Home / ಕವನ / ಕವಿತೆ / ಕವಿ-ಕಾವ್ಯ

ಕವಿ-ಕಾವ್ಯ

ಅಪರಿಮಿತ ಕತ್ತಲೊಳಗೆ ಬೆಳಕ
ಕಿರಣಗಳ ಹುಡುಕಿದೆ. ಒಂದು ಕವಿತೆ
ಶಕ್ತಿಯಾಗಿ ಎದೆಗೆ ದಕ್ಕಿತು.
ಅಲ್ಲಿ ವಿಶೇಷ ಪರಿಪೂರ್‍ಣ ಪ್ರೀತಿ ಅರಳಿತು.
ಮೆಲ್ಲಗೆ ಹೂ ಶುಭ್ರ ಬಿಳಿಯಾಗಿ, ಕೆಂದಾವರೆ
ಗುಲಾಬಿ ಬಣ್ಣಗಳಲಿ ಅರಳಿ ಘಮ್ಮೆಂದು ಪರಿಸೃಷ್ಠಿ.

ಎದೆಯ ಮೇಲೆ ಬೀಳುವ ಎಲ್ಲಾ
ತರಂಗದ ಬೆಳಕು ಒಳಗೊಳಗೆ ಇಳಿದು
ಬೆಚ್ಚನೆಯ ಕಾವಿನಲಿ ಬಸಿರಾದ ಶಬ್ದಗಳು
ಒಡಲು ಒಜ್ಜೆಯಾಗಿ ಅಗಾಧತೆಯ ಅರಿವು,
ಮೌನದೊಳಗೆ ಸುರುಟಿಕೊಂಡ ದ್ರವ್ಯರಾಶಿ,
ಮಹಾಸ್ಪೋಟವಾದ ಸಾವಿನಾಚೆಯ ಬೆಳಕು ಕಾವ್ಯ.

ಪಠ್ಯಕ್ರಮದ ಪಾಠಶಾಲೆಯ ಪಾಕ ಕುದಿದು
ಶಬ್ದ ರೂಪಗಳ ಅನುಭವ ಕಂಡ ಬಾಳು,
ರೂಪಾಂತರದ ಜಗದ ನಿಯಮ. ತಾಳ್ಮೆಯ
ಹಾಸಿದ ನೆರಳಲಿ ಹಕ್ಕಿಹಾಡು, ಒಳಗೊಳಗೆ ಪ್ರಾಣ
ವಾಯು ಇಳಿದು, ಋತುಗಳ ಸಂವಾದ ಬುದ್ಧನ
ಆತ್ಮದ ಬೆಳದಿಂಗಳು ಹರಡಿ, ಅರಳಿದ
ಅಗೋಚರ ಮನ.

ಇಲ್ಲಿ ಕುಳಿತವರ ಸಾಲು ಕಣ್ಣುಗಳು ಮುಗಿಲ
ಮೋಡಗಳ ಅರಸಿ ಹಾರುವ ಬೆಳ್ಳಕ್ಕಿ ಸಾಲು ಹಿಂಡು,
ಆಸೆಗಳ ಜೀವರಥ ಎಳೆದ ಕನಸುಗಳ ಕನ್ನಡಿ ಪ್ರತಿಫಲಿಸಿ,
ದಾರಿತುಂಬ ಜೀವನದಿ ಹರಿದ ಬಯಲು ಹಸಿರು.
ನಕ್ಷತ್ರಗಳಿಗೆ ತುಪ್ಪ ಹಾಕಿ ಶಬ್ದಗಳ ದೀಪ ಮಾಲೆ ಹಚ್ಚಿ,
ಕತ್ತಲೆಯ ತೆರೆಯ ಬಿಡಿಸಿ ಎಲ್ಲೆಲ್ಲೂ ಬೆಳಕಿನ ಹಾಡುಗಳ
ಹಾಡಿದರು ಜಗದ ಕವಿಗಳು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...