ಸಹಕಾರ ಮಂತ್ರ

ಸಹಕಾರ ನಮ್ಮ ಉಸಿರು
ಸಹೋದರತೆ ನಮ್ಮ ಹಸಿರು
ಸಮಬಾಳ್ವೆ ಮಂತ್ರವೆಮಗಿರಲಿ

ದುಡಿದು… ದಣಿದ ಬಂಧುಗಳೇ
ಬದುಕಲಿ ಬಳಲುತ
ಬೆವರು ಸುರಿಸುವ ಬಾಂಧವರೆ

ಕಾಯಕ ಕೈಲಾಸವೆಂಬ
ಬಸವ ಘೋಷದಲಿರುವ
ಅಗಾಧ ಶಕ್ತಿಯ ಅರಿವು ತಿಳಿಯಿರಿ

ಸಹಕಾರ ತತ್ವದಡಿ
ಬಸವಯುಗದಲಿ
ಬಂದಿತು ಅನುಭವ ಮಂಟಪ

ಅಲ್ಲಿ ಎನಗಿಂತ ಕಿರಿಯರಿಲ್ಲ
ಎನಗಿಂತ ಹಿರಿಯರಿಲ್ಲ
ಸಹಕಾರದಡಿ ನಾವೆಲ್ಲ ಒಂದೆನ್ನುತ

ಸಹಕಾರದಿ ನಾವೆಲ್ಲ ಕೂಡೋಣ
ಸಹಕಾರದಿ ನಾವೆಲ್ಲ ಬಾಳೋಣ
ಸಹಕಾರದಿ ನಾವೆಲ್ಲ ಬೆಳೆಯೋಣ
ಸಹಕಾರ ಮಂತ್ರವ ಪಠಿಸೋಣ
ಗೆಲುವಿನ ಪಥದೀ ಸಾಗೋಣ

***

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಸೂಯೆ
Next post ಸೋರುತಿಹುದು ಮನೆಯಮಾಳಿಗಿ

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…