ಕಳೆದು ಹೋದವರು

ಐ.ಟಿ., ಬಿ.ಟಿ. ಕಂಪನಿಗಳು
ನಗರದ ಜನಜಂಗುಳಿ
ಝಗಝಗಿಸುವ ದೀಪಾಲಂಕಾರ
ಕಣ್ಣು ಕುಕ್ಕುವ ಬೆಳಕು
ತಲೆಸುತ್ತುವ ಎತ್ತರದ ಬಂಗಲೆಗಳು.

ಗಿಜಿಗುಡುವ ಜನಜಂಗುಳಿಯ ಮಧ್ಯೆ
ಏಕಾಂಗಿಯಾಗಿದೆ ಒಂಟಿ ಬದುಕು
ಮನುಜ ಮನುಜರ ಮದ್ಯ
ತುಂಬಲಾಗದ ಆಳ ಕಂದಕ
ಎಷ್ಟೊಂದು ಗಹನ?

ಬೇಸರ ಕಳೆಯಲು
ಸಂಗಾತಿ ಪಡೆಯಲು
ನಾಯಿ ಸಾಕುತ್ತಾರೆ ಇಲ್ಲಿ
ಬೆಕ್ಕುಗಳ ಒಡನಾಟ
ಟಿ.ವಿ, ಮೊಬೈಲ್‌ಗಳ ಆತ್ಮಸಂಗಾತ
ನಗರದ ಅಸಂಖ್ಯ ಜನರ
ನಡುವೆ ಏಕಾಂಗಿ ಬದುಕು
ಅತ್ತರೂ ಒಬ್ಬರೆ ಅಳಬೇಕು
ಗೋಳು ಕೇಳುವವರಾರು
ಸಾಂತ್ವನಕ್ಕೆ ಸಮಯವಿಲ್ಲ ಇಲ್ಲಿ
ಎಲ್ಲರೂ ಬಿಝಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲೆಕ್ಟ್ರೋ ಸೋಲಾರ ಬೈಕ್
Next post ಅವರು

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…