ಮತ್ತೆ ಕಾವ್ಯ ಕೋಗಿಲೆ

ಕಾವ್ಯ ಕೋಗಿಲೆ ಹಾಡಿದೆಯೊ
ಸಾಹಿತ್ಯದ ಹೂ ಬನದಲ್ಲಿ
ಗಿರಿ ನವಿಲು ಗರಿ ಬಿಚ್ಚಿದೆಯೊ
ಸಪ್ತಸ್ವರಗಳ ಸೋನೆಯಲಿ

ಪ್ರಕೃತಿಯೆಲ್ಲಾ ಸಿಂಗಾರ
ಕವಿ ಪಂಪ ಕೃತಿ ಹಾಡುವಲಿ
ಸಮಾಜವಾಯಿತು ಬಂಗಾರ
ಬಸವಣ್ಣ ಧ್ವನಿ ಎತ್ತುವಲಿ
ಸುರಿಯಿತೊ ಧೋಧೋ ಮುಂಗಾರು
ಹರಿಹರ ರಗಳೆ ಹಾಡುವಲಿ
ಕನ್ನಡವಾಯಿತು ಹೊನ್ನಾರು
ಬಂಗಾರದ ಬೆಳೆ ಮೂಡುವಲಿ

ಕುಮಾರವ್ಯಾಸ ಧ್ವನಿ ತೆಗೆದ
ಮರಳಿತು ದ್ವಾಪರ ಕಲಿಯುಗಕೆ
ಲಕುಮೀಶ ಜೈಮಿನಿ ನುಡಿದ
ಕವಿಯಾದವು ಕಿವಿ ಗಮಕಕ್ಕೆ
ಬೀದಿ ಬೀದಿಯಲಿ ಸರ್‍ವಜ್ಞ
ಬದುಕು ಆಯಿತು ಬೆತ್ತಲೆ
ದಾಸರು ಸಂತರು ಸ್ವರವಾದಾಗ
ಎಲ್ಲಿ ಹೋಯಿತೊ ಕತ್ತಲೆ

ಹಾಡಿದೆ ಕೋಗಿಲೆ ಹೊಸದಾಗಿ
ಬೇಂದ್ರೆ ಕುವೆಂಪು ರಾಗದಲಿ
ಕುಣಿದಿದೆ ನವಿಲು ನಲಿವಾಗಿ
ನಿತ್ಯೋತ್ಸವದ ಗಾಳಿಯಲಿ
ಹಾಡಿದೆ ಜನಪದ ಕೆಂಪಾಗಿ
ತಗ್ಗು ದಿಣ್ಣೆ ಸಮ ಮಾಡುತಲಿ
ಇಟ್ಟುಕೊಂಡು ಹೊಸ ಎಚ್ಚರ
ಸಂಭ್ರಮಿಸಿದೆ ಕುಣಿದಾಡುತಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಂಪು
Next post ಸಬ್ಬಂಬು ರಾತೂರಿ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…