Home / ಕವನ / ಕವಿತೆ / ಕವಿ-ಕಾವ್ಯ

ಕವಿ-ಕಾವ್ಯ

ಅಪರಿಮಿತ ಕತ್ತಲೊಳಗೆ ಬೆಳಕ
ಕಿರಣಗಳ ಹುಡುಕಿದೆ. ಒಂದು ಕವಿತೆ
ಶಕ್ತಿಯಾಗಿ ಎದೆಗೆ ದಕ್ಕಿತು.
ಅಲ್ಲಿ ವಿಶೇಷ ಪರಿಪೂರ್‍ಣ ಪ್ರೀತಿ ಅರಳಿತು.
ಮೆಲ್ಲಗೆ ಹೂ ಶುಭ್ರ ಬಿಳಿಯಾಗಿ, ಕೆಂದಾವರೆ
ಗುಲಾಬಿ ಬಣ್ಣಗಳಲಿ ಅರಳಿ ಘಮ್ಮೆಂದು ಪರಿಸೃಷ್ಠಿ.

ಎದೆಯ ಮೇಲೆ ಬೀಳುವ ಎಲ್ಲಾ
ತರಂಗದ ಬೆಳಕು ಒಳಗೊಳಗೆ ಇಳಿದು
ಬೆಚ್ಚನೆಯ ಕಾವಿನಲಿ ಬಸಿರಾದ ಶಬ್ದಗಳು
ಒಡಲು ಒಜ್ಜೆಯಾಗಿ ಅಗಾಧತೆಯ ಅರಿವು,
ಮೌನದೊಳಗೆ ಸುರುಟಿಕೊಂಡ ದ್ರವ್ಯರಾಶಿ,
ಮಹಾಸ್ಪೋಟವಾದ ಸಾವಿನಾಚೆಯ ಬೆಳಕು ಕಾವ್ಯ.

ಪಠ್ಯಕ್ರಮದ ಪಾಠಶಾಲೆಯ ಪಾಕ ಕುದಿದು
ಶಬ್ದ ರೂಪಗಳ ಅನುಭವ ಕಂಡ ಬಾಳು,
ರೂಪಾಂತರದ ಜಗದ ನಿಯಮ. ತಾಳ್ಮೆಯ
ಹಾಸಿದ ನೆರಳಲಿ ಹಕ್ಕಿಹಾಡು, ಒಳಗೊಳಗೆ ಪ್ರಾಣ
ವಾಯು ಇಳಿದು, ಋತುಗಳ ಸಂವಾದ ಬುದ್ಧನ
ಆತ್ಮದ ಬೆಳದಿಂಗಳು ಹರಡಿ, ಅರಳಿದ
ಅಗೋಚರ ಮನ.

ಇಲ್ಲಿ ಕುಳಿತವರ ಸಾಲು ಕಣ್ಣುಗಳು ಮುಗಿಲ
ಮೋಡಗಳ ಅರಸಿ ಹಾರುವ ಬೆಳ್ಳಕ್ಕಿ ಸಾಲು ಹಿಂಡು,
ಆಸೆಗಳ ಜೀವರಥ ಎಳೆದ ಕನಸುಗಳ ಕನ್ನಡಿ ಪ್ರತಿಫಲಿಸಿ,
ದಾರಿತುಂಬ ಜೀವನದಿ ಹರಿದ ಬಯಲು ಹಸಿರು.
ನಕ್ಷತ್ರಗಳಿಗೆ ತುಪ್ಪ ಹಾಕಿ ಶಬ್ದಗಳ ದೀಪ ಮಾಲೆ ಹಚ್ಚಿ,
ಕತ್ತಲೆಯ ತೆರೆಯ ಬಿಡಿಸಿ ಎಲ್ಲೆಲ್ಲೂ ಬೆಳಕಿನ ಹಾಡುಗಳ
ಹಾಡಿದರು ಜಗದ ಕವಿಗಳು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...