Home / ಕವನ / ಕವಿತೆ / ಸಬ್ಬಂಬು ರಾತೂರಿ

ಸಬ್ಬಂಬು ರಾತೂರಿ

ಸಬ್ಬಂಬು ರಾತೂರಿ ಒಬ್ಬಕ್ಕಿ ನಾ ಇದ್ದ|
ನೀವೆಲ್ಲಿ ಹೋಗಿ ಬಂದ್ರಿಽ| ನೀವೆಲ್ಲಿ ಆಡಿ ಬಂದ್ರಿಽ ||೧||

ಜಾಣಿ | ಬೆಟ್ಟಂಬು ಬ್ಯಾಸಗಿ| ಕಣ್ಣೀಗಿ ನಿದ್ದಿಲ್ಲ|
ತನುಗಾಳಿಗ್ಹೋಗಿದ್ದೇವ| ತನುಗಾಳಿಗ್ಹೋಗಿದ್ದೇವ ||೨||

ಎದಿಯ ಮ್ಯಾಲಿನ ಘಾಯಿ ಎಳಿಯ ಚಂದ್ರಮನಂಗ|
ನೀವೆಲ್ಲಿ ಹಾದು ಬಂದ್ರಿಽ| ನೀವೆಲ್ಲಿ ಹೋಗಿ ಬಂದ್ರಿ ||೩||

ಜಾಣಿ| ಬಾಳಿಽಯ ಬನದಾಗ| ಹಾದು ನಾವ್ಬರುವಾಗ|
ಬಾಳಿಽಯ ಗರಿ ತಾಕ್ಯಾವಽ |ಬಾಳಿಽಯ ಗರಿ ತಾಕ್ಯಾವಽ ||೪||

ಹುಬ್ಬ ಹುಬ್ಬಿನ ಘಾಯಿ ಹುಬ್ಬೆಲ್ಲ ಚ್ಯೂರು ಘಾಯಿ|
ನೀವೆಲ್ಲಿ ಹೋಗಿ ಬಂದ್ರಿಽ | ನೀವೆಲ್ಲಿ ಆಡಿ ಬಂದ್ರಿ ||೫||

ಜಾಣಿ | ತ್ವಾಟಿದಾಗಽ ಇರುವ| ನೀಟುಳ್ಳ ಗಜನಿಂಬಿ|
ಗಜನಿಂಬಿ ಗರಿ ತಾಕ್ಯಾವಽ |ಗಜನಿಂಬಿ ಗರಿ ತಾಕ್ಯಾವಽ ||೬||

ನಾರ್ಯಾರ್ಹಚ್ಹಲ್ಲಪುಡಿ| ನಾರ್ಯಾರ್ಹಚ್ಹಲ್ಲಪುಡಿ|
ನಿಮ್ಹಲ್ಲಿಗ್ಯಾಕ್ಹತ್ಯಾವರೀ| ನಿಮ್ಹಲ್ಲಿಗ್ಯಾಕ್ಹತ್ಯಾವರೀ ||೭||

ಜಾಣಿ| ಗೊಲ್ಲರ ಓಣ್ಯಾಗ ಹಾದು ನಾವ್ಬರುವಾಗ|
ಅವರು ಹಲ್ಲಿಗಿ ತಂದ್ಹಚ್ಚಿದರಽ|ಅವರು ಹಲ್ಲಿಗಿ ತಂದ್ಹಚ್ಚಿದರ ||೮||

ಹತ್ತ ವಾರಿಽನ ಹೂವಿನಽ ಶಾಲ್ಗೋಳು|
ಮತ್ತ್ಯಾಕ ಮಾಸಿದವರಿ| ಮತ್ತ್ಯಾಕ ಬೆವತಿದವರಿ ||೯||

ಜಾಣಿ| ಗರಡಿಽಯ ಮನಿಯಾಗ| ಸಗತಿ ನಾ ಹೊಡಿಯಾಗ|
ಕಿರಿಬೆವರ ಬಿಟ್ಟಿದಾವಽ| ಕಿರಿಬೆವರ ಬಿಟ್ಟಿದಾವ ||೧೦||

