ಮೌಲ್ಯಮಾಪನ

“ಆಕಾಶ” ನೀಲಿ ಇದ್ದಾಗೆಲ್ಲ
ನಮ ರಕ್ತ ಕೆಂಪು, ಕಂಪಾಗಿ
ಕವಲೊಡೆಯುತ್ತದೆ.
ಅದಕ್ಕೆ ಮೋಡ ತುಂಬುತ್ತ
ಗಟ್ಟಿಯಾಗುತ್ತಿದ್ದರೆ
ನಮ್ಮ ರಕ್ತ ಕಲಬೆರಕೆಯಾಗುತ್ತದೆ

“ಬ್ರಹ್ಮಾಂಡ” ತೇಜ ಪುಂಜವಾಗಿದ್ದರೆ
ನಮ್ಮ ಮಿದುಳು, ನರತಂತುಗಳು
ಚಿಗಿಯುತ್ತವೆ
ಅವುಗಳಿಗೆ ಗ್ರಹಣ ಬಡಿದರೆ
ನಮಗೆ ಕೋಮ ಹಿಡಿಯುತ್ತದೆ

“ನೀರು” ಪವಿತ್ರ
“ಗಾಳಿ” ಶುದ್ಧವಿದ್ದರೆ
ಗಂಗೆ ಯಮುನೆಯರಾಗಿ
ಹೃದಯ ವೈಶಾಲ್ಯತೆ ಹೊಂದಿ
ಮಾನವೀಯ ಮೌಲ್ಯಗಳೊಂದಿಗೆ
ಮೆರೆಯುತ್ತೇವೆ

ಅವೇ ಮದ್ಯವಾಗಿ
ವಿಷ ವರ್ತುಲಗಳಾದರೆ
ನಮಗೆ ಮಸಣ ಕರೆಯುತ್ತದೆ
“ಶಾಂತಿಯೇ ಸ್ವರ್ಗ
ಅಶಾಂತಿಯೇ ನರಕ” ದ
ಮೌಲ್ಯ ಮಾಪನದೊಳಗೆ
ಹಿಗ್ಗಿ ಕುಗ್ಗಿ ಸುಸ್ತಾಗಿ
ಎಲ್ಲಿ
ಗೊದ ಮೊಟ್ಟೆಗಳಾಗಿಯೇ
ಉಳಿಯುತ್ತೇವೆಯೋ? ಏನೋ?
ಎಂಬ ಹೆದರಿಕೆ!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎರಡೆಳೆ ದಾರ
Next post ಲಿಂಗಮ್ಮನ ವಚನಗಳು – ೩೮

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…