ಅಪ್ಸರೆಯ ಅಳಲು

ಚಿತ್ತ ಚಿತ್ತಾರದ ಭಾವಭಂಗಿಯಲಿ
ಸೆಳವಿಗೆದುರಾಗಿ ಬಿಂಕಬಿನ್ನಾಣಗಳಲಿ ಸುಳಿದಾಡಿ
ಮೇಲೇರಿ ಇಳಿಜಾರಕೆ ತೇಲಿಬಿದ್ದು
ಒಡಲಾಳಸೇರಿ ಕ್ಷಣಾರ್ಧದಲಿ ನೆಗೆದು
ತನ್ನೊಳಗೇ ಸ್ವರ್‍ಗ ಇಳಿಸಿಕೊಂಡು
ಕಣ್ಮನ ಸೆಳೆವ ಅಪ್ಸರೆ

ಹಂಗಿನರಮನೆಯ ಅಕ್ವೇರಿಯಂನೊಳಗೆ ಹೊರಳಾಟ
ಶುದ್ಧನೀರು ಗಾಳಿ ಉದುರಿಸಿದ ಪುಡಿಯೂಟ
ಸಹಜ ತೇಲುವಿಕೆಗೆ ಬಿಗಿಜಡತ್ವ
ಚೆಲ್ಲಾಟ ಚಿನ್ನಾಟಕೆ ಬೇಲಿ

ಪಿಳಿಪಿಳಿ ಕಣ್ಣುಬಿಟ್ಟದ್ದೂ ಕಣ್ಣೀರಿಟ್ಟದ್ದೂ
ನೀರೊಳಗೆ ಇಂಗಿಹೋಗಿ ಕೇಳಿಸದಂತೆ
ಕಾಣಿಸದಂತೆ ಅದೃಶ್ಯ
ಮಾತುಮೌನ ನಿರ್ಲಿಪ್ತ ಆವರಣ

ಬರುವೆಯಾ ಸೂರ್‍ಯ ಚಂದ್ರ ನೀನಾದರೂ ಬಾ
ಹಗಲುರಾತ್ರಿ ಹಂಬಲಿಸಿದ ಎದೆಗೂಡು ನಿಶ್ಯಬ್ದ…
ಅಪರಂಜಿ ಅರಮನೆಯ ಚೌಕಟ್ಟಿನೊಳಹೊರಗೆಲ್ಲ
ದೀಪಗಳ ಸರಮಾಲೆ ಮನದಾಳ ಕತ್ತಲೆಯ ಗೂಡು
ನೋವು ಹತಾಷೆ ಮಡುಗಟ್ಟಿ
ಕಣ್ಣುರೆಪ್ಪೆ ಮುಚ್ಚಿದರೂ ಒತ್ತಿದರೂ
ನಿದ್ದೆಯ ಸುಳುವಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೬
Next post ಕಳ್ಳರ ಕೂಟ – ೩

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…