Home / ಕವನ / ಕವಿತೆ / ಸಬ್ಬಂಬು ರಾತೂರಿ

ಸಬ್ಬಂಬು ರಾತೂರಿ

ಸಬ್ಬಂಬು ರಾತೂರಿ ಒಬ್ಬಕ್ಕಿ ನಾ ಇದ್ದ|
ನೀವೆಲ್ಲಿ ಹೋಗಿ ಬಂದ್ರಿಽ| ನೀವೆಲ್ಲಿ ಆಡಿ ಬಂದ್ರಿಽ ||೧||

ಜಾಣಿ | ಬೆಟ್ಟಂಬು ಬ್ಯಾಸಗಿ| ಕಣ್ಣೀಗಿ ನಿದ್ದಿಲ್ಲ|
ತನುಗಾಳಿಗ್ಹೋಗಿದ್ದೇವ| ತನುಗಾಳಿಗ್ಹೋಗಿದ್ದೇವ ||೨||

ಎದಿಯ ಮ್ಯಾಲಿನ ಘಾಯಿ ಎಳಿಯ ಚಂದ್ರಮನಂಗ|
ನೀವೆಲ್ಲಿ ಹಾದು ಬಂದ್ರಿಽ| ನೀವೆಲ್ಲಿ ಹೋಗಿ ಬಂದ್ರಿ ||೩||

ಜಾಣಿ| ಬಾಳಿಽಯ ಬನದಾಗ| ಹಾದು ನಾವ್ಬರುವಾಗ|
ಬಾಳಿಽಯ ಗರಿ ತಾಕ್ಯಾವಽ |ಬಾಳಿಽಯ ಗರಿ ತಾಕ್ಯಾವಽ ||೪||

ಹುಬ್ಬ ಹುಬ್ಬಿನ ಘಾಯಿ ಹುಬ್ಬೆಲ್ಲ ಚ್ಯೂರು ಘಾಯಿ|
ನೀವೆಲ್ಲಿ ಹೋಗಿ ಬಂದ್ರಿಽ | ನೀವೆಲ್ಲಿ ಆಡಿ ಬಂದ್ರಿ ||೫||

ಜಾಣಿ | ತ್ವಾಟಿದಾಗಽ ಇರುವ| ನೀಟುಳ್ಳ ಗಜನಿಂಬಿ|
ಗಜನಿಂಬಿ ಗರಿ ತಾಕ್ಯಾವಽ |ಗಜನಿಂಬಿ ಗರಿ ತಾಕ್ಯಾವಽ ||೬||

ನಾರ್ಯಾರ್ಹಚ್ಹಲ್ಲಪುಡಿ| ನಾರ್ಯಾರ್ಹಚ್ಹಲ್ಲಪುಡಿ|
ನಿಮ್ಹಲ್ಲಿಗ್ಯಾಕ್ಹತ್ಯಾವರೀ| ನಿಮ್ಹಲ್ಲಿಗ್ಯಾಕ್ಹತ್ಯಾವರೀ ||೭||

ಜಾಣಿ| ಗೊಲ್ಲರ ಓಣ್ಯಾಗ ಹಾದು ನಾವ್ಬರುವಾಗ|
ಅವರು ಹಲ್ಲಿಗಿ ತಂದ್ಹಚ್ಚಿದರಽ|ಅವರು ಹಲ್ಲಿಗಿ ತಂದ್ಹಚ್ಚಿದರ ||೮||

ಹತ್ತ ವಾರಿಽನ ಹೂವಿನಽ ಶಾಲ್ಗೋಳು|
ಮತ್ತ್ಯಾಕ ಮಾಸಿದವರಿ| ಮತ್ತ್ಯಾಕ ಬೆವತಿದವರಿ ||೯||

ಜಾಣಿ| ಗರಡಿಽಯ ಮನಿಯಾಗ| ಸಗತಿ ನಾ ಹೊಡಿಯಾಗ|
ಕಿರಿಬೆವರ ಬಿಟ್ಟಿದಾವಽ| ಕಿರಿಬೆವರ ಬಿಟ್ಟಿದಾವ ||೧೦||

