗ ನೋಡು ಬದುಕೆಂಥ ಸ್ವಚ್ಚಾ ||

ಇವೆಲ್ಲ ಮಾಡಲು ಸಬೂಬುಬ್ಯಾಡ
ದುಡ್ಡಿರಬೇಕೆಂಬ ಭ್ರಮೆಯೂಬ್ಯಾಡ
ಬಡವರೆಂದರೆ ಕೊಳಕರಲ್ಲ
ಹಣವಂತರೆಲ್ಲ ಪರಿ ಶುದ್ಧರಲ್ಲ ||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಯಣ
Next post ಗುಡಗುಡಿಯನು ಸೇದಿನೋಡೋ

ಸಣ್ಣ ಕತೆ

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…