Home / ಕಥೆ / ಸಣ್ಣ ಕಥೆ / ರಾಜಭಕ್ತ ಮೈಸೂರಿನ ಸೆಟ್ಟಿ

ರಾಜಭಕ್ತ ಮೈಸೂರಿನ ಸೆಟ್ಟಿ

ಇಮ್ಮಡಿ ತಿಮ್ಮರಾಜಒಡೆಯರು ದೊರೆತನಮಾಡುತ್ತಿದ್ದ ಕಾಲದಲ್ಲಿ ಸಿಂಧುವಳ್ಳಿ, ಹುಣಸನಾಳುಗಳ ಪಾಳಯಗಾರರು ಅವರ ಅಶ್ರಿತರಾಗಿದ್ದರು.

ಒಂದುಸಲ ನಂಜನಗೂಡಿನ ರಥೋತ್ಸವ ಕಾಲದಲ್ಲಿ ದೊರೆಗಳು ಅಲ್ಲಿಗೆ ಬಂದಿದ್ದರು. ಅಲ್ಲಿಗೆ ಕೆಲವರು ಪಾಳಯಗಾರರು ದೇವರ ಸೇವೆಗೆಂದು ಬಂದಿದ್ದರು. ಪಾಳಯಗಾರರು ಬಹಳ ಅಟ್ಟಹಾಸದಿಂದ ಮೆರೆಯುತ್ತಲಿದ್ದು `ಬಿರುದೆಂತೆಂಬರಗಂಡ’ ನೆಂದು ಹೊಗಳಿಸಿ ಕೊಳ್ಳುತ್ತ ತಮ್ಮ ಸಮಾನರಿಲ್ಲವೆಂಬ ಜಂಭವನ್ನು ತೋರುತ್ತಿದ್ದರು.

ಇದನ್ನು ಕಂಡು ಮೈಸೂರಿನವರು ಸಹಿಸಲಿಲ್ಲ. ಅವರಲ್ಲಿ ಮುಖ್ಯನೂ ರಾಜಭಕ್ತನೂ ಆಗಿದ್ದ ಮೈಸೂರ ಸೆಟ್ಟಿಯು ಸಾಹಸದಿಂದ ಅವರೆದುರಿಗೆ ಹೋಗಿ “ಬಿರುದೆಂತೆಂಬರಗಂಡನೆಂಬ ಬಿರುದು ನಮ್ಮ ಮೈಸೂರಿನ ಒಡೆಯರಿಗೇ ಅಲ್ಲದೆ ನಿಮ್ಮಂತಹವರಿಗೆ ಸಲ್ಲುವುದಿಲ್ಲ; ನೀವು ಆ ಬಿರುದನ್ನು ಬಿಟ್ಟುಬಿಡಬೇಕು” ಎಂದು ಗಂಭೀರವಾಗಿ ಹೇಳಿದನು. ಪಾಳಯಗಾರರಿಗೆ ಕೋಪ ಬಂತು; ಈ ಅಧಿಕಪ್ರಸಂಗಿ ಸೆಟ್ಟಿಯನ್ನು ಶಿಕ್ಷಿಸಬೇಕೆಂದು ಅವನನ್ನು ಸೆರೆಹಿಡಿಸಿ ಒಯ್ದರು.

ಈ ಸಮಾಚಾರವು ಒಡೆಯರಿಗೆ ತಲಪಿತು; “ನಮ್ಮ ಧೀರ ಪ್ರಜೆಯಾದ ಸೆಟ್ಟಿಯನ್ನು ಹಿಡಿದುಕೊಂಡು ಹೋಗಲು ಆ ಪಾಳಯಗಾರರಿಗೆಷ್ಟು ಗರ್ವ! ನಮ್ಮ ಆಪ್ತನಾದ ಸೆಟ್ಟಿಯನ್ನು ಹಾಗೆ ಬಿಟ್ಟುಕೊಟ್ಟೇವೆಯೆ ನಾವು!” ಎಂದು ತಾವೇ ಸೈನ್ಯದೊಡನೆ ಹೊರಟು ಪಾಳಯಗಾರರ ಶಿಬಿರಕ್ಕೆ ಹೋಗಿ ಕೂಗಿಸಿ ಹೇಳಿಸಿದರು : “ಪಾಳಯಗಾರರಲ್ಲಿ ಯಾರಾದರೂ ಧೀರರೂ ಸಾಹಸಿಗಳೂ ಇದ್ದರೆ ಯುದ್ಧಕ್ಕೆ ಬರಬಹುದು; ಇಲ್ಲವಾದರೆ ಎಲ್ಲರೂ ಬಂದು ಸೆಟ್ಟಿಯನ್ನೊಪ್ಪಿಸಿ ತಪ್ಪಾಯಿತೆಂದು ದೊರೆಗಳ ಮನ್ನಣೆಯ ಬೇಡಬಹುದು” ಎಂದು. ಮದಿಸಿದ್ದ ಪಾಳಯಗಾರರು ಯುದ್ಧಕ್ಕೆ ಬಂದರು. ಒಡೆಯರು ಅವರೆಲ್ಲರನ್ನು ಸೋಲಿಸಿ ಸೆರೆಯಾದ ಸೆಟ್ಟಿಯನ್ನು ಕರೆತರಿಸಿ ಮರ್ಯಾದೆಯಿಂದ ಕಂಡು ಮೈಸೂರಿಗೆ ಜಯಶೀಲರಾಗಿ ಹಿಂತಿರುಗಿದರು. ಈ ಸಂಗತಿಯಿಂದ ರಾಜರಿಗೆ ‘ಮೊನೆಗಾರ’ ನೆಂಬ ಬಿರುದು ವಾಡಿಕೆಯಾಯ್ತು. ಅಂದಿನಿಂದ ಅರಮನೆಯಲ್ಲಿ ಸೆಟ್ಟಿಗೆ ಗೌರವವೂ ಹೆಚ್ಚಿತು.
*****
[ವಂಶರತ್ನಾಕರ ಪುಟ ೧೯; ವಂಶಾವಳಿ ಸಂಪುಟ ೧ ಪುಟ ೧೫- ೧೬]

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...