ಓಡುತೆ ಬಾ! ಬಾ!


ಮೂಡಣ ದಿಶೆಯಲಿ
ಪಡುವಣ ದಿಶೆಯಲಿ
ಮೂಡುವ ಅಡಗುವ
ರವಿ ಹೊಂಬಣ್ಣವ
ಭರದಲಿ, ಹರುಷದಿ
ಹೊಗಳುತಲಿರುತಿರೆ ಕವಿಜನರು;
ಚೆನ್ನೆಯೆ ನಿನ್ನಯ
ಕನ್ನಡಿ ಹೊಳಪಿನ
ಕನ್ನೆಯ ಮೇಲಣ
ಕೆಂಬಣ್ಣವ ನಾ
ಹೊಗಳುತ ನಿಂತಿಹೆ
ಓಡುತೆ ಬಾ! ಬಾ! ಹಾರುತೆ ಬಾ! ಬಾ!


ಸರದಲಿಶೋಭಿಪ
ಅರಳಿದಕಮಲಕೆ
ಗುಂಗೀಹುಳಗಳು
ಮಕರಂದವ ಸಲೆ
ಸೇವಿಸಲೆಂದುಂ ಧಾವಿಪ
ನೋಟವ ಬಣ್ಣಿಸುತಿರಲಾಕವಿಜನರು;

ಸರಸಿಜವದನೆಯೆ
ನನ್ನಯಪ್ರೇಮದ
ಗುಂಗೀಹುಳವದು
ನಿನ್ನಯ ಅಧರಾಮೃತವಂ
ಸೇವಿಸೆ ಧಾವಿಸಿ
ದಣಿದಿದೆ ಬಾ! ಬಾ! ತಣಿಸಲು ಬಾ! ಬಾ!


ಬೆಳಗಿನಜಾವದಿ
ತೋಟದನೋಟ!
ಪರಿಮಳಬೀರುವ
ಪೂಗಳನೋಟ!
ಕುಣಿಕುಣಿದಾಡುವ
ನವಿಲಿನ ನೋಟವದೆಲ್ಲವು ಕವಿಜನಕಿರಲಿ;
ರಮಣಿಯೆ ನನಗಿದೆ
ನಿನ್ನಯ ನೋಟ!
ಆದದೋ ಅಲ್ಲಿದೆ
ಪ್ರೇಮದ ತೋಟ!
ಸುಂದರಿ ನಲಿಯಲು
ಓಡುತೆ ಬಾ! ಬಾ! ಹಾರುತೆ ಬಾ! ಬಾ!


ರಮಣಿಯೆ ನೋಡದೂ
ಹಿರಿಯರು ನೀಡಿದ
ಗಾಂಧಿಯು ಬಯಸುವ
ಪಾವನ ರಾಟಿಯ
ಹಿಂದಕೆ ಒಗೆವುದೆ?
ಬಾ! ಬಾ! ತಿರುಹಲು ಬೇಗನೆ ಬಾ! ಬಾ!
ನೂಲನುತೆಗೆದಿಡು!
ಮಗ್ಗವಹೂಡುವೆ!
ವಸ್ತ್ರವಮಾಡುವೆ!
ಬಡವಗೆನೀಡಲು
ಪುಣ್ಯವಪಡೆಯಲು
ಓಡುತೆ ಬಾ! ಬಾ! ಹಾರುತೆ ಬಾ! ಬಾ!


ಕಮಲಿನಿಬೇಕು;
ನನಯಬಲವದು
ನಿನಗಿರಬೇಕು;
ನಿನ್ನಯಬಲವದು
ನನಗಿರಬೇಕು;
ಈರ್‍ವರ ಬಲವಧುದೇಶಕೆಬೇಕು;
ಕನ್ನಡಮಾತೆಯ
ಭಾರತಮಾತೆಯ
ಸೇವೆಯಗೈಯುತೆ
ಪ್ರೇಮದಲೀರ್‍ವರು
ಸಗ್ಗಕೆಪೋಗುವಾ!
ಓಡುತೆ ಬಾ! ಹಾ! ಹಾರುತೆ ಬಾ! ಬಾ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿ-ಕಾವ್ಯ
Next post ವಚನ ವಿಚಾರ – ನೀರಿನಂಥ ಮನಸ್ಸು

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys