ಮೌಲ್ಯಮಾಪನ

“ಆಕಾಶ” ನೀಲಿ ಇದ್ದಾಗೆಲ್ಲ
ನಮ ರಕ್ತ ಕೆಂಪು, ಕಂಪಾಗಿ
ಕವಲೊಡೆಯುತ್ತದೆ.
ಅದಕ್ಕೆ ಮೋಡ ತುಂಬುತ್ತ
ಗಟ್ಟಿಯಾಗುತ್ತಿದ್ದರೆ
ನಮ್ಮ ರಕ್ತ ಕಲಬೆರಕೆಯಾಗುತ್ತದೆ

“ಬ್ರಹ್ಮಾಂಡ” ತೇಜ ಪುಂಜವಾಗಿದ್ದರೆ
ನಮ್ಮ ಮಿದುಳು, ನರತಂತುಗಳು
ಚಿಗಿಯುತ್ತವೆ
ಅವುಗಳಿಗೆ ಗ್ರಹಣ ಬಡಿದರೆ
ನಮಗೆ ಕೋಮ ಹಿಡಿಯುತ್ತದೆ

“ನೀರು” ಪವಿತ್ರ
“ಗಾಳಿ” ಶುದ್ಧವಿದ್ದರೆ
ಗಂಗೆ ಯಮುನೆಯರಾಗಿ
ಹೃದಯ ವೈಶಾಲ್ಯತೆ ಹೊಂದಿ
ಮಾನವೀಯ ಮೌಲ್ಯಗಳೊಂದಿಗೆ
ಮೆರೆಯುತ್ತೇವೆ

ಅವೇ ಮದ್ಯವಾಗಿ
ವಿಷ ವರ್ತುಲಗಳಾದರೆ
ನಮಗೆ ಮಸಣ ಕರೆಯುತ್ತದೆ
“ಶಾಂತಿಯೇ ಸ್ವರ್ಗ
ಅಶಾಂತಿಯೇ ನರಕ” ದ
ಮೌಲ್ಯ ಮಾಪನದೊಳಗೆ
ಹಿಗ್ಗಿ ಕುಗ್ಗಿ ಸುಸ್ತಾಗಿ
ಎಲ್ಲಿ
ಗೊದ ಮೊಟ್ಟೆಗಳಾಗಿಯೇ
ಉಳಿಯುತ್ತೇವೆಯೋ? ಏನೋ?
ಎಂಬ ಹೆದರಿಕೆ!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎರಡೆಳೆ ದಾರ
Next post ಲಿಂಗಮ್ಮನ ವಚನಗಳು – ೩೮

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

cheap jordans|wholesale air max|wholesale jordans|wholesale jewelry|wholesale jerseys