Home / ಲೇಖನ / ವಿಜ್ಞಾನ / ಲೈಂಗಿಕ ಆಸಕ್ತಿ ಕೆರಳಿಸುವ “ವಯಾಗ್ರ” ಮಾತ್ರೆ

ಲೈಂಗಿಕ ಆಸಕ್ತಿ ಕೆರಳಿಸುವ “ವಯಾಗ್ರ” ಮಾತ್ರೆ

ಕೆಲವು ಸಲ ಪ್ರಾಪ್ತ ನಡುವಯಸ್ಸಿನ ಪುರುಷರಿಗೆ ಲೈಂಗಾಸಕ್ತಿಕುಂದಿರುತ್ತದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ನಿರುತ್ಸಾಹ, ಜನನೇಂದ್ರಿಯ ಸಪ್ಪೆತನ, ಇವುಗಳಾಗವುದು ಸಹಜ. ಇದಕ್ಕೆ ಕಾರಣ ವಿಪರೀತ ಚಿಂತೆ, ಯೋಚನೆಗಳು, ಪೌಷ್ಠಿಕ ಆಹಾರದ ಕೊರತೆ, ಅಪರಾಧಿ ಪ್ರಜ್ಞೆ ಇವುಗಳಿಂದಾಗಿ ಪುರುಷರನ್ನು ನಿಶಕ್ತಿಗೊಳಗಾಗುತ್ತದೆ. ಈ ಬಗೆಗೆ ಚಿಂತಿಸುವಂತಾಗುತ್ತದೆ. ಇಂಥವರು ಉದ್ರೇಕಗೊಂಡು, ಲೈಂಗಿಕ ಕ್ರಿಯೆಯಲ್ಲಿ ಯಶಸ್ವಿಯಾಗಲು ಇತ್ತೀಚೆಗೆ “ವಯಾಗ್ರ” ಎಂಬ ಮಾತ್ರೆಯನ್ನು ಕಂಡುಹಿಡಿಯಲಾಗಿದೆ. ಮಾತ್ರವಲ್ಲ ಈ ಮಾತ್ರೆಯನ್ನು ಕಂಡು ಹಿಡಿದವರಿಗೆ ೧೯೯೮ರಲ್ಲಿ ನೊಬೆಲ್ ಪುರಸ್ಕಾರವನ್ನು ಸಹ ನೀಡಲಾಗಿದೆ. ಪುರುಷರ ಲೈಂಗಿಕ ದುರ್ಬಲತೆಯನ್ನು ನಿವಾರಿಸಲು, ಜನನೇಂದ್ರಿಯವನ್ನು ಉದ್ರೇಕಗೊಳಿಸಲು ಈ ಮಾತ್ರೆಯನ್ನು ಕಂಡು ಹಿಡಿಯಲಾಗಿದ್ದು ಆಂಗ್ಲ ಭಾಷೆಯ VIGORI (ಶಕ್ತಿ) ಮತ್ತು NIAGAR (ವಿಖ್ಯಾತ ನಯಾಗಾರ ಜಲಪಾತ) ಗಳ ಸಂಯುಕ್ತರೂಪವಾಗಿದೆ. VIAGAR ಪೈಜರ್ ಸಂಸ್ಥೆಯ ವಿಜ್ಞಾನಿಗಳ ಕೊಡುಗೆಯಾಗಿದೆ. ಇವರು ಈ ಮೊದಲು ‘ಸಿಲ್ಡೆನಾಶಿಲ್’ ಎಂಬ ಮದ್ದನ್ನು ಮೂಲತಃ ಅತಿರಕ್ತದೊತ್ತಡವನ್ನು ತಗ್ಗಿಸಲು ಹಾಗೂ ಹೃದಯಶೂಲೆಯನ್ನು ನಿಗ್ರಹಿಸಲು ತಯಾರಿಸಿದ್ದರು. ಈ ಮದ್ದು ಲೈಂಗಿಕ ಸಾಮರ್‍ಥ್ಯವನ್ನು ಹೆಚ್ಚಿಸಲೂ ಸಹ ಅನುಕೂಲವೆಂಬ ಸತ್ಯವನ್ನು ಕಂಡು ಒಂದು ವಿಚಿತ್ರ ಸನ್ನಿವೇಶದಲ್ಲಿ ಪ್ರಯೋಗಾರ್‍ಥ. ಸಿಲ್ಟೆಸಾಫಿಲ್, ಅನ್ನು ಕೆಲವರು ಸ್ವಯಂ ಸೇವಕರಿಗೆ ನೀಡಲಾಗಿತ್ತು. ಈ ಮಾತ್ರೆಗಳು ಅವರ ಲೈಂಗಿಕ ಸಾಮರ್‍ಥ್ಯವನ್ನು ಹೆಚ್ಚಿಸಲು ನೆರವಾದವು. ಅಂದೆ ಸಿಲ್ಡೆನಾಷಿಲ್ ಮಾತ್ರೆಗೆ ‘ವಯಾಗ್ರ’ ಎಂದು ಕರೆಯಲಾಯಿತು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...