ಹತ್ತ ವಾರಿಽನ ಮುತ್ತಿಽನ ನಡಕಟ್ಟ|
ಮತ್ತ್ಯಾಕ ಮಾಸಿದವರಿ| ಮತ್ತ್ಯಾಕ ಬೆವತಿದವರಿ ||೧೧||

ಜಾಣಿ| ಚೆಂಡಾಟ ನಾಡಿದಾಗ| ಕೃಷ್ಣರು ಬಂದ್ಹಿಡಿಯಾಗ|
ಬಿದ್ದಲ್ಲಿ ಮಾಸಿದಾವಽ| ಬಿದ್ದಲ್ಲಿ ಮಾಸಿದಾವ ||೧೨||

ಎಷ್ಟೆಂತ ಹೇಳಲಿ ಎಷ್ಟೆಂತ ಕೇಳೂತಿ|
ಕೃಷ್ಣರ ದೇಶಕ್ಹೋಗಿದ್ದೇವಽ| ಕೃಷ್ಣರ ದೇಶಕ್ಹೋಗಿದ್ದೇವಽ |೧೩||

ಭಾಳ ಭಾಳ ಮಾತಾಡತೀದಿ ಬಾಯ್‌ ಪಾಟ್ಲೆ ಬೈತೀದಿ|
ರಂಗಽಗಿ ಬಂದಿ ನೀನು| ಭಾಳ ಪೆಟ್ಟಿಽಗಿ ಬಂದಿ ನೀನು ||೧೪||

ಊರ ಹೊರಗಿನ ನಿಷ್ಠುಳ್ಹಣಮನ ಮುಂದ|
ಆಣಿ ಮಾಡುಣು ನಡಿಯ| ಆಣಿ ಮಾಡೂಣು ನಡಿಯ ||೧೫||
*****

ಹಿಂದಿನ ಹಾಡಿನಂತೆ ಇದರಲ್ಲಾದರೂ ಕ್ರಮದಿಂದ ಪ್ರಶ್ನೋತ್ತರಗಳಿವೆ. ಇಂಥದೊಂದು ಹಾಡು ಗೀತಗೋವಿಂದದಲ್ಲಿದೆ. (“ರಜನಿ ಜನಿತ ಗುರು ಜಾಗರ”.) ರಸಿಕರಿಗೆ ಈ ಹಾಡಿನ ರಹಸ್ಯವು ಸ್ಪಷ್ಟನೇ ಇದೆ. ರೂಢ ಶಬ್ದಗಳ ಅರ್ಥವನ್ನು ಮಾತ್ರ ಇಲ್ಲಿ ಹೇಳಿದೆ.

ಛಂದಸ್ಸು:- ತ್ರಿಪದಿಗೆ ಸಮೀಪನಾದುದು.

ಶಬ್ದಪ್ರಯೋಗಗಳು:– ಸಬ್ಬಂಬು ರಾತೂರಿ = ಕಟ್ಟಿರುಳು, ಬೆಟ್ಟೆಂಬು ಬ್ಯಾಸೀಗಿ=ಕಡುಬೇಸಗೆ. ತನುಗಾಳಿ=ತನುವುಳ್ಳ ಗಾಳಿ ಅಥವಾ ತಂಗಾಳಿ. ಘಾಯ=ಗಾಯ. ಚ್ಯೂರು=ಚಿವುರು. ಹತ್ತು ವಾರ=ಹತ್ತು ಗಜ. ಸಗತಿ ಹೊಡಿ=ಸಾಮು ತೆಗೆ. ಕೃಷ್ಣರು=ಕೃಷ್ಣನಂಥ ಗೆಳೆಯರು(?). ಬಾಯ್‌ ಪಾಟ್ಲೆ=ಮುಖೋದ್ಗತವಾಗಿ.

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...