ಸಹಕಾರ ಮಂತ್ರ

ಸಹಕಾರ ನಮ್ಮ ಉಸಿರು
ಸಹೋದರತೆ ನಮ್ಮ ಹಸಿರು
ಸಮಬಾಳ್ವೆ ಮಂತ್ರವೆಮಗಿರಲಿ

ದುಡಿದು… ದಣಿದ ಬಂಧುಗಳೇ
ಬದುಕಲಿ ಬಳಲುತ
ಬೆವರು ಸುರಿಸುವ ಬಾಂಧವರೆ

ಕಾಯಕ ಕೈಲಾಸವೆಂಬ
ಬಸವ ಘೋಷದಲಿರುವ
ಅಗಾಧ ಶಕ್ತಿಯ ಅರಿವು ತಿಳಿಯಿರಿ

ಸಹಕಾರ ತತ್ವದಡಿ
ಬಸವಯುಗದಲಿ
ಬಂದಿತು ಅನುಭವ ಮಂಟಪ

ಅಲ್ಲಿ ಎನಗಿಂತ ಕಿರಿಯರಿಲ್ಲ
ಎನಗಿಂತ ಹಿರಿಯರಿಲ್ಲ
ಸಹಕಾರದಡಿ ನಾವೆಲ್ಲ ಒಂದೆನ್ನುತ

ಸಹಕಾರದಿ ನಾವೆಲ್ಲ ಕೂಡೋಣ
ಸಹಕಾರದಿ ನಾವೆಲ್ಲ ಬಾಳೋಣ
ಸಹಕಾರದಿ ನಾವೆಲ್ಲ ಬೆಳೆಯೋಣ
ಸಹಕಾರ ಮಂತ್ರವ ಪಠಿಸೋಣ
ಗೆಲುವಿನ ಪಥದೀ ಸಾಗೋಣ

***

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಸೂಯೆ
Next post ಸೋರುತಿಹುದು ಮನೆಯಮಾಳಿಗಿ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…