ಗುಡಗುಡಿಯನು ಸೇದಿನೋಡೋ

ಗುಡಗುಡಿಯನು ಸೇದಿನೋಡೋ ನಿನ್ನ
ವಡಲೊಳಗಿನ ರೋಗಾ ತೆಗೆದು ಈಡ್ಯಾಡೋ ||ಪ||

ಮನಸೆಂಬ ಚಂಚಿಯ ಬಿಚ್ಚಿ ದಿನ-
ದಿನಸು ಪಾಲಕವೆಂಬ ಭಂಗಿಯ ಕೊಚ್ಚಿ
ನೆನವೆಂಬ ಚಿಲುಮಿಗೆ ಹಚ್ಚಿ ಬುದ್ಧಿ
ಯೆನುವೆಂಥ ಬೆಂಕಿಯ ಮೇಲೆ ನೀ ಮುಚ್ಚಿ ||೧||

ಬುರುಡಿಯೆಂಬುವದು ಶರೀರಾ ಇದು
ಮರೆತು ಸುಕೃತ ಬಿಟ್ಟು ಕೊಳವಿಯಾಕಾರಾ
ವರನಾರಾಯಣನೆಂಬೋ ನೀರಾ ತುಂಬಿ
ಅರವೆಂಬ ಅರುವೀಯ ಹೊಚ್ಚೋ ಮೋಜುಗಾರಾ ||೨||

ಶುದ್ಧಜ್ಞಾನವು ಮೇಲೇರುವದು
ದಾರಿದ್ರ್ಯ ದೇಹವು ಸುಟ್ಟು ಹೋಯ್ತು ಹಾರವದು
ಬುದ್ಧವಂತರಿಗೆ ತಿಳಿಯುವದು ನಮ್ಮ
ಮುದ್ದು ಚಿದಾನಂದ ಪಾದಕ್ಹೊಂದುವದು ||೩||

****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶುಚಿಯಾಗಿರಬೇಕೊ
Next post ಮನದೊಳಗಣ ಕಿಚ್ಚು

ಸಣ್ಣ ಕತೆ

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…