ಕವಿ-ಕಾವ್ಯ

ಅಪರಿಮಿತ ಕತ್ತಲೊಳಗೆ ಬೆಳಕ
ಕಿರಣಗಳ ಹುಡುಕಿದೆ. ಒಂದು ಕವಿತೆ
ಶಕ್ತಿಯಾಗಿ ಎದೆಗೆ ದಕ್ಕಿತು.
ಅಲ್ಲಿ ವಿಶೇಷ ಪರಿಪೂರ್‍ಣ ಪ್ರೀತಿ ಅರಳಿತು.
ಮೆಲ್ಲಗೆ ಹೂ ಶುಭ್ರ ಬಿಳಿಯಾಗಿ, ಕೆಂದಾವರೆ
ಗುಲಾಬಿ ಬಣ್ಣಗಳಲಿ ಅರಳಿ ಘಮ್ಮೆಂದು ಪರಿಸೃಷ್ಠಿ.

ಎದೆಯ ಮೇಲೆ ಬೀಳುವ ಎಲ್ಲಾ
ತರಂಗದ ಬೆಳಕು ಒಳಗೊಳಗೆ ಇಳಿದು
ಬೆಚ್ಚನೆಯ ಕಾವಿನಲಿ ಬಸಿರಾದ ಶಬ್ದಗಳು
ಒಡಲು ಒಜ್ಜೆಯಾಗಿ ಅಗಾಧತೆಯ ಅರಿವು,
ಮೌನದೊಳಗೆ ಸುರುಟಿಕೊಂಡ ದ್ರವ್ಯರಾಶಿ,
ಮಹಾಸ್ಪೋಟವಾದ ಸಾವಿನಾಚೆಯ ಬೆಳಕು ಕಾವ್ಯ.

ಪಠ್ಯಕ್ರಮದ ಪಾಠಶಾಲೆಯ ಪಾಕ ಕುದಿದು
ಶಬ್ದ ರೂಪಗಳ ಅನುಭವ ಕಂಡ ಬಾಳು,
ರೂಪಾಂತರದ ಜಗದ ನಿಯಮ. ತಾಳ್ಮೆಯ
ಹಾಸಿದ ನೆರಳಲಿ ಹಕ್ಕಿಹಾಡು, ಒಳಗೊಳಗೆ ಪ್ರಾಣ
ವಾಯು ಇಳಿದು, ಋತುಗಳ ಸಂವಾದ ಬುದ್ಧನ
ಆತ್ಮದ ಬೆಳದಿಂಗಳು ಹರಡಿ, ಅರಳಿದ
ಅಗೋಚರ ಮನ.

ಇಲ್ಲಿ ಕುಳಿತವರ ಸಾಲು ಕಣ್ಣುಗಳು ಮುಗಿಲ
ಮೋಡಗಳ ಅರಸಿ ಹಾರುವ ಬೆಳ್ಳಕ್ಕಿ ಸಾಲು ಹಿಂಡು,
ಆಸೆಗಳ ಜೀವರಥ ಎಳೆದ ಕನಸುಗಳ ಕನ್ನಡಿ ಪ್ರತಿಫಲಿಸಿ,
ದಾರಿತುಂಬ ಜೀವನದಿ ಹರಿದ ಬಯಲು ಹಸಿರು.
ನಕ್ಷತ್ರಗಳಿಗೆ ತುಪ್ಪ ಹಾಕಿ ಶಬ್ದಗಳ ದೀಪ ಮಾಲೆ ಹಚ್ಚಿ,
ಕತ್ತಲೆಯ ತೆರೆಯ ಬಿಡಿಸಿ ಎಲ್ಲೆಲ್ಲೂ ಬೆಳಕಿನ ಹಾಡುಗಳ
ಹಾಡಿದರು ಜಗದ ಕವಿಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನ ನೀನು ನಡೆಯೇ
Next post ಓಡುತೆ ಬಾ! ಬಾ!

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…