Home / ಕಥೆ / ಸಣ್ಣ ಕಥೆ / ರಾಜಭಕ್ತ ಮೈಸೂರಿನ ಸೆಟ್ಟಿ

ರಾಜಭಕ್ತ ಮೈಸೂರಿನ ಸೆಟ್ಟಿ

ಇಮ್ಮಡಿ ತಿಮ್ಮರಾಜಒಡೆಯರು ದೊರೆತನಮಾಡುತ್ತಿದ್ದ ಕಾಲದಲ್ಲಿ ಸಿಂಧುವಳ್ಳಿ, ಹುಣಸನಾಳುಗಳ ಪಾಳಯಗಾರರು ಅವರ ಅಶ್ರಿತರಾಗಿದ್ದರು.

ಒಂದುಸಲ ನಂಜನಗೂಡಿನ ರಥೋತ್ಸವ ಕಾಲದಲ್ಲಿ ದೊರೆಗಳು ಅಲ್ಲಿಗೆ ಬಂದಿದ್ದರು. ಅಲ್ಲಿಗೆ ಕೆಲವರು ಪಾಳಯಗಾರರು ದೇವರ ಸೇವೆಗೆಂದು ಬಂದಿದ್ದರು. ಪಾಳಯಗಾರರು ಬಹಳ ಅಟ್ಟಹಾಸದಿಂದ ಮೆರೆಯುತ್ತಲಿದ್ದು `ಬಿರುದೆಂತೆಂಬರಗಂಡ’ ನೆಂದು ಹೊಗಳಿಸಿ ಕೊಳ್ಳುತ್ತ ತಮ್ಮ ಸಮಾನರಿಲ್ಲವೆಂಬ ಜಂಭವನ್ನು ತೋರುತ್ತಿದ್ದರು.

ಇದನ್ನು ಕಂಡು ಮೈಸೂರಿನವರು ಸಹಿಸಲಿಲ್ಲ. ಅವರಲ್ಲಿ ಮುಖ್ಯನೂ ರಾಜಭಕ್ತನೂ ಆಗಿದ್ದ ಮೈಸೂರ ಸೆಟ್ಟಿಯು ಸಾಹಸದಿಂದ ಅವರೆದುರಿಗೆ ಹೋಗಿ “ಬಿರುದೆಂತೆಂಬರಗಂಡನೆಂಬ ಬಿರುದು ನಮ್ಮ ಮೈಸೂರಿನ ಒಡೆಯರಿಗೇ ಅಲ್ಲದೆ ನಿಮ್ಮಂತಹವರಿಗೆ ಸಲ್ಲುವುದಿಲ್ಲ; ನೀವು ಆ ಬಿರುದನ್ನು ಬಿಟ್ಟುಬಿಡಬೇಕು” ಎಂದು ಗಂಭೀರವಾಗಿ ಹೇಳಿದನು. ಪಾಳಯಗಾರರಿಗೆ ಕೋಪ ಬಂತು; ಈ ಅಧಿಕಪ್ರಸಂಗಿ ಸೆಟ್ಟಿಯನ್ನು ಶಿಕ್ಷಿಸಬೇಕೆಂದು ಅವನನ್ನು ಸೆರೆಹಿಡಿಸಿ ಒಯ್ದರು.

ಈ ಸಮಾಚಾರವು ಒಡೆಯರಿಗೆ ತಲಪಿತು; “ನಮ್ಮ ಧೀರ ಪ್ರಜೆಯಾದ ಸೆಟ್ಟಿಯನ್ನು ಹಿಡಿದುಕೊಂಡು ಹೋಗಲು ಆ ಪಾಳಯಗಾರರಿಗೆಷ್ಟು ಗರ್ವ! ನಮ್ಮ ಆಪ್ತನಾದ ಸೆಟ್ಟಿಯನ್ನು ಹಾಗೆ ಬಿಟ್ಟುಕೊಟ್ಟೇವೆಯೆ ನಾವು!” ಎಂದು ತಾವೇ ಸೈನ್ಯದೊಡನೆ ಹೊರಟು ಪಾಳಯಗಾರರ ಶಿಬಿರಕ್ಕೆ ಹೋಗಿ ಕೂಗಿಸಿ ಹೇಳಿಸಿದರು : “ಪಾಳಯಗಾರರಲ್ಲಿ ಯಾರಾದರೂ ಧೀರರೂ ಸಾಹಸಿಗಳೂ ಇದ್ದರೆ ಯುದ್ಧಕ್ಕೆ ಬರಬಹುದು; ಇಲ್ಲವಾದರೆ ಎಲ್ಲರೂ ಬಂದು ಸೆಟ್ಟಿಯನ್ನೊಪ್ಪಿಸಿ ತಪ್ಪಾಯಿತೆಂದು ದೊರೆಗಳ ಮನ್ನಣೆಯ ಬೇಡಬಹುದು” ಎಂದು. ಮದಿಸಿದ್ದ ಪಾಳಯಗಾರರು ಯುದ್ಧಕ್ಕೆ ಬಂದರು. ಒಡೆಯರು ಅವರೆಲ್ಲರನ್ನು ಸೋಲಿಸಿ ಸೆರೆಯಾದ ಸೆಟ್ಟಿಯನ್ನು ಕರೆತರಿಸಿ ಮರ್ಯಾದೆಯಿಂದ ಕಂಡು ಮೈಸೂರಿಗೆ ಜಯಶೀಲರಾಗಿ ಹಿಂತಿರುಗಿದರು. ಈ ಸಂಗತಿಯಿಂದ ರಾಜರಿಗೆ ‘ಮೊನೆಗಾರ’ ನೆಂಬ ಬಿರುದು ವಾಡಿಕೆಯಾಯ್ತು. ಅಂದಿನಿಂದ ಅರಮನೆಯಲ್ಲಿ ಸೆಟ್ಟಿಗೆ ಗೌರವವೂ ಹೆಚ್ಚಿತು.
*****
[ವಂಶರತ್ನಾಕರ ಪುಟ ೧೯; ವಂಶಾವಳಿ ಸಂಪುಟ ೧ ಪುಟ ೧೫- ೧೬]

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...