ಗುಡಗುಡಿಯನು ಸೇದಿನೋಡೋ

ಗುಡಗುಡಿಯನು ಸೇದಿನೋಡೋ ನಿನ್ನ
ವಡಲೊಳಗಿನ ರೋಗಾ ತೆಗೆದು ಈಡ್ಯಾಡೋ ||ಪ||

ಮನಸೆಂಬ ಚಂಚಿಯ ಬಿಚ್ಚಿ ದಿನ-
ದಿನಸು ಪಾಲಕವೆಂಬ ಭಂಗಿಯ ಕೊಚ್ಚಿ
ನೆನವೆಂಬ ಚಿಲುಮಿಗೆ ಹಚ್ಚಿ ಬುದ್ಧಿ
ಯೆನುವೆಂಥ ಬೆಂಕಿಯ ಮೇಲೆ ನೀ ಮುಚ್ಚಿ ||೧||

ಬುರುಡಿಯೆಂಬುವದು ಶರೀರಾ ಇದು
ಮರೆತು ಸುಕೃತ ಬಿಟ್ಟು ಕೊಳವಿಯಾಕಾರಾ
ವರನಾರಾಯಣನೆಂಬೋ ನೀರಾ ತುಂಬಿ
ಅರವೆಂಬ ಅರುವೀಯ ಹೊಚ್ಚೋ ಮೋಜುಗಾರಾ ||೨||

ಶುದ್ಧಜ್ಞಾನವು ಮೇಲೇರುವದು
ದಾರಿದ್ರ್ಯ ದೇಹವು ಸುಟ್ಟು ಹೋಯ್ತು ಹಾರವದು
ಬುದ್ಧವಂತರಿಗೆ ತಿಳಿಯುವದು ನಮ್ಮ
ಮುದ್ದು ಚಿದಾನಂದ ಪಾದಕ್ಹೊಂದುವದು ||೩||

****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶುಚಿಯಾಗಿರಬೇಕೊ
Next post ಮನದೊಳಗಣ ಕಿಚ್ಚು

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

cheap jordans|wholesale air max|wholesale jordans|wholesale jewelry|wholesale jerseys