ಸಬ್ಬಂಬು ರಾತೂರಿ

ಸಬ್ಬಂಬು ರಾತೂರಿ ಒಬ್ಬಕ್ಕಿ ನಾ ಇದ್ದ|
ನೀವೆಲ್ಲಿ ಹೋಗಿ ಬಂದ್ರಿಽ| ನೀವೆಲ್ಲಿ ಆಡಿ ಬಂದ್ರಿಽ ||೧||

ಜಾಣಿ | ಬೆಟ್ಟಂಬು ಬ್ಯಾಸಗಿ| ಕಣ್ಣೀಗಿ ನಿದ್ದಿಲ್ಲ|
ತನುಗಾಳಿಗ್ಹೋಗಿದ್ದೇವ| ತನುಗಾಳಿಗ್ಹೋಗಿದ್ದೇವ ||೨||

ಎದಿಯ ಮ್ಯಾಲಿನ ಘಾಯಿ ಎಳಿಯ ಚಂದ್ರಮನಂಗ|
ನೀವೆಲ್ಲಿ ಹಾದು ಬಂದ್ರಿಽ| ನೀವೆಲ್ಲಿ ಹೋಗಿ ಬಂದ್ರಿ ||೩||

ಜಾಣಿ| ಬಾಳಿಽಯ ಬನದಾಗ| ಹಾದು ನಾವ್ಬರುವಾಗ|
ಬಾಳಿಽಯ ಗರಿ ತಾಕ್ಯಾವಽ |ಬಾಳಿಽಯ ಗರಿ ತಾಕ್ಯಾವಽ ||೪||

ಹುಬ್ಬ ಹುಬ್ಬಿನ ಘಾಯಿ ಹುಬ್ಬೆಲ್ಲ ಚ್ಯೂರು ಘಾಯಿ|
ನೀವೆಲ್ಲಿ ಹೋಗಿ ಬಂದ್ರಿಽ | ನೀವೆಲ್ಲಿ ಆಡಿ ಬಂದ್ರಿ ||೫||

ಜಾಣಿ | ತ್ವಾಟಿದಾಗಽ ಇರುವ| ನೀಟುಳ್ಳ ಗಜನಿಂಬಿ|
ಗಜನಿಂಬಿ ಗರಿ ತಾಕ್ಯಾವಽ |ಗಜನಿಂಬಿ ಗರಿ ತಾಕ್ಯಾವಽ ||೬||

ನಾರ್ಯಾರ್ಹಚ್ಹಲ್ಲಪುಡಿ| ನಾರ್ಯಾರ್ಹಚ್ಹಲ್ಲಪುಡಿ|
ನಿಮ್ಹಲ್ಲಿಗ್ಯಾಕ್ಹತ್ಯಾವರೀ| ನಿಮ್ಹಲ್ಲಿಗ್ಯಾಕ್ಹತ್ಯಾವರೀ ||೭||

ಜಾಣಿ| ಗೊಲ್ಲರ ಓಣ್ಯಾಗ ಹಾದು ನಾವ್ಬರುವಾಗ|
ಅವರು ಹಲ್ಲಿಗಿ ತಂದ್ಹಚ್ಚಿದರಽ|ಅವರು ಹಲ್ಲಿಗಿ ತಂದ್ಹಚ್ಚಿದರ ||೮||

ಹತ್ತ ವಾರಿಽನ ಹೂವಿನಽ ಶಾಲ್ಗೋಳು|
ಮತ್ತ್ಯಾಕ ಮಾಸಿದವರಿ| ಮತ್ತ್ಯಾಕ ಬೆವತಿದವರಿ ||೯||

ಜಾಣಿ| ಗರಡಿಽಯ ಮನಿಯಾಗ| ಸಗತಿ ನಾ ಹೊಡಿಯಾಗ|
ಕಿರಿಬೆವರ ಬಿಟ್ಟಿದಾವಽ| ಕಿರಿಬೆವರ ಬಿಟ್ಟಿದಾವ ||೧೦||