ಹತ್ತ ವಾರಿಽನ ಮುತ್ತಿಽನ ನಡಕಟ್ಟ|
ಮತ್ತ್ಯಾಕ ಮಾಸಿದವರಿ| ಮತ್ತ್ಯಾಕ ಬೆವತಿದವರಿ ||೧೧||

ಜಾಣಿ| ಚೆಂಡಾಟ ನಾಡಿದಾಗ| ಕೃಷ್ಣರು ಬಂದ್ಹಿಡಿಯಾಗ|
ಬಿದ್ದಲ್ಲಿ ಮಾಸಿದಾವಽ| ಬಿದ್ದಲ್ಲಿ ಮಾಸಿದಾವ ||೧೨||

ಎಷ್ಟೆಂತ ಹೇಳಲಿ ಎಷ್ಟೆಂತ ಕೇಳೂತಿ|
ಕೃಷ್ಣರ ದೇಶಕ್ಹೋಗಿದ್ದೇವಽ| ಕೃಷ್ಣರ ದೇಶಕ್ಹೋಗಿದ್ದೇವಽ |೧೩||

ಭಾಳ ಭಾಳ ಮಾತಾಡತೀದಿ ಬಾಯ್‌ ಪಾಟ್ಲೆ ಬೈತೀದಿ|
ರಂಗಽಗಿ ಬಂದಿ ನೀನು| ಭಾಳ ಪೆಟ್ಟಿಽಗಿ ಬಂದಿ ನೀನು ||೧೪||

ಊರ ಹೊರಗಿನ ನಿಷ್ಠುಳ್ಹಣಮನ ಮುಂದ|
ಆಣಿ ಮಾಡುಣು ನಡಿಯ| ಆಣಿ ಮಾಡೂಣು ನಡಿಯ ||೧೫||
*****

ಹಿಂದಿನ ಹಾಡಿನಂತೆ ಇದರಲ್ಲಾದರೂ ಕ್ರಮದಿಂದ ಪ್ರಶ್ನೋತ್ತರಗಳಿವೆ. ಇಂಥದೊಂದು ಹಾಡು ಗೀತಗೋವಿಂದದಲ್ಲಿದೆ. (“ರಜನಿ ಜನಿತ ಗುರು ಜಾಗರ”.) ರಸಿಕರಿಗೆ ಈ ಹಾಡಿನ ರಹಸ್ಯವು ಸ್ಪಷ್ಟನೇ ಇದೆ. ರೂಢ ಶಬ್ದಗಳ ಅರ್ಥವನ್ನು ಮಾತ್ರ ಇಲ್ಲಿ ಹೇಳಿದೆ.

ಛಂದಸ್ಸು:- ತ್ರಿಪದಿಗೆ ಸಮೀಪನಾದುದು.

ಶಬ್ದಪ್ರಯೋಗಗಳು:– ಸಬ್ಬಂಬು ರಾತೂರಿ = ಕಟ್ಟಿರುಳು, ಬೆಟ್ಟೆಂಬು ಬ್ಯಾಸೀಗಿ=ಕಡುಬೇಸಗೆ. ತನುಗಾಳಿ=ತನುವುಳ್ಳ ಗಾಳಿ ಅಥವಾ ತಂಗಾಳಿ. ಘಾಯ=ಗಾಯ. ಚ್ಯೂರು=ಚಿವುರು. ಹತ್ತು ವಾರ=ಹತ್ತು ಗಜ. ಸಗತಿ ಹೊಡಿ=ಸಾಮು ತೆಗೆ. ಕೃಷ್ಣರು=ಕೃಷ್ಣನಂಥ ಗೆಳೆಯರು(?). ಬಾಯ್‌ ಪಾಟ್ಲೆ=ಮುಖೋದ್ಗತವಾಗಿ.

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...