ಶುಚಿಯಾಗಿರಬೇಕೊ

ಅಣ್ಣ ಶುಚಿಯಾಗಿರಬೇಕೊ
ನೀನು ಲಕಲಕ ಅನಬೇಕೋ ||

ದಿನವೂ ಸ್ನಾನವ ಮಾಡಬೇಕು
ಶುಭ್ರ ಬಟ್ಟೆಯ ಧರಿಸಬೇಕು
ಕೂದಲ ಬಾಚಿ ನೀಟಿರಬೇಕು
ನಡೆವ ಕಾಲಿಗೆ ಚಪ್ಪಲಿ ಬೇಕು ||

ವಾರದಲೊಮ್ಮೆ ಉಗುರ ಕಟಾವು
ಆಗಾಗ ಶುದ್ಧಿ ಕಣ್ಣಿನ ತಾವು
ಬೆರಳ ತಿರುವದಿರು ಮೂಗಿಗೆ
ಬೆಳಗು ರಾತ್ರಿ ಉಜ್ಜಣ್ಣ ಹಲ್ಲಿಗೆ ||

ಹಾದಿ ಬೀದಿಲಿ ಉಗುಳಬ್ಯಾಡ
ನಾಯಿಯಂತೆ ಮೂತ್ರಬ್ಯಾಡ
ಶೌಚಾಲಯವ ಬಳಸು ನಿತ್ಯಾ
ಆಗ ನೋಡು ಬದುಕೆಂಥ ಸ್ವಚ್ಚಾ ||

ಇವೆಲ್ಲ ಮಾಡಲು ಸಬೂಬುಬ್ಯಾಡ
ದುಡ್ಡಿರಬೇಕೆಂಬ ಭ್ರಮೆಯೂಬ್ಯಾಡ
ಬಡವರೆಂದರೆ ಕೊಳಕರಲ್ಲ
ಹಣವಂತರೆಲ್ಲ ಪರಿ ಶುದ್ಧರಲ್ಲ ||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಯಣ
Next post ಗುಡಗುಡಿಯನು ಸೇದಿನೋಡೋ

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

cheap jordans|wholesale air max|wholesale jordans|wholesale jewelry|wholesale jerseys