ಹತ್ತ ವಾರಿಽನ ಮುತ್ತಿಽನ ನಡಕಟ್ಟ|
ಮತ್ತ್ಯಾಕ ಮಾಸಿದವರಿ| ಮತ್ತ್ಯಾಕ ಬೆವತಿದವರಿ ||೧೧||

ಜಾಣಿ| ಚೆಂಡಾಟ ನಾಡಿದಾಗ| ಕೃಷ್ಣರು ಬಂದ್ಹಿಡಿಯಾಗ|
ಬಿದ್ದಲ್ಲಿ ಮಾಸಿದಾವಽ| ಬಿದ್ದಲ್ಲಿ ಮಾಸಿದಾವ ||೧೨||

ಎಷ್ಟೆಂತ ಹೇಳಲಿ ಎಷ್ಟೆಂತ ಕೇಳೂತಿ|
ಕೃಷ್ಣರ ದೇಶಕ್ಹೋಗಿದ್ದೇವಽ| ಕೃಷ್ಣರ ದೇಶಕ್ಹೋಗಿದ್ದೇವಽ |೧೩||

ಭಾಳ ಭಾಳ ಮಾತಾಡತೀದಿ ಬಾಯ್‌ ಪಾಟ್ಲೆ ಬೈತೀದಿ|
ರಂಗಽಗಿ ಬಂದಿ ನೀನು| ಭಾಳ ಪೆಟ್ಟಿಽಗಿ ಬಂದಿ ನೀನು ||೧೪||

ಊರ ಹೊರಗಿನ ನಿಷ್ಠುಳ್ಹಣಮನ ಮುಂದ|
ಆಣಿ ಮಾಡುಣು ನಡಿಯ| ಆಣಿ ಮಾಡೂಣು ನಡಿಯ ||೧೫||
*****

ಹಿಂದಿನ ಹಾಡಿನಂತೆ ಇದರಲ್ಲಾದರೂ ಕ್ರಮದಿಂದ ಪ್ರಶ್ನೋತ್ತರಗಳಿವೆ. ಇಂಥದೊಂದು ಹಾಡು ಗೀತಗೋವಿಂದದಲ್ಲಿದೆ. (“ರಜನಿ ಜನಿತ ಗುರು ಜಾಗರ”.) ರಸಿಕರಿಗೆ ಈ ಹಾಡಿನ ರಹಸ್ಯವು ಸ್ಪಷ್ಟನೇ ಇದೆ. ರೂಢ ಶಬ್ದಗಳ ಅರ್ಥವನ್ನು ಮಾತ್ರ ಇಲ್ಲಿ ಹೇಳಿದೆ.

ಛಂದಸ್ಸು:- ತ್ರಿಪದಿಗೆ ಸಮೀಪನಾದುದು.

ಶಬ್ದಪ್ರಯೋಗಗಳು:– ಸಬ್ಬಂಬು ರಾತೂರಿ = ಕಟ್ಟಿರುಳು, ಬೆಟ್ಟೆಂಬು ಬ್ಯಾಸೀಗಿ=ಕಡುಬೇಸಗೆ. ತನುಗಾಳಿ=ತನುವುಳ್ಳ ಗಾಳಿ ಅಥವಾ ತಂಗಾಳಿ. ಘಾಯ=ಗಾಯ. ಚ್ಯೂರು=ಚಿವುರು. ಹತ್ತು ವಾರ=ಹತ್ತು ಗಜ. ಸಗತಿ ಹೊಡಿ=ಸಾಮು ತೆಗೆ. ಕೃಷ್ಣರು=ಕೃಷ್ಣನಂಥ ಗೆಳೆಯರು(?). ಬಾಯ್‌ ಪಾಟ್ಲೆ=ಮುಖೋದ್ಗತವಾಗಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮತ್ತೆ ಕಾವ್ಯ ಕೋಗಿಲೆ
Next post ಲೈಂಗಿಕ ಆಸಕ್ತಿ ಕೆರಳಿಸುವ “ವಯಾಗ್ರ” ಮಾತ್ರೆ

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…