ಮತ್ತೆ ಕಾವ್ಯ ಕೋಗಿಲೆ

ಕಾವ್ಯ ಕೋಗಿಲೆ ಹಾಡಿದೆಯೊ
ಸಾಹಿತ್ಯದ ಹೂ ಬನದಲ್ಲಿ
ಗಿರಿ ನವಿಲು ಗರಿ ಬಿಚ್ಚಿದೆಯೊ
ಸಪ್ತಸ್ವರಗಳ ಸೋನೆಯಲಿ

ಪ್ರಕೃತಿಯೆಲ್ಲಾ ಸಿಂಗಾರ
ಕವಿ ಪಂಪ ಕೃತಿ ಹಾಡುವಲಿ
ಸಮಾಜವಾಯಿತು ಬಂಗಾರ
ಬಸವಣ್ಣ ಧ್ವನಿ ಎತ್ತುವಲಿ
ಸುರಿಯಿತೊ ಧೋಧೋ ಮುಂಗಾರು
ಹರಿಹರ ರಗಳೆ ಹಾಡುವಲಿ
ಕನ್ನಡವಾಯಿತು ಹೊನ್ನಾರು
ಬಂಗಾರದ ಬೆಳೆ ಮೂಡುವಲಿ

ಕುಮಾರವ್ಯಾಸ ಧ್ವನಿ ತೆಗೆದ
ಮರಳಿತು ದ್ವಾಪರ ಕಲಿಯುಗಕೆ
ಲಕುಮೀಶ ಜೈಮಿನಿ ನುಡಿದ
ಕವಿಯಾದವು ಕಿವಿ ಗಮಕಕ್ಕೆ
ಬೀದಿ ಬೀದಿಯಲಿ ಸರ್‍ವಜ್ಞ
ಬದುಕು ಆಯಿತು ಬೆತ್ತಲೆ
ದಾಸರು ಸಂತರು ಸ್ವರವಾದಾಗ
ಎಲ್ಲಿ ಹೋಯಿತೊ ಕತ್ತಲೆ

ಹಾಡಿದೆ ಕೋಗಿಲೆ ಹೊಸದಾಗಿ
ಬೇಂದ್ರೆ ಕುವೆಂಪು ರಾಗದಲಿ
ಕುಣಿದಿದೆ ನವಿಲು ನಲಿವಾಗಿ
ನಿತ್ಯೋತ್ಸವದ ಗಾಳಿಯಲಿ
ಹಾಡಿದೆ ಜನಪದ ಕೆಂಪಾಗಿ
ತಗ್ಗು ದಿಣ್ಣೆ ಸಮ ಮಾಡುತಲಿ
ಇಟ್ಟುಕೊಂಡು ಹೊಸ ಎಚ್ಚರ
ಸಂಭ್ರಮಿಸಿದೆ ಕುಣಿದಾಡುತಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಂಪು
Next post ಸಬ್ಬಂಬು ರಾತೂರಿ

